<p><strong>ನವದೆಹಲಿ</strong>: ಕಾಂಗ್ರೆಸ್ನ ಆನ್ಲೈನ್ ಕ್ರೌಡ್ಫಂಡಿಂಗ್ ಜಾರಿಯಾಗಿ ತಿಂಗಳು ಕಳೆದರೂ ವೇಗ ಪಡೆದಿಲ್ಲ. ಮೂರು ಲಕ್ಷ ದಾನಿಗಳಿಂದ ಇದುವರೆಗೆ ಕೇವಲ ₹16 ಕೋಟಿ ಅಷ್ಟೇ ದೇಣಿಗೆ ಸಂಗ್ರಹವಾಗಿದೆ.</p>.<p>ದೇಶದಾದ್ಯಂತ ಕಳೆದ ಡಿ.28ರಿಂದ ಆರಂಭಿಸಲು ಯೋಜಿಸಿದ್ದ, ಪ್ರತಿ ಬೂತ್ನ ಹತ್ತು ಮನೆಗಳಿಂದ ಕನಿಷ್ಠ ತಲಾ ₹138 ದೇಣಿಗೆ ಸಂಗ್ರಹಿಸುವ ಯೋಜನೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.</p>.<p>ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಹಿಯುಳ್ಳ ಟೀಶರ್ಟ್, ಟೋಪಿ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಿಸುವ ಯೋಜನೆಗೂ ಚಾಲನೆ ಸಿಕ್ಕಿಲ್ಲ ಎನ್ನಲಾಗಿದೆ.</p>.<p>ಎಐಸಿಸಿಯ ಪದಾಧಿಕಾರಿಗಳು ಸೇರಿದಂತೆ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು ಕನಿಷ್ಠ ತಲಾ ₹1,380 ದೇಣಿಗೆ ನೀಡುವಂತೆ ಪಕ್ಷವು ಕೋರಿತ್ತು. ಈ ಯೋಜನೆಗಳ ಅನುಷ್ಠಾನಕ್ಕಾಗಿಯೇ ಖಜಾಂಚಿಯಾಗಿ ಅಜಯ್ ಮಾಕೆನ್ ಅವರನ್ನು ನೇಮಿಸಿದ್ದರೂ, ದೇಣಿಗೆ ಸಂಗ್ರಹ ಪ್ರಕ್ರಿಯೆ ಚುರುಕುಗೊಂಡಿಲ್ಲ.</p>.<p>‘ಪಕ್ಷದ 138 ನಾಯಕರನ್ನು ಜೈಪುರದಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಸಚಿನ್ ಪೈಲಟ್, ಅವರೆಲ್ಲರಿಂದಲೂ ತಲಾ ₹1.38 ಲಕ್ಷವನ್ನು ದೇಣಿಗೆ ಕೊಡಿಸಿದ್ದಾರೆ. ದೇಣಿಗೆ ಕೊಡುವುದರಲ್ಲಿ ರಾಜಸ್ಥಾನ ಘಟಕ ಮುಂಚೂಣಿಯಲ್ಲಿದೆ’ ಎಂದು ಮಾಕೆನ್ ಮಂಗಳವಾರ ‘ಎಕ್ಸ್’ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ. </p>.<p>‘ಈ ಅಭಿಯಾನವು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಸ್ವಚ್ಛ ರಾಜಕಾರಣದ ಮಾರ್ಗವನ್ನು ತೋರಿಸಿದೆ. ಇದು ಯಶಸ್ವಿಯಾಗಿದೆ. ರಾಜಸ್ಥಾನದ 181 ಜನರು ತಲಾ ₹ 1ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದಾರೆ. ಹರಿಯಾಣ (73), ಪಂಜಾಬ್ (38), ಮಹಾರಾಷ್ಟ್ರ (31), ಬಿಹಾರದ 28 ಜನರು ₹1 ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದರೆ, ಕರ್ನಾಟಕದಿಂದ 11 ಜನರು ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲೂ ನಿಧಾನಗತಿಯ ದೇಣಿಗೆ ಸಂಗ್ರಹದ ಬಗ್ಗೆ ಹಲವರು ರಾಹುಲ್ ಗಾಂಧಿ ಬಳಿ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.</p>.<p>ಕಾಂಗ್ರೆಸ್ ದೇಣಿಗೆ ಸಂಗ್ರಹಕ್ಕಾಗಿ ವೆಬ್ಸೈಟ್ ಆರಂಭಿಸಿದ ಮೊದಲ ಎರಡು ದಿನಗಳಲ್ಲೇ 20,400 ಬಾರಿ ಸೈಬರ್ ದಾಳಿ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕಾಂಗ್ರೆಸ್ನ ಆನ್ಲೈನ್ ಕ್ರೌಡ್ಫಂಡಿಂಗ್ ಜಾರಿಯಾಗಿ ತಿಂಗಳು ಕಳೆದರೂ ವೇಗ ಪಡೆದಿಲ್ಲ. ಮೂರು ಲಕ್ಷ ದಾನಿಗಳಿಂದ ಇದುವರೆಗೆ ಕೇವಲ ₹16 ಕೋಟಿ ಅಷ್ಟೇ ದೇಣಿಗೆ ಸಂಗ್ರಹವಾಗಿದೆ.</p>.<p>ದೇಶದಾದ್ಯಂತ ಕಳೆದ ಡಿ.28ರಿಂದ ಆರಂಭಿಸಲು ಯೋಜಿಸಿದ್ದ, ಪ್ರತಿ ಬೂತ್ನ ಹತ್ತು ಮನೆಗಳಿಂದ ಕನಿಷ್ಠ ತಲಾ ₹138 ದೇಣಿಗೆ ಸಂಗ್ರಹಿಸುವ ಯೋಜನೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.</p>.<p>ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಹಿಯುಳ್ಳ ಟೀಶರ್ಟ್, ಟೋಪಿ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಿಸುವ ಯೋಜನೆಗೂ ಚಾಲನೆ ಸಿಕ್ಕಿಲ್ಲ ಎನ್ನಲಾಗಿದೆ.</p>.<p>ಎಐಸಿಸಿಯ ಪದಾಧಿಕಾರಿಗಳು ಸೇರಿದಂತೆ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು ಕನಿಷ್ಠ ತಲಾ ₹1,380 ದೇಣಿಗೆ ನೀಡುವಂತೆ ಪಕ್ಷವು ಕೋರಿತ್ತು. ಈ ಯೋಜನೆಗಳ ಅನುಷ್ಠಾನಕ್ಕಾಗಿಯೇ ಖಜಾಂಚಿಯಾಗಿ ಅಜಯ್ ಮಾಕೆನ್ ಅವರನ್ನು ನೇಮಿಸಿದ್ದರೂ, ದೇಣಿಗೆ ಸಂಗ್ರಹ ಪ್ರಕ್ರಿಯೆ ಚುರುಕುಗೊಂಡಿಲ್ಲ.</p>.<p>‘ಪಕ್ಷದ 138 ನಾಯಕರನ್ನು ಜೈಪುರದಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಸಚಿನ್ ಪೈಲಟ್, ಅವರೆಲ್ಲರಿಂದಲೂ ತಲಾ ₹1.38 ಲಕ್ಷವನ್ನು ದೇಣಿಗೆ ಕೊಡಿಸಿದ್ದಾರೆ. ದೇಣಿಗೆ ಕೊಡುವುದರಲ್ಲಿ ರಾಜಸ್ಥಾನ ಘಟಕ ಮುಂಚೂಣಿಯಲ್ಲಿದೆ’ ಎಂದು ಮಾಕೆನ್ ಮಂಗಳವಾರ ‘ಎಕ್ಸ್’ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ. </p>.<p>‘ಈ ಅಭಿಯಾನವು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಸ್ವಚ್ಛ ರಾಜಕಾರಣದ ಮಾರ್ಗವನ್ನು ತೋರಿಸಿದೆ. ಇದು ಯಶಸ್ವಿಯಾಗಿದೆ. ರಾಜಸ್ಥಾನದ 181 ಜನರು ತಲಾ ₹ 1ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದಾರೆ. ಹರಿಯಾಣ (73), ಪಂಜಾಬ್ (38), ಮಹಾರಾಷ್ಟ್ರ (31), ಬಿಹಾರದ 28 ಜನರು ₹1 ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದರೆ, ಕರ್ನಾಟಕದಿಂದ 11 ಜನರು ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲೂ ನಿಧಾನಗತಿಯ ದೇಣಿಗೆ ಸಂಗ್ರಹದ ಬಗ್ಗೆ ಹಲವರು ರಾಹುಲ್ ಗಾಂಧಿ ಬಳಿ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.</p>.<p>ಕಾಂಗ್ರೆಸ್ ದೇಣಿಗೆ ಸಂಗ್ರಹಕ್ಕಾಗಿ ವೆಬ್ಸೈಟ್ ಆರಂಭಿಸಿದ ಮೊದಲ ಎರಡು ದಿನಗಳಲ್ಲೇ 20,400 ಬಾರಿ ಸೈಬರ್ ದಾಳಿ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>