ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಲೇಖಕ ಶಶಿ ತರೂರ್ ಮತ್ತು ಕವಿ, ನಾಟಕಕಾರ ನಂದ ಕಿಶೋರ್ ಆಚಾರ್ಯ ಸೇರಿದಂತೆ ವಿವಿಧ ಭಾಷೆಗಳ 23 ಲೇಖಕರು 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಶಿ ತರೂರು ಅವರ ಇಂಗ್ಲಿಷ್ ಕೃತಿ ‘ಆ್ಯನ್ ಎರಾ ಆಫ್ ಡಾರ್ಕ್ನೆಸ್’ ಮತ್ತು ನಂದ ಕಿಶೋರ್ ಆಚಾರ್ಯ ಅವರ ಹಿಂದಿ ಕವನ ಸಂಕಲನ ‘ಛೀಲಾತೆ ಹುಯೆ ಅಪ್ನೆ ಕೊ’ ಪ್ರಶಸ್ತಿಗೆ ಆಯ್ಕೆಯಾಗಿವೆ.
ಬುಧವಾರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.