<p><strong>ನವದೆಹಲಿ:</strong> ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಎರಡುವಾಟ್ಸ್ಯಾಪ್ ಗ್ರೂಪ್ನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ಮತ್ತು ಅವರ ಮೊಬೈಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.</p>.<p>ಹಿಂಸಾಚಾರದಿಂದ ಗಾಯಗೊಂಡಮೂವರು ಜೆಎನ್ಯು ಪ್ರಾಧ್ಯಾಪಕರು ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೇಲಿನಂತೆ ಆದೇಶಿಸಿತು.</p>.<p>‘ಹಿಂಸಾಚಾರದ ಬಗ್ಗೆವ್ಯವಸ್ಥಿತ ಸಂಚು ರೂಪುಗೊಂಡಿತ್ತು. ಹಲವು ವಾಟ್ಸ್ಯಾಪ್ ಗ್ರೂಪ್ಗಳು ಸಂಚು ರೂಪಿಸಲು ಬಳಕೆಯಾಗಿತ್ತು’ ಎಂದುಪ್ರಾಧ್ಯಾಪಕರಾದ ಅಮೀತ್ ಪರಮೇಶ್ವರನ್, ಅತುಲ್ ಸೂದ್ ಮತ್ತು ಶುಕ್ಲ ವಿನಾಯಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>ಫ್ರೆಂಡ್ಸ್ ಆಫ್ ಆರ್ಎಸ್ಎಸ್ ಮತ್ತು ಯೂನಿಟಿ ಎಗೈನ್ಸ್ಟ್ ಲೆಫ್ಟ್ ವಾಟ್ಸ್ಯಾಪ್ ಗ್ರೂಪ್ಗಳನ್ನು ಹಿಂಸಾಚಾರದ ಸಂಚು ರೂಪಿಸಲು ಬಳಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಾಧ್ಯಾಪಕರು ದೂರಿದ್ದರು.</p>.<p>ಹಿಂಸಾಚಾರದ ನಂತರ ಆಕ್ಷೇಪಾರ್ಹ ವಿಡಿಯೊಗಳು ಮತ್ತು ಸ್ಕ್ರೀನ್ಶಾಟ್ಗಳು ವಾಟ್ಸ್ಯಾಪ್ ಗ್ರೂಪ್ಗಳಲ್ಲಿ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದು ಹಿಂಸಾಚಾರವನ್ನು ವ್ಯವಸ್ಥಿತವಾಗಿ ಸಂಘಟಿಸಲಾಗಿತ್ತು ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆವಾಟ್ಸ್ಯಾಪ್ ಮತ್ತು ಗೂಗಲ್ ಸಂಸ್ಥೆಗಳು ಎಲ್ಲ ದತ್ತಾಂಶಗಳನ್ನೂ ರಕ್ಷಿಸಿಡಬೇಕು ಎಂದು ಹೈಕೋರ್ಟ್ ಎರಡೂ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಾಟ್ಸ್ಯಾಪ್ ಕಂಪನಿಯ ವಕೀಲರು, ‘ಕಂಪನಿಯ ಸರ್ವರ್ಗಳಲ್ಲಿ ಮೆಸೇಜ್ಗಳನ್ನು ಸೇವ್ ಮಾಡುವುದಿಲ್ಲ. ಗ್ರೂಪ್ನ ಸದಸ್ಯರಿಂದಷ್ಟೇ ಅವನ್ನು ಪಡೆಯಲು ಸಾಧ್ಯ’ ಎಂದು ತಿಳಿಸಿದರು.</p>.<p>ಮದ್ರಾಸ್ ಹೈಕೋರ್ಟ್ ಆದೇಶದ ಪ್ರಕಾರ ವಾಟ್ಸ್ಯಾಪ್ ಕೇವಲ ಮೆಟಾಡೇಟಾವನ್ನು ಮಾತ್ರ ಒದಗಿಸಬಲ್ಲದು. ನಿರ್ದಿಷ್ಟ ಬಳಕೆದಾರರು ಯಾವ ಐಪಿಯಿಂದ (ಇಂಟರ್ನೆಟ್ ಪ್ರೊಟೊಕಾಲ್) ಕೊನೆಯ ಬಾರಿಗೆ ಬಳಸಿದ್ದಾರೆ ಎಂಬ ಮಾಹಿತಿ ತಿಳಿಸಬಹುದು ಎಂದು ವಾಟ್ಸ್ಯಾಪ್ ವಕೀಲರು ನುಡಿದರು.</p>.<p>ವಕೀಲರ ವಾದಆಲಿಸಿದ ನಂತರ ನ್ಯಾಯಾಲಯವು ಪೊಲೀಸರಿಗೆ ಎರಡೂ ವಾಟ್ಸ್ಯಾಪ್ ಗ್ರೂಪ್ನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ಮತ್ತು ಅವರ ಮೊಬೈಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆತನ್ನ ಸರ್ವರ್ಗಳಲ್ಲಿ ಲಭ್ಯವಿರುವ ಎಲ್ಲ ದತ್ತಾಂಶ ನೀಡುವುದಾಗಿ ಗೂಗಲ್ ಕಂಪನಿಯ ವಕೀಲರುನ್ಯಾಯಾಲಯದಲ್ಲಿ ನುಡಿದರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ಯು ವಿವಿಯ 135 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ರಕ್ಷಿಸಿಡಬೇಕು ಎಂದು ಸೂಚಿಸಲಾಗಿದೆ ಎಂದು ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಕೀಲ ರಾಹುಲ್ ಮೆಹ್ರಾ ನುಡಿದರು.</p>.<p>ಮೂವರು ಪ್ರಾಧ್ಯಾಪಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆನ್ಯಾಯಾಲಯವು ಸೋಮವಾರ ವಾಟ್ಸ್ಯಾಪ್, ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಎರಡುವಾಟ್ಸ್ಯಾಪ್ ಗ್ರೂಪ್ನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ಮತ್ತು ಅವರ ಮೊಬೈಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.</p>.<p>ಹಿಂಸಾಚಾರದಿಂದ ಗಾಯಗೊಂಡಮೂವರು ಜೆಎನ್ಯು ಪ್ರಾಧ್ಯಾಪಕರು ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೇಲಿನಂತೆ ಆದೇಶಿಸಿತು.</p>.<p>‘ಹಿಂಸಾಚಾರದ ಬಗ್ಗೆವ್ಯವಸ್ಥಿತ ಸಂಚು ರೂಪುಗೊಂಡಿತ್ತು. ಹಲವು ವಾಟ್ಸ್ಯಾಪ್ ಗ್ರೂಪ್ಗಳು ಸಂಚು ರೂಪಿಸಲು ಬಳಕೆಯಾಗಿತ್ತು’ ಎಂದುಪ್ರಾಧ್ಯಾಪಕರಾದ ಅಮೀತ್ ಪರಮೇಶ್ವರನ್, ಅತುಲ್ ಸೂದ್ ಮತ್ತು ಶುಕ್ಲ ವಿನಾಯಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>ಫ್ರೆಂಡ್ಸ್ ಆಫ್ ಆರ್ಎಸ್ಎಸ್ ಮತ್ತು ಯೂನಿಟಿ ಎಗೈನ್ಸ್ಟ್ ಲೆಫ್ಟ್ ವಾಟ್ಸ್ಯಾಪ್ ಗ್ರೂಪ್ಗಳನ್ನು ಹಿಂಸಾಚಾರದ ಸಂಚು ರೂಪಿಸಲು ಬಳಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಾಧ್ಯಾಪಕರು ದೂರಿದ್ದರು.</p>.<p>ಹಿಂಸಾಚಾರದ ನಂತರ ಆಕ್ಷೇಪಾರ್ಹ ವಿಡಿಯೊಗಳು ಮತ್ತು ಸ್ಕ್ರೀನ್ಶಾಟ್ಗಳು ವಾಟ್ಸ್ಯಾಪ್ ಗ್ರೂಪ್ಗಳಲ್ಲಿ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದು ಹಿಂಸಾಚಾರವನ್ನು ವ್ಯವಸ್ಥಿತವಾಗಿ ಸಂಘಟಿಸಲಾಗಿತ್ತು ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆವಾಟ್ಸ್ಯಾಪ್ ಮತ್ತು ಗೂಗಲ್ ಸಂಸ್ಥೆಗಳು ಎಲ್ಲ ದತ್ತಾಂಶಗಳನ್ನೂ ರಕ್ಷಿಸಿಡಬೇಕು ಎಂದು ಹೈಕೋರ್ಟ್ ಎರಡೂ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಾಟ್ಸ್ಯಾಪ್ ಕಂಪನಿಯ ವಕೀಲರು, ‘ಕಂಪನಿಯ ಸರ್ವರ್ಗಳಲ್ಲಿ ಮೆಸೇಜ್ಗಳನ್ನು ಸೇವ್ ಮಾಡುವುದಿಲ್ಲ. ಗ್ರೂಪ್ನ ಸದಸ್ಯರಿಂದಷ್ಟೇ ಅವನ್ನು ಪಡೆಯಲು ಸಾಧ್ಯ’ ಎಂದು ತಿಳಿಸಿದರು.</p>.<p>ಮದ್ರಾಸ್ ಹೈಕೋರ್ಟ್ ಆದೇಶದ ಪ್ರಕಾರ ವಾಟ್ಸ್ಯಾಪ್ ಕೇವಲ ಮೆಟಾಡೇಟಾವನ್ನು ಮಾತ್ರ ಒದಗಿಸಬಲ್ಲದು. ನಿರ್ದಿಷ್ಟ ಬಳಕೆದಾರರು ಯಾವ ಐಪಿಯಿಂದ (ಇಂಟರ್ನೆಟ್ ಪ್ರೊಟೊಕಾಲ್) ಕೊನೆಯ ಬಾರಿಗೆ ಬಳಸಿದ್ದಾರೆ ಎಂಬ ಮಾಹಿತಿ ತಿಳಿಸಬಹುದು ಎಂದು ವಾಟ್ಸ್ಯಾಪ್ ವಕೀಲರು ನುಡಿದರು.</p>.<p>ವಕೀಲರ ವಾದಆಲಿಸಿದ ನಂತರ ನ್ಯಾಯಾಲಯವು ಪೊಲೀಸರಿಗೆ ಎರಡೂ ವಾಟ್ಸ್ಯಾಪ್ ಗ್ರೂಪ್ನ ಎಲ್ಲ ಸದಸ್ಯರಿಗೆ ಸಮನ್ಸ್ ಜಾರಿ ಮಾಡುವಂತೆ ಮತ್ತು ಅವರ ಮೊಬೈಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆತನ್ನ ಸರ್ವರ್ಗಳಲ್ಲಿ ಲಭ್ಯವಿರುವ ಎಲ್ಲ ದತ್ತಾಂಶ ನೀಡುವುದಾಗಿ ಗೂಗಲ್ ಕಂಪನಿಯ ವಕೀಲರುನ್ಯಾಯಾಲಯದಲ್ಲಿ ನುಡಿದರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ಯು ವಿವಿಯ 135 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ರಕ್ಷಿಸಿಡಬೇಕು ಎಂದು ಸೂಚಿಸಲಾಗಿದೆ ಎಂದು ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಕೀಲ ರಾಹುಲ್ ಮೆಹ್ರಾ ನುಡಿದರು.</p>.<p>ಮೂವರು ಪ್ರಾಧ್ಯಾಪಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆನ್ಯಾಯಾಲಯವು ಸೋಮವಾರ ವಾಟ್ಸ್ಯಾಪ್, ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>