<p><strong>ನವದೆಹಲಿ:</strong> ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿರುವ ಪ್ರದೇಶ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಗಡಿಗಳನ್ನು ಗುರುತಿಸುವುದಕ್ಕಾಗಿ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಯನ್ನು ರಚಿಸಿದೆ.</p>.<p>ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸುಪ್ರೀಂ ಕೋರ್ಟ್, ಈ ಸಮಿತಿಗೆ ಸೂಚಿಸಿದೆ.</p>.<p>ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಎಷ್ಟು ಭೂಪ್ರದೇಶವನ್ನು ಒತ್ತುವರಿ ಮಾಡಲಾಗಿದೆ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವೆಷ್ಟು ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ಈ ಸಮಿತಿ ಕಂಡುಹಿಡಿಯಲಿದೆ.</p>.<p>ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಹಾಗೂ ಎನ್.ವಿ.ಅಂಜಾರಿಯಾ ನೇತೃತ್ವದ ಪೀಠವು, ಈ ಕುರಿತು ಆಂಧ್ರಪ್ರದೇಶ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ನೀಡಿದ್ದ ಸಲಹೆ ಪರಿಗಣಿಸಿ, ಈ ಸಮಿತಿಯನ್ನು ರಚಿಸಿದೆ.</p>.<p>ಆಂಧ್ರಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಹಾಗೂ ಆಯುಕ್ತರು ನೀಡಿದ್ದ ವರದಿಯನ್ನು ವಕೀಲ ಲೂಥ್ರಾ ಅವರು ಸೆಪ್ಟೆಂಬರ್ 18ರಂದು ನಡೆದಿದ್ದ ವಿಚಾರಣೆ ವೇಳೆ ಪೀಠಕ್ಕೆ ಸಲ್ಲಿಸಿ, ಸಮಿತಿ ರಚನೆ ಕುರಿತು ಮನವಿ ಮಾಡಿದ್ದರು.</p>.<p>ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಓಬುಳಾಪುರಂ ಮೈನಿಂಗ್ ಕಂಪನಿ ಹಾಗೂ ಇತರರು, ಈ ಮನವಿಯನ್ನು ವಿರೋಧಿಸಿದ್ದರು.</p>.<p>‘ಒಪ್ಪಂದದ ಪ್ರಕಾರ, ಗಣಿಗಾರಿಕೆಗಾಗಿ ಗುತ್ತಿಗೆ ನೀಡಲಾಗಿರುವ ಪ್ರದೇಶದ ಗಡಿಗಳನ್ನು ಮಾತ್ರ ಗುರುತಿಸಬೇಕಿದೆ. ಆದರೆ, ರಾಜ್ಯ ಸರ್ಕಾರವು ಈ ಒಪ್ಪಂದದ ವ್ಯಾಪ್ತಿ ಮೀರಿದ ಪ್ರಕ್ರಿಯೆ ಕೈಗೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಂಪನಿ ಹಾಗೂ ಇತರರು ಪೀಠಕ್ಕೆ ತಿಳಿಸಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠ,‘ರಾಜ್ಯ ಸರ್ಕಾರ ಮತ್ತು ಪ್ರತಿವಾದಿಗಳ ನಡುವಿನ ವಿವಾದಿತ ಸಂಗತಿಗಳ ಕುರಿತು ನಾವು ವಿಚಾರಣೆ ಮಾಡಲು ಬಯಸುವುದಿಲ್ಲ. ಈ ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಗಳನ್ನಷ್ಟೆ ಪರಿಗಣಿಸಲಾಗುವುದು. ಹಾಗಾಗಿ, ಅರ್ಜಿದಾರರ (ಆಂಧ್ರಪ್ರದೇಶ ಸರ್ಕಾರ) ಸಲಹೆಯನ್ನು ಪರಿಗಣಿಸಿ, ಸಮಿತಿಯೊಂದನ್ನು ರಚಿಸಲು ಒಲವು ಹೊಂದಿದ್ದೇವೆ’ ಎಂದು ಪೀಠ ಸ್ಪಷ್ಟಪಡಿಸಿತ್ತು.</p>.<p>ಸಮಿತಿಯು ಅಂತಿಮ ವರದಿ ಸಿದ್ಧಪಡಿಸುವುದಕ್ಕೂ ಮುನ್ನ, ಪ್ರತಿವಾದಿಗಳು ಸೇರಿದಂತೆ ಎಲ್ಲ ಕಕ್ಷಿದಾರರ ಹೇಳಿಕೆಗಳನ್ನು ಪಡೆಯಬೇಕು ಎಂದೂ ಪೀಠ ತಿಳಿಸಿತ್ತು.</p>.<p>ಕರ್ನಾಟಕ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ ಪಾಟೀಲ ಹಾಗೂ ವಕೀಲ ಡಿ.ಎಲ್.ಚಿದಾನಂದ ಹಾಜರಿದ್ದರು.</p>.<p><strong>- ಸಮಿತಿ ಸದಸ್ಯರು ಯಾರು?</strong> </p><p>ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಉನ್ನತಾಧಿಕಾರ ಸಮಿತಿ ಸದಸ್ಯರ ವಿವರ ಹೀಗಿದೆ. ಆಂಧ್ರಪ್ರದೇಶದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪರಿಸರ ಅರಣ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿ ಅಥವಾ ಈ ಇಲಾಖೆಗಳಿಂದ ನಾಮನಿರ್ದೇಶಿತವಾದ ಅಧಿಕಾರಿ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಾಮನಿರ್ದೇಶಿತ ಅಧಿಕಾರಿ ಈ ಸಮಿತಿ ಸದಸ್ಯರಾಗಿರುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಗಣಿಗಾರಿಕೆಗೆ ಗುತ್ತಿಗೆ ನೀಡಿರುವ ಪ್ರದೇಶ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಗಡಿಗಳನ್ನು ಗುರುತಿಸುವುದಕ್ಕಾಗಿ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಯನ್ನು ರಚಿಸಿದೆ.</p>.<p>ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸುಪ್ರೀಂ ಕೋರ್ಟ್, ಈ ಸಮಿತಿಗೆ ಸೂಚಿಸಿದೆ.</p>.<p>ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಎಷ್ಟು ಭೂಪ್ರದೇಶವನ್ನು ಒತ್ತುವರಿ ಮಾಡಲಾಗಿದೆ, ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವೆಷ್ಟು ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ಈ ಸಮಿತಿ ಕಂಡುಹಿಡಿಯಲಿದೆ.</p>.<p>ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಹಾಗೂ ಎನ್.ವಿ.ಅಂಜಾರಿಯಾ ನೇತೃತ್ವದ ಪೀಠವು, ಈ ಕುರಿತು ಆಂಧ್ರಪ್ರದೇಶ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ನೀಡಿದ್ದ ಸಲಹೆ ಪರಿಗಣಿಸಿ, ಈ ಸಮಿತಿಯನ್ನು ರಚಿಸಿದೆ.</p>.<p>ಆಂಧ್ರಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಹಾಗೂ ಆಯುಕ್ತರು ನೀಡಿದ್ದ ವರದಿಯನ್ನು ವಕೀಲ ಲೂಥ್ರಾ ಅವರು ಸೆಪ್ಟೆಂಬರ್ 18ರಂದು ನಡೆದಿದ್ದ ವಿಚಾರಣೆ ವೇಳೆ ಪೀಠಕ್ಕೆ ಸಲ್ಲಿಸಿ, ಸಮಿತಿ ರಚನೆ ಕುರಿತು ಮನವಿ ಮಾಡಿದ್ದರು.</p>.<p>ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಓಬುಳಾಪುರಂ ಮೈನಿಂಗ್ ಕಂಪನಿ ಹಾಗೂ ಇತರರು, ಈ ಮನವಿಯನ್ನು ವಿರೋಧಿಸಿದ್ದರು.</p>.<p>‘ಒಪ್ಪಂದದ ಪ್ರಕಾರ, ಗಣಿಗಾರಿಕೆಗಾಗಿ ಗುತ್ತಿಗೆ ನೀಡಲಾಗಿರುವ ಪ್ರದೇಶದ ಗಡಿಗಳನ್ನು ಮಾತ್ರ ಗುರುತಿಸಬೇಕಿದೆ. ಆದರೆ, ರಾಜ್ಯ ಸರ್ಕಾರವು ಈ ಒಪ್ಪಂದದ ವ್ಯಾಪ್ತಿ ಮೀರಿದ ಪ್ರಕ್ರಿಯೆ ಕೈಗೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಂಪನಿ ಹಾಗೂ ಇತರರು ಪೀಠಕ್ಕೆ ತಿಳಿಸಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠ,‘ರಾಜ್ಯ ಸರ್ಕಾರ ಮತ್ತು ಪ್ರತಿವಾದಿಗಳ ನಡುವಿನ ವಿವಾದಿತ ಸಂಗತಿಗಳ ಕುರಿತು ನಾವು ವಿಚಾರಣೆ ಮಾಡಲು ಬಯಸುವುದಿಲ್ಲ. ಈ ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಗಳನ್ನಷ್ಟೆ ಪರಿಗಣಿಸಲಾಗುವುದು. ಹಾಗಾಗಿ, ಅರ್ಜಿದಾರರ (ಆಂಧ್ರಪ್ರದೇಶ ಸರ್ಕಾರ) ಸಲಹೆಯನ್ನು ಪರಿಗಣಿಸಿ, ಸಮಿತಿಯೊಂದನ್ನು ರಚಿಸಲು ಒಲವು ಹೊಂದಿದ್ದೇವೆ’ ಎಂದು ಪೀಠ ಸ್ಪಷ್ಟಪಡಿಸಿತ್ತು.</p>.<p>ಸಮಿತಿಯು ಅಂತಿಮ ವರದಿ ಸಿದ್ಧಪಡಿಸುವುದಕ್ಕೂ ಮುನ್ನ, ಪ್ರತಿವಾದಿಗಳು ಸೇರಿದಂತೆ ಎಲ್ಲ ಕಕ್ಷಿದಾರರ ಹೇಳಿಕೆಗಳನ್ನು ಪಡೆಯಬೇಕು ಎಂದೂ ಪೀಠ ತಿಳಿಸಿತ್ತು.</p>.<p>ಕರ್ನಾಟಕ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ ಪಾಟೀಲ ಹಾಗೂ ವಕೀಲ ಡಿ.ಎಲ್.ಚಿದಾನಂದ ಹಾಜರಿದ್ದರು.</p>.<p><strong>- ಸಮಿತಿ ಸದಸ್ಯರು ಯಾರು?</strong> </p><p>ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಉನ್ನತಾಧಿಕಾರ ಸಮಿತಿ ಸದಸ್ಯರ ವಿವರ ಹೀಗಿದೆ. ಆಂಧ್ರಪ್ರದೇಶದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪರಿಸರ ಅರಣ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಕಾರ್ಯದರ್ಶಿ ಅಥವಾ ಈ ಇಲಾಖೆಗಳಿಂದ ನಾಮನಿರ್ದೇಶಿತವಾದ ಅಧಿಕಾರಿ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಾಮನಿರ್ದೇಶಿತ ಅಧಿಕಾರಿ ಈ ಸಮಿತಿ ಸದಸ್ಯರಾಗಿರುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>