<p><strong>ನವದೆಹಲಿ</strong>: ‘ಆಪರೇಷನ್ ಸಿಂಧೂರದ’ ವೇಳೆ ಪಂಜಾಬ್ನಲ್ಲಿ ಭಾರತೀಯ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ದಾರಿತಪ್ಪಿಸುವ ಚಿತ್ರಗಳನ್ನು ಕೆಲ ಪಾಕಿಸ್ತಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. </p>.<p>ಪರಿಶೀಲನೆ ನಡೆಸದ ಉಪಗ್ರಹ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ತಮ್ಮ ವಿಫಲವಾದ ನಿರೂಪಣೆಯನ್ನು ಮತ್ತೆ ಪ್ರಚಾರ ಪಡಿಸುವ ಉದ್ದೇಶ ಇದರ ಹಿಂದೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ. </p>.<p>ಆದರೆ ಈ ಚಿತ್ರಗಳಲ್ಲಿ ತೋರಿಸಿರುವ ಸ್ಥಳಗಳಲ್ಲಿ ಯಾವುದೇ ರೀತಿಯ ವಿನಾಶ ಅಥವಾ ಹಾನಿ ಆಗಿಲ್ಲ ಎಂಬುದು ಸ್ವತಂತ್ರ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ. </p>.<p>ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕಳೆದ ವರ್ಷದ ಮೇ 7ರಂದು ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿತು. ಈ ಮೂಲಕ ಪಾಕಿಸ್ತಾನದ ಜತೆಗೆ ನಾಲ್ಕು ದಿನಗಳವರೆಗೆ ಸೇನಾ ಸಂಘರ್ಷ ನಡೆದಿತ್ತು. </p>.<p>‘ಕೆಲ ಪಾಕಿಸ್ತಾನಿಯರು ಹತಾಶ ಪ್ರಯತ್ನದ ಭಾಗವಾಗಿ ತಪ್ಪು ಮಾಹಿತಿ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಅದನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ’ ಎಂದು ಸೇನಾ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. </p>.<p>‘ನಿಜವಾದ ದಾಖಲೆಗಳನ್ನು ಪ್ರಸ್ತುತಪಡಿಸುವ ಬದಲಿಗೆ, ಪುರಾವೆಗಳನ್ನು ಸೃಷ್ಟಿಸಲು ನಡೆಸಿರುವ ಯತ್ನವನ್ನು ಇದು ಬಹಿರಂಗಪಡಿಸುತ್ತದೆ. ಏಳು ತಿಂಗಳ ಬಳಿಕ ಹಠಾತ್ತನೆ ಈ ಚಿತ್ರಗಳು ಹೊರಬಂದಿವೆ. ಆದರೆ ಅವುಗಳ ನಿಖರ ಕಾಲಾವಧಿಯ ಪರಿಶೀಲನೆ ಆಗಿಲ್ಲ. ಉಪಗ್ರಹ ಮೂಲದ ವಿವರಗಳನ್ನು ತಿಳಿಸಲಾಗಿಲ್ಲ. ಜತೆಗೆ ಅವು ದೃಢೀಕೃತ ಚಿತ್ರಗಳೂ ಅಲ್ಲ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಆಪರೇಷನ್ ಸಿಂಧೂರದ’ ವೇಳೆ ಪಂಜಾಬ್ನಲ್ಲಿ ಭಾರತೀಯ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ದಾರಿತಪ್ಪಿಸುವ ಚಿತ್ರಗಳನ್ನು ಕೆಲ ಪಾಕಿಸ್ತಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. </p>.<p>ಪರಿಶೀಲನೆ ನಡೆಸದ ಉಪಗ್ರಹ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ತಮ್ಮ ವಿಫಲವಾದ ನಿರೂಪಣೆಯನ್ನು ಮತ್ತೆ ಪ್ರಚಾರ ಪಡಿಸುವ ಉದ್ದೇಶ ಇದರ ಹಿಂದೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ. </p>.<p>ಆದರೆ ಈ ಚಿತ್ರಗಳಲ್ಲಿ ತೋರಿಸಿರುವ ಸ್ಥಳಗಳಲ್ಲಿ ಯಾವುದೇ ರೀತಿಯ ವಿನಾಶ ಅಥವಾ ಹಾನಿ ಆಗಿಲ್ಲ ಎಂಬುದು ಸ್ವತಂತ್ರ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ. </p>.<p>ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕಳೆದ ವರ್ಷದ ಮೇ 7ರಂದು ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿತು. ಈ ಮೂಲಕ ಪಾಕಿಸ್ತಾನದ ಜತೆಗೆ ನಾಲ್ಕು ದಿನಗಳವರೆಗೆ ಸೇನಾ ಸಂಘರ್ಷ ನಡೆದಿತ್ತು. </p>.<p>‘ಕೆಲ ಪಾಕಿಸ್ತಾನಿಯರು ಹತಾಶ ಪ್ರಯತ್ನದ ಭಾಗವಾಗಿ ತಪ್ಪು ಮಾಹಿತಿ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಅದನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ’ ಎಂದು ಸೇನಾ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. </p>.<p>‘ನಿಜವಾದ ದಾಖಲೆಗಳನ್ನು ಪ್ರಸ್ತುತಪಡಿಸುವ ಬದಲಿಗೆ, ಪುರಾವೆಗಳನ್ನು ಸೃಷ್ಟಿಸಲು ನಡೆಸಿರುವ ಯತ್ನವನ್ನು ಇದು ಬಹಿರಂಗಪಡಿಸುತ್ತದೆ. ಏಳು ತಿಂಗಳ ಬಳಿಕ ಹಠಾತ್ತನೆ ಈ ಚಿತ್ರಗಳು ಹೊರಬಂದಿವೆ. ಆದರೆ ಅವುಗಳ ನಿಖರ ಕಾಲಾವಧಿಯ ಪರಿಶೀಲನೆ ಆಗಿಲ್ಲ. ಉಪಗ್ರಹ ಮೂಲದ ವಿವರಗಳನ್ನು ತಿಳಿಸಲಾಗಿಲ್ಲ. ಜತೆಗೆ ಅವು ದೃಢೀಕೃತ ಚಿತ್ರಗಳೂ ಅಲ್ಲ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>