‘ಒಬ್ಬ ಸರ್ವಾಧಿಕಾರಿ, ತನ್ನ ವಿರುದ್ಧ ಒಬ್ಬ ನಿಂತಿದ್ದಾನೆ ಎಂದರೆ ಹೆದರುತ್ತಾನೆ. ವಿರುದ್ಧವಾಗಿ ನಿಂತಿರುವ ಒಂಟಿಯಾದ ಯೋಧ ಪ್ರಾಮಾಣಿಕನಾಗಿದ್ದರೆ ಆ ಸರ್ವಾಧಿಕಾರಿಯ ಭಯ ನೂರು ಪಟ್ಟು ಹೆಚ್ಚಾಗುತ್ತದೆ. ದೆಹಲಿಯಲ್ಲಿರುವ ಆಡಳಿತಗಾರರು ಈ ವಿಭಾಗಕ್ಕೆ ಸೇರುತ್ತಾರೆ. ರಾಹುಲ್ ಗಾಂಧಿ ಅವರು ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಿರುವುದು ಒಳ್ಳೆಯದು. ನರೇಂದ್ರ ಮೋದಿ ಅವರನ್ನು ಬಿಟ್ಟರೆ ಬಿಜೆಪಿಗೆ ಬೇರೆ ಯಾವ ಪರ್ಯಾಯವೂ ಇಲ್ಲ ಹಾಗೂ ರಾಹುಲ್ ಗಾಂಧಿ ಅವರನ್ನು ಬಿಟ್ಟರೆ ಕಾಂಗ್ರೆಸ್ಗೂ ಬೇರೆ ಪರ್ಯಾಯವಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು’ ಎಂದು ಹೇಳಲಾಗಿದೆ.