<p><strong>ಗ್ಯಾಂಗ್ಟಕ್</strong>: ಸಿಕ್ಕಿಂನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂಕುಸಿತ ಸಂಭವಿಸಿದ್ದು ಹಲವೆಡೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ, ಸುಮಾರು 1,500 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಪ್ರವಾಸಿಗರಿದ್ದ ವಾಹನವೊಂದು ಮಂಗನ್ ಜಿಲ್ಲೆಯಲ್ಲಿ 1,000 ಅಡಿ ಎತ್ತರದಿಂದ ತೀಸ್ತಾ ನದಿಗೆ ಗುರುವಾರ ರಾತ್ರಿ ಉರುಳಿಬಿದ್ದಿತ್ತು. ಲಾಚೆನ್-ಲಾಚುಂಗ್ ಹೆದ್ದಾರಿಯ ಮುನ್ಸಿಥಾಂಗ್ ಸಮೀಪ ಸಂಭವಿಸಿದ ಈ ದುರಂತದ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಎಂಟು ಮಂದಿ ನಾಪತ್ತೆಯಾಗಿದ್ದಾರೆ.</p><p>ನಾಪತ್ತೆಯಾಗಿರುವ ಎಂಟು ಪ್ರವಾಸಿಗರ ಹುಡುಕಾಟಕ್ಕೂ ಮಳೆ ಅಡ್ಡಿಪಡಿಸಿದೆ. ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.</p><p>ಹಲವೆಡೆ ಭೂಕುಸಿತ ಸಂಭವಿಸಿರುವ ಕಾರಣ, ಈ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಲಾಚೆನ್ನಲ್ಲಿ 115 ಮಂದಿ ಮತ್ತು ಲಾಚುಂಗ್ನಲ್ಲಿ ಸುಮಾರು 1,350 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಪ್ರವಾಸಿಗರಿಗೆ ತಾವು ಉಳಿದುಕೊಂಡಿರುವ ಹೋಟೆಲ್ಗಳಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಮಂಗನ್ ಎಸ್ಪಿ ಸೋನಮ್ ಡೆಚು ಭುಟಿಯಾ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ಯಾಂಗ್ಟಕ್</strong>: ಸಿಕ್ಕಿಂನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂಕುಸಿತ ಸಂಭವಿಸಿದ್ದು ಹಲವೆಡೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ, ಸುಮಾರು 1,500 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಪ್ರವಾಸಿಗರಿದ್ದ ವಾಹನವೊಂದು ಮಂಗನ್ ಜಿಲ್ಲೆಯಲ್ಲಿ 1,000 ಅಡಿ ಎತ್ತರದಿಂದ ತೀಸ್ತಾ ನದಿಗೆ ಗುರುವಾರ ರಾತ್ರಿ ಉರುಳಿಬಿದ್ದಿತ್ತು. ಲಾಚೆನ್-ಲಾಚುಂಗ್ ಹೆದ್ದಾರಿಯ ಮುನ್ಸಿಥಾಂಗ್ ಸಮೀಪ ಸಂಭವಿಸಿದ ಈ ದುರಂತದ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಎಂಟು ಮಂದಿ ನಾಪತ್ತೆಯಾಗಿದ್ದಾರೆ.</p><p>ನಾಪತ್ತೆಯಾಗಿರುವ ಎಂಟು ಪ್ರವಾಸಿಗರ ಹುಡುಕಾಟಕ್ಕೂ ಮಳೆ ಅಡ್ಡಿಪಡಿಸಿದೆ. ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.</p><p>ಹಲವೆಡೆ ಭೂಕುಸಿತ ಸಂಭವಿಸಿರುವ ಕಾರಣ, ಈ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಲಾಚೆನ್ನಲ್ಲಿ 115 ಮಂದಿ ಮತ್ತು ಲಾಚುಂಗ್ನಲ್ಲಿ ಸುಮಾರು 1,350 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಪ್ರವಾಸಿಗರಿಗೆ ತಾವು ಉಳಿದುಕೊಂಡಿರುವ ಹೋಟೆಲ್ಗಳಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಮಂಗನ್ ಎಸ್ಪಿ ಸೋನಮ್ ಡೆಚು ಭುಟಿಯಾ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>