<p><strong>ನವದೆಹಲಿ:</strong> ‘ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿಯನ್ನು ಯಾರೂ ನಕಲಿ ಎನ್ಕೌಂಟರ್ನಲ್ಲಿ ಕೊಂದಿಲ್ಲ. ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.</p>.<p>13 ವರ್ಷಗಳ ಹಿಂದಿನ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಮುಂಬೈ ಸಿಬಿಐ ನ್ಯಾಯಾಲಯ ನೀಡಿದ ಆದೇಶಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.</p>.<p>‘ಹರೇನ್ ಪಾಂಡ್ಯಾ, ತುಳಸಿರಾಮ್ ಪ್ರಜಾಪತಿ, ನ್ಯಾಯಮೂರ್ತಿ ಲೋಯಾ, ಪ್ರಕಾಶ್ ತೊಂಬ್ರೆ, ಶ್ರೀಕಾಂತ್ ಖಾಂಡಲ್ಕರ್, ಕೌಸರ್ ಬಿ ಮತ್ತು ಸೊಹ್ರಾಬುದ್ದೀನ್ ಅವರನ್ನು ಯಾರೂ ಕೊಂದಿಲ್ಲ. ಅವರು ಸಹಜ ಸಾವನ್ನಪ್ಪಿದ್ದಾರೆ’ ಎಂದು ರಾಹುಲ್ ಶನಿವಾರ ಟ್ವೀಟ್ ಮಾಡಿದ್ದಾರೆ.</p>.<p>‘ಆರೋಪಿಗಳ ಖುಲಾಸೆಗೆ ಸಿಬಿಐ ಬಹಿರಂಗವಾಗಿ ನೆರವು ನೀಡಿದೆ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>‘ಸೊಹ್ರಾಬ್ ಪ್ರಕರಣದ ನ್ಯಾಯವಿಧಾನ ವ್ಯವಸ್ಥೆಗೆ ಒಂದು ಸಲಾಂ ಮತ್ತು ಬಹಿರಂಗವಾಗಿ ಆರೋಪಿಗಳ ನೆರವಿಗೆ ನಿಂತ ಸಿಬಿಐಗೆ ನಾವು ಧನ್ಯವಾದ ಹೇಳಲೇ ಬೇಕು’ ಎಂದು ಸಿಬಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿಯನ್ನು ಯಾರೂ ನಕಲಿ ಎನ್ಕೌಂಟರ್ನಲ್ಲಿ ಕೊಂದಿಲ್ಲ. ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.</p>.<p>13 ವರ್ಷಗಳ ಹಿಂದಿನ ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಮುಂಬೈ ಸಿಬಿಐ ನ್ಯಾಯಾಲಯ ನೀಡಿದ ಆದೇಶಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.</p>.<p>‘ಹರೇನ್ ಪಾಂಡ್ಯಾ, ತುಳಸಿರಾಮ್ ಪ್ರಜಾಪತಿ, ನ್ಯಾಯಮೂರ್ತಿ ಲೋಯಾ, ಪ್ರಕಾಶ್ ತೊಂಬ್ರೆ, ಶ್ರೀಕಾಂತ್ ಖಾಂಡಲ್ಕರ್, ಕೌಸರ್ ಬಿ ಮತ್ತು ಸೊಹ್ರಾಬುದ್ದೀನ್ ಅವರನ್ನು ಯಾರೂ ಕೊಂದಿಲ್ಲ. ಅವರು ಸಹಜ ಸಾವನ್ನಪ್ಪಿದ್ದಾರೆ’ ಎಂದು ರಾಹುಲ್ ಶನಿವಾರ ಟ್ವೀಟ್ ಮಾಡಿದ್ದಾರೆ.</p>.<p>‘ಆರೋಪಿಗಳ ಖುಲಾಸೆಗೆ ಸಿಬಿಐ ಬಹಿರಂಗವಾಗಿ ನೆರವು ನೀಡಿದೆ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>‘ಸೊಹ್ರಾಬ್ ಪ್ರಕರಣದ ನ್ಯಾಯವಿಧಾನ ವ್ಯವಸ್ಥೆಗೆ ಒಂದು ಸಲಾಂ ಮತ್ತು ಬಹಿರಂಗವಾಗಿ ಆರೋಪಿಗಳ ನೆರವಿಗೆ ನಿಂತ ಸಿಬಿಐಗೆ ನಾವು ಧನ್ಯವಾದ ಹೇಳಲೇ ಬೇಕು’ ಎಂದು ಸಿಬಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>