ಸೇಲಂ: ತಾನು ಸತ್ತರೆ ತನ್ನ ಮಗನಿಗೆ ಕಾಲೇಜು ಫೀ (ಶುಲ್ಕ) ಕಟ್ಟಲು ಪರಿಹಾರ ಹಣ ಸಿಗುತ್ತದೆ ಎಂದು ನಂಬಿ, ತಾಯಿಯೊಬ್ಬಳು ಚಲಿಸುತ್ತಿದ್ದ ಬಸ್ಗೆ ಅಡ್ಡ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 28 ರಂದು ಸೇಲಂನ ಅಗ್ರಹಾರ ರಸ್ತೆಯಲ್ಲಿ ಬಸ್ ಗುದ್ದಿ ಮಹಿಳೆಯೊಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಪಾಪತಿ ಎಂಬ 46 ವರ್ಷದ ಮಹಿಳೆ ಮೃತಪಟ್ಟಿದ್ದರು. ಪಾಪತಿ ಸೇಲಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದರು.
ಈ ಘಟನೆ ಕುರಿತು ಪೊಲೀಸರು ವಿಸ್ತೃತ ತನಿಖೆ ನಡೆಸಿದಾಗ ಹಾಗೂ ಸ್ಥಳದಲ್ಲಿಯ ಸಿಸಿಟಿವಿ ಪುರಾವೆಗಳನ್ನು ಗಮನಿಸಿ ಇದೊಂದು ಆತ್ಮಹತ್ಯೆ ಎಂದು ಹೇಳಿರುವುದಾಗಿ ನ್ಯೂಸ್9ಲೈವ್ ವೆಬ್ಸೈಟ್ ವರದಿ ಮಾಡಿದೆ.