<p><strong>ಶ್ರೀನಗರ</strong>: ‘ಚುನಾವಣೆಯಲ್ಲಿ ನ್ಯಾಷನಲ್ ಕಾಂಗ್ರೆಸ್ (ಎನ್ಸಿ) ಪಕ್ಷವನ್ನು ಎದುರಿಸಲು, ಸಂಸದ ಶೇಕ್ ಅಬ್ದುಲ್ ರಶೀದ್ ಅವರ ‘ಅವಾಮಿ ಇತ್ತೇಹಾದ್ ಪಾರ್ಟಿ (ಎಐಪಿ) ಮತ್ತು ‘ಜಮಾತ್ ಇ ಇಸ್ಲಾಮಿ’ ಮೈತ್ರಿಯನ್ನು ದೂರದಿಂದಲೇ ನಿಯಂತ್ರಣ ಮಾಡಲಾಗುತ್ತಿದೆ’ ಎಂದು ಎನ್ಸಿ ಮುಖಂಡ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. </p>.<p>‘ಈ ಮೈತ್ರಿ ನಿಯಂತ್ರಣದ ಸೂತ್ರವು ಬೇರೆ ಎಲ್ಲಿಯೋ ಇದೆ. ಅದರ ಅಣತಿ ಮತ್ತು ತಾಳಕ್ಕೆ ತಕ್ಕಂತೆ ಈ ಪಕ್ಷಗಳು ಕುಣಿಯುತ್ತಿವೆ’ ಎಂದು ಅಬ್ದುಲ್ಲಾ ಅವರು ಸೋಮವಾರ ಹೇಳಿದರು.</p>.<p>ಪುಲ್ವಾಮಾ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸುತ್ತಿರುವ, ನಿಷೇಧಿತ ಜಮಾತೆ ಇ ಇಸ್ಲಾಮಿಯ ಮಾಜಿ ಸದಸ್ಯರ ಜೊತೆ ಎಐಪಿ ಮೈತ್ರಿ ಮಾಡಿಕೊಳ್ಳುತ್ತಿದೆ’ ಎಂಬ ವರದಿ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.</p>.<p>‘ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಎದುರಿಸಲೆಂದೇ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಅದರಿಂದ ನಮಗೆ ಚಿಂತೆ ಇಲ್ಲ. ನಾವು ಎದುರಿಸುತ್ತೇವೆ‘ ಎಂದು ಅವರು ಹೇಳಿದರು.</p>.<p>‘ಶ್ರೀನಗರದಲ್ಲಿ ಪ್ರಧಾನಿ ಮೋದಿ ಅವರ ರ್ಯಾಲಿಗೆ 30 ಸಾವಿರ ಜನ ಸೇರಲಿದ್ದಾರೆ ಎಂಬ ಬಿಜೆಪಿ ಪ್ರತಿಪಾದನೆ ಕುರಿತ ಪ್ರಶ್ನೆಗೆ, ರ್ಯಾಲಿಗೆ ಜನರನ್ನು ಸೇರಿಸಬಹುದು. ಅದರರ್ಥ, ಆ ಎಲ್ಲವೂ ವೋಟುಗಳಾಗಿ ಪರಿವರ್ತನೆ ಆಗುತ್ತವೆ ಎಂದಲ್ಲ’ ಎಂದು ಹೇಳಿದರು.</p>.<p>‘ಪ್ರಧಾನಿ ಈ ಹಿಂದೆಯೇ ಸರ್ಕಾರಿ ನೌಕರರನ್ನು ಒಗ್ಗೂಡಿಸಿ ರ್ಯಾಲಿ ನಡೆಸಿದ್ದರು. ನನಗೆ ರ್ಯಾಲಿ ತೋರಿಸಬೇಡಿ. ಮತ ಎಷ್ಟಿದೆ ಎಂದು ತೋರಿಸಿ. ಬಿಜೆಪಿಯು ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ಒಂದು ಕ್ಷೇತ್ರವನ್ನಾದರೂ ಗೆಲ್ಲಲಿ. ನಂತರ ಇದರ ಬಗ್ಗೆ ಮಾತನಾಡೋಣ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ‘ಚುನಾವಣೆಯಲ್ಲಿ ನ್ಯಾಷನಲ್ ಕಾಂಗ್ರೆಸ್ (ಎನ್ಸಿ) ಪಕ್ಷವನ್ನು ಎದುರಿಸಲು, ಸಂಸದ ಶೇಕ್ ಅಬ್ದುಲ್ ರಶೀದ್ ಅವರ ‘ಅವಾಮಿ ಇತ್ತೇಹಾದ್ ಪಾರ್ಟಿ (ಎಐಪಿ) ಮತ್ತು ‘ಜಮಾತ್ ಇ ಇಸ್ಲಾಮಿ’ ಮೈತ್ರಿಯನ್ನು ದೂರದಿಂದಲೇ ನಿಯಂತ್ರಣ ಮಾಡಲಾಗುತ್ತಿದೆ’ ಎಂದು ಎನ್ಸಿ ಮುಖಂಡ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. </p>.<p>‘ಈ ಮೈತ್ರಿ ನಿಯಂತ್ರಣದ ಸೂತ್ರವು ಬೇರೆ ಎಲ್ಲಿಯೋ ಇದೆ. ಅದರ ಅಣತಿ ಮತ್ತು ತಾಳಕ್ಕೆ ತಕ್ಕಂತೆ ಈ ಪಕ್ಷಗಳು ಕುಣಿಯುತ್ತಿವೆ’ ಎಂದು ಅಬ್ದುಲ್ಲಾ ಅವರು ಸೋಮವಾರ ಹೇಳಿದರು.</p>.<p>ಪುಲ್ವಾಮಾ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸುತ್ತಿರುವ, ನಿಷೇಧಿತ ಜಮಾತೆ ಇ ಇಸ್ಲಾಮಿಯ ಮಾಜಿ ಸದಸ್ಯರ ಜೊತೆ ಎಐಪಿ ಮೈತ್ರಿ ಮಾಡಿಕೊಳ್ಳುತ್ತಿದೆ’ ಎಂಬ ವರದಿ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.</p>.<p>‘ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಎದುರಿಸಲೆಂದೇ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಅದರಿಂದ ನಮಗೆ ಚಿಂತೆ ಇಲ್ಲ. ನಾವು ಎದುರಿಸುತ್ತೇವೆ‘ ಎಂದು ಅವರು ಹೇಳಿದರು.</p>.<p>‘ಶ್ರೀನಗರದಲ್ಲಿ ಪ್ರಧಾನಿ ಮೋದಿ ಅವರ ರ್ಯಾಲಿಗೆ 30 ಸಾವಿರ ಜನ ಸೇರಲಿದ್ದಾರೆ ಎಂಬ ಬಿಜೆಪಿ ಪ್ರತಿಪಾದನೆ ಕುರಿತ ಪ್ರಶ್ನೆಗೆ, ರ್ಯಾಲಿಗೆ ಜನರನ್ನು ಸೇರಿಸಬಹುದು. ಅದರರ್ಥ, ಆ ಎಲ್ಲವೂ ವೋಟುಗಳಾಗಿ ಪರಿವರ್ತನೆ ಆಗುತ್ತವೆ ಎಂದಲ್ಲ’ ಎಂದು ಹೇಳಿದರು.</p>.<p>‘ಪ್ರಧಾನಿ ಈ ಹಿಂದೆಯೇ ಸರ್ಕಾರಿ ನೌಕರರನ್ನು ಒಗ್ಗೂಡಿಸಿ ರ್ಯಾಲಿ ನಡೆಸಿದ್ದರು. ನನಗೆ ರ್ಯಾಲಿ ತೋರಿಸಬೇಡಿ. ಮತ ಎಷ್ಟಿದೆ ಎಂದು ತೋರಿಸಿ. ಬಿಜೆಪಿಯು ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ಒಂದು ಕ್ಷೇತ್ರವನ್ನಾದರೂ ಗೆಲ್ಲಲಿ. ನಂತರ ಇದರ ಬಗ್ಗೆ ಮಾತನಾಡೋಣ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>