<p><strong>ನವದೆಹಲಿ (ಪಿಟಿಐ):</strong> ‘ಮುಗ್ದ ಪ್ರಾಣಿಗಳ ಚಲನವಲನದ ಮಾರ್ಗಗಳನ್ನು ಮನುಷ್ಯರು ಮತ್ತು ವಾಣಿಜ್ಯ ಉದ್ಯಮಗಳು ನಿರ್ಬಂಧಿಸಿದಾಗೆಲ್ಲ, ಈ ಪ್ರಾಣಿಗಳು ಮೌನವಾಗಿ ಬಳಲುತ್ತವೆ’ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. </p>.<p>‘ಹೀಗಾಗಿಯೇ ನ್ಯಾಯಾಲಯಗಳು ಯಾವಾಗಲೂ ಈ ಪ್ರಾಣಿಗಳ ಪರ ಒಲವು ತೋರುತ್ತವೆ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಾಂಚೋಲಿ ಅವರ ಪೀಠ ತಿಳಿಸಿದೆ.</p>.<p>ತಮಿಳುನಾಡಿನ ನೀಲಗಿರಿಯ ಸಿಗೂರ್ ಪ್ರದೇಶದಲ್ಲಿರುವ ಹೋಟೆಲ್ಗಳು ಮತ್ತು ರೆಸಾರ್ಟ್ಗಳ ಮಾಲೀಕರು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು.</p>.<p>‘ಆನೆ ಕಾರಿಡಾರ್ನಲ್ಲಿ ವಾಣಿಜ್ಯ ಚಟುವಟಿಕ ನಡೆಸುತ್ತಿದ್ದೀರಿ. ನಿಮ್ಮ ಈ ನಿರ್ಮಾಣಗಳು ಆನೆಗಳ ಚಲನೆಗೆ ಅಡ್ಡಿಯಾಗುತ್ತಿವೆ. ಇಲ್ಲಿ ಪ್ರಾಣಿಗಳು ಮೌನ ಬಲಿಪಶುಗಳಾಗುತ್ತಿವೆ. ಅವುಗಳಿಗೆ ಅನುಕೂಲ ಮಾಡಬೇಕಿದೆ’ ಎಂದು ಪೀಠ ಹೇಳಿದೆ. </p>.<p>ತಮಿಳುನಾಡು ಸರ್ಕಾರವು ಸಿಗೂರ್ ಭಾಗದಲ್ಲಿನ ಆನೆ ಕಾರಿಡಾರ್ಗಳ ಅಧಿಸೂಚನೆ ಹೊರಡಿಸಿದೆ. ಈ ವನ್ಯಜೀವಿ ಪ್ರದೇಶಗಳಲ್ಲಿನ ಹೋಟೆಲ್ಗಳು, ರೆಸಾರ್ಟ್ಗಳನ್ನು ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದೆ. ಅದನ್ನು ವಿರೋಧಿಸಿ ಹೋಟೆಲ್, ರೆಸಾರ್ಟ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.</p>.<p>ಈ ಕುರಿತು ವಿವರವಾದ ವಿಚಾರಣೆ ಅಗತ್ಯವಿದೆ ಎಂದ ಪೀಠವು, ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು. ಸಿಗೂರ್ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ 39 ರೆಸಾರ್ಟ್ಗಳು, 390 ಮನೆಗಳು ಸೇರಿದಂತೆ 800ಕ್ಕೂ ಹೆಚ್ಚು ಕಟ್ಟಡಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ಮುಗ್ದ ಪ್ರಾಣಿಗಳ ಚಲನವಲನದ ಮಾರ್ಗಗಳನ್ನು ಮನುಷ್ಯರು ಮತ್ತು ವಾಣಿಜ್ಯ ಉದ್ಯಮಗಳು ನಿರ್ಬಂಧಿಸಿದಾಗೆಲ್ಲ, ಈ ಪ್ರಾಣಿಗಳು ಮೌನವಾಗಿ ಬಳಲುತ್ತವೆ’ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. </p>.<p>‘ಹೀಗಾಗಿಯೇ ನ್ಯಾಯಾಲಯಗಳು ಯಾವಾಗಲೂ ಈ ಪ್ರಾಣಿಗಳ ಪರ ಒಲವು ತೋರುತ್ತವೆ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಾಂಚೋಲಿ ಅವರ ಪೀಠ ತಿಳಿಸಿದೆ.</p>.<p>ತಮಿಳುನಾಡಿನ ನೀಲಗಿರಿಯ ಸಿಗೂರ್ ಪ್ರದೇಶದಲ್ಲಿರುವ ಹೋಟೆಲ್ಗಳು ಮತ್ತು ರೆಸಾರ್ಟ್ಗಳ ಮಾಲೀಕರು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು.</p>.<p>‘ಆನೆ ಕಾರಿಡಾರ್ನಲ್ಲಿ ವಾಣಿಜ್ಯ ಚಟುವಟಿಕ ನಡೆಸುತ್ತಿದ್ದೀರಿ. ನಿಮ್ಮ ಈ ನಿರ್ಮಾಣಗಳು ಆನೆಗಳ ಚಲನೆಗೆ ಅಡ್ಡಿಯಾಗುತ್ತಿವೆ. ಇಲ್ಲಿ ಪ್ರಾಣಿಗಳು ಮೌನ ಬಲಿಪಶುಗಳಾಗುತ್ತಿವೆ. ಅವುಗಳಿಗೆ ಅನುಕೂಲ ಮಾಡಬೇಕಿದೆ’ ಎಂದು ಪೀಠ ಹೇಳಿದೆ. </p>.<p>ತಮಿಳುನಾಡು ಸರ್ಕಾರವು ಸಿಗೂರ್ ಭಾಗದಲ್ಲಿನ ಆನೆ ಕಾರಿಡಾರ್ಗಳ ಅಧಿಸೂಚನೆ ಹೊರಡಿಸಿದೆ. ಈ ವನ್ಯಜೀವಿ ಪ್ರದೇಶಗಳಲ್ಲಿನ ಹೋಟೆಲ್ಗಳು, ರೆಸಾರ್ಟ್ಗಳನ್ನು ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದೆ. ಅದನ್ನು ವಿರೋಧಿಸಿ ಹೋಟೆಲ್, ರೆಸಾರ್ಟ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ.</p>.<p>ಈ ಕುರಿತು ವಿವರವಾದ ವಿಚಾರಣೆ ಅಗತ್ಯವಿದೆ ಎಂದ ಪೀಠವು, ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು. ಸಿಗೂರ್ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ 39 ರೆಸಾರ್ಟ್ಗಳು, 390 ಮನೆಗಳು ಸೇರಿದಂತೆ 800ಕ್ಕೂ ಹೆಚ್ಚು ಕಟ್ಟಡಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>