<p><strong>ಚೆನ್ನೈ</strong>: ಮಕ್ಕಳು ಅಥವಾ ಹತ್ತಿರದ ಸಂಬಂಧಿಕರು ಹಿರಿಯ ನಾಗರಿಕರ ಆರೈಕೆ ಮಾಡದೆ ಇದ್ದರೆ, ದಾನಪತ್ರದ ಮೂಲಕ, ಇತ್ಯರ್ಥ ಕರಾರಿನ ಮೂಲಕ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿದ್ದನ್ನು ರದ್ದು ಮಾಡಲು ಹಿರಿಯ ನಾಗರಿಕರಿಗೆ ಅವಕಾಶ ಇದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.</p>.<p>ಆರೈಕೆ ಮಾಡದೆ ಇದ್ದರೆ ಆಸ್ತಿ ವರ್ಗಾವಣೆ ರದ್ದಾಗುತ್ತದೆ ಎಂಬ ಷರತ್ತು ಕರಾರಿನಲ್ಲಿ ಉಲ್ಲೇಖವಾಗದೆ ಇದ್ದರೂ, ಕರಾರು ಪತ್ರವನ್ನು ಹಿರಿಯ ನಾಗರಿಕರು ರದ್ದುಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.</p>.<p>ಮೃತ ಎಸ್. ನಾಗಲಕ್ಷ್ಮಿ ಎನ್ನುವವರ ಸೊಸೆ ಎಸ್. ಮಾಲಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಕೆ. ರಾಜಶೇಖರ್ ಅವರು ಇರುವ ವಿಭಾಗೀಯ ಪೀಠವು ವಜಾಗೊಳಿಸಿದೆ.</p>.<p class="title">ನಾಗಲಕ್ಷ್ಮಿ ಅವರು ತಮ್ಮ ಮಗ ಕೇಶವನ್ ಹೆಸರಿನಲ್ಲಿ ಇತ್ಯರ್ಥ ಕರಾರು ಮಾಡಿದ್ದರು. ಮಗ ಮತ್ತು ಸೊಸೆ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಅವರು ಹೀಗೆ ಮಾಡಿದ್ದರು. ಆದರೆ ಕೇಶವನ್ ಆ ಕೆಲಸ ಮಾಡಲಿಲ್ಲ. ಕೇಶವನ್ ಮೃತರಾದ ನಂತರ ಸೊಸೆ ಕೂಡ ನಾಗಲಕ್ಷ್ಮಿ ಅವರ ಬಗ್ಗೆ ಉಪೇಕ್ಷೆ ತೋರಿದರು. ಆಗ ನಾಗಲಕ್ಷ್ಮಿ ಅವರು ನಾಗಪಟ್ಟಣಂ ಕಂದಾಯ ಉಪವಿಭಾಗಾಧಿಕಾರಿಯ (ಆರ್ಡಿಒ) ಮೊರೆ ಹೋದರು.</p>.<p class="title">ನಾಗಲಕ್ಷ್ಮಿ ಮತ್ತು ಮಾಲಾ ಅವರ ಹೇಳಿಕೆ ದಾಖಲಿಸಿಕೊಂಡ ಆರ್ಡಿಒ, ಇತ್ಯರ್ಥ ಕರಾರನ್ನು ರದ್ದುಪಡಿಸಿದರು. ಇದನ್ನು ಪ್ರಶ್ನಿಸಿ ಮಾಲಾ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತು. ಹೀಗಾಗಿ, ಮಾಲಾ ಅವರು ಮೇಲ್ಮನವಿ ಸಲ್ಲಿಸಿದರು.</p>.<p class="title">ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 23(1)ಅನ್ನು ಹಿರಿಯ ನಾಗರಿಕರ ಹಿತ ಕಾಯುವ ಉದ್ದೇಶದಿಂದ ರೂಪಿಸಲಾಗಿದೆ. ತಮ್ಮ ಆಸ್ತಿಯನ್ನು ಪಡೆದ ವ್ಯಕ್ತಿಯು ತಮ್ಮ ಮೂಲ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಅವರಲ್ಲಿರುತ್ತದೆ. ಆದರೆ ಈ ಕೆಲಸವನ್ನು ಆಸ್ತಿ ಪಡೆದ ವ್ಯಕ್ತಿಯು ಮಾಡದಿದ್ದರೆ, ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವಂತೆ ನ್ಯಾಯಮಂಡಳಿಯನ್ನು ಕೋರುವ ಹಕ್ಕು ಹಿರಿಯ ನಾಗರಿಕರಿಗೆ ಇರುತ್ತದೆ ಎಂದು ಪೀಠವು ಹೇಳಿದೆ.</p>.<p class="title">ಈ ಪ್ರಕರಣದಲ್ಲಿ ಆಸ್ತಿ ವರ್ಗಾವಣೆ ಮಾಡಿದ ಮಹಿಳೆಯನ್ನು ಸೊಸೆಯು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಕೂಡ ಪೀಠ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಮಕ್ಕಳು ಅಥವಾ ಹತ್ತಿರದ ಸಂಬಂಧಿಕರು ಹಿರಿಯ ನಾಗರಿಕರ ಆರೈಕೆ ಮಾಡದೆ ಇದ್ದರೆ, ದಾನಪತ್ರದ ಮೂಲಕ, ಇತ್ಯರ್ಥ ಕರಾರಿನ ಮೂಲಕ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿದ್ದನ್ನು ರದ್ದು ಮಾಡಲು ಹಿರಿಯ ನಾಗರಿಕರಿಗೆ ಅವಕಾಶ ಇದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.</p>.<p>ಆರೈಕೆ ಮಾಡದೆ ಇದ್ದರೆ ಆಸ್ತಿ ವರ್ಗಾವಣೆ ರದ್ದಾಗುತ್ತದೆ ಎಂಬ ಷರತ್ತು ಕರಾರಿನಲ್ಲಿ ಉಲ್ಲೇಖವಾಗದೆ ಇದ್ದರೂ, ಕರಾರು ಪತ್ರವನ್ನು ಹಿರಿಯ ನಾಗರಿಕರು ರದ್ದುಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.</p>.<p>ಮೃತ ಎಸ್. ನಾಗಲಕ್ಷ್ಮಿ ಎನ್ನುವವರ ಸೊಸೆ ಎಸ್. ಮಾಲಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಂ. ಸುಬ್ರಮಣಿಯಂ ಮತ್ತು ಕೆ. ರಾಜಶೇಖರ್ ಅವರು ಇರುವ ವಿಭಾಗೀಯ ಪೀಠವು ವಜಾಗೊಳಿಸಿದೆ.</p>.<p class="title">ನಾಗಲಕ್ಷ್ಮಿ ಅವರು ತಮ್ಮ ಮಗ ಕೇಶವನ್ ಹೆಸರಿನಲ್ಲಿ ಇತ್ಯರ್ಥ ಕರಾರು ಮಾಡಿದ್ದರು. ಮಗ ಮತ್ತು ಸೊಸೆ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಅವರು ಹೀಗೆ ಮಾಡಿದ್ದರು. ಆದರೆ ಕೇಶವನ್ ಆ ಕೆಲಸ ಮಾಡಲಿಲ್ಲ. ಕೇಶವನ್ ಮೃತರಾದ ನಂತರ ಸೊಸೆ ಕೂಡ ನಾಗಲಕ್ಷ್ಮಿ ಅವರ ಬಗ್ಗೆ ಉಪೇಕ್ಷೆ ತೋರಿದರು. ಆಗ ನಾಗಲಕ್ಷ್ಮಿ ಅವರು ನಾಗಪಟ್ಟಣಂ ಕಂದಾಯ ಉಪವಿಭಾಗಾಧಿಕಾರಿಯ (ಆರ್ಡಿಒ) ಮೊರೆ ಹೋದರು.</p>.<p class="title">ನಾಗಲಕ್ಷ್ಮಿ ಮತ್ತು ಮಾಲಾ ಅವರ ಹೇಳಿಕೆ ದಾಖಲಿಸಿಕೊಂಡ ಆರ್ಡಿಒ, ಇತ್ಯರ್ಥ ಕರಾರನ್ನು ರದ್ದುಪಡಿಸಿದರು. ಇದನ್ನು ಪ್ರಶ್ನಿಸಿ ಮಾಲಾ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತು. ಹೀಗಾಗಿ, ಮಾಲಾ ಅವರು ಮೇಲ್ಮನವಿ ಸಲ್ಲಿಸಿದರು.</p>.<p class="title">ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 23(1)ಅನ್ನು ಹಿರಿಯ ನಾಗರಿಕರ ಹಿತ ಕಾಯುವ ಉದ್ದೇಶದಿಂದ ರೂಪಿಸಲಾಗಿದೆ. ತಮ್ಮ ಆಸ್ತಿಯನ್ನು ಪಡೆದ ವ್ಯಕ್ತಿಯು ತಮ್ಮ ಮೂಲ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಅವರಲ್ಲಿರುತ್ತದೆ. ಆದರೆ ಈ ಕೆಲಸವನ್ನು ಆಸ್ತಿ ಪಡೆದ ವ್ಯಕ್ತಿಯು ಮಾಡದಿದ್ದರೆ, ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವಂತೆ ನ್ಯಾಯಮಂಡಳಿಯನ್ನು ಕೋರುವ ಹಕ್ಕು ಹಿರಿಯ ನಾಗರಿಕರಿಗೆ ಇರುತ್ತದೆ ಎಂದು ಪೀಠವು ಹೇಳಿದೆ.</p>.<p class="title">ಈ ಪ್ರಕರಣದಲ್ಲಿ ಆಸ್ತಿ ವರ್ಗಾವಣೆ ಮಾಡಿದ ಮಹಿಳೆಯನ್ನು ಸೊಸೆಯು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಕೂಡ ಪೀಠ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>