<p><strong>ನವದೆಹಲಿ</strong>: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ರಾಜ್ಯವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು’ ಎಂದು ಬುಧವಾರ ಆಗ್ರಹಿಸಿದರು.</p><p>ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸಿದ ಅವರು, ‘ಪಶ್ಚಿಮ ಬಂಗಾಳ ದಲ್ಲಿ ನಡೆಯುತ್ತಿರುವ ಎಸ್ಐಆರ್ ವೇಳೆ ಅನುಸರಿಸಲಾಗುತ್ತಿರುವ ಮಾನದಂಡಗಳನ್ನು ನೆರೆ ರಾಜ್ಯ ಅಸ್ಸಾಂನಲ್ಲಿ ಯಾಕೆ ಅನ್ವಯಿಸಲಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.</p><p>ಮಮತಾ ಬ್ಯಾನರ್ಜಿ ಅವರ ಮೇಲ್ಮನವಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಫೆಬ್ರುವರಿ 9ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಆಧಿಕಾರಿಗೆ ನೋಟಿಸ್ ಜಾರಿ ಮಾಡಿತು.</p><p>ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಂಚೋಲಿ ಕೂಡ ಈ ಪೀಠದಲ್ಲಿದ್ದಾರೆ. ಅಪರೂಪವೆಂಬಂತೆ ಹಾಗೂ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿ ಯೊ ಬ್ಬರು ಖುದ್ದು ಹಾಜರಾಗಿ ವಾದ ಮಂಡನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.</p><p>ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರೂ, ಪೂರಕ ನಿವೇದನೆಗಳನ್ನು ಅರುಹಲು ಅವರಿಗೆ ಪೀಠವು ಅನುಮತಿ ನೀಡಿತು. ಅವರು ಫೆ.9ರಂದು ನ್ಯಾಯಾಲಯಕ್ಕೆ ಪುನಃ ಹಾಜರಾಗಿ, ವಾದ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.</p><p>ವಿಚಾರಣೆ ವೇಳೆ, ‘ಎಸ್ಐಆರ್ ಕುರಿತು ಚುನಾವಣಾ ಆಯೋಗಕ್ಕೆ ನಾನು 6 ಪತ್ರಗಳನ್ನು ಬರೆದಿರುವೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಈ ಕಾರಣಕ್ಕೆ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದರು.</p><p>‘ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳ ಪರಿಷ್ಕರಣೆ ಹಾಗೂ ಹೊಂದಾಣಿಕೆ ಪ್ರಕ್ರಿಯೆ ಬಾಕಿ ಇದೆ. ಫೆಬ್ರುವರಿ 14ರ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿರುವ ಕಾರಣ, ನೈಜ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗುವ ಅಪಾಯ ಇದೆ’ ಎಂದು ವಕೀಲ ದಿವಾನ್ ಹೇಳಿದರು.</p><p>‘ಚುನಾವಣಾ ಆಯೋಗವು 1.36 ಕೋಟಿ ಮತದಾರರಿಗೆ ನೋಟಿಸ್ ನೀಡಿದೆ. ಈ ಮತದಾರರಿಗೆ ಸಂಬಂಧಿಸಿ ‘ಹೆಸರು ಹೊಂದಾಣಿಕೆ ಸಮಸ್ಯೆ’ ಕಾರಣಗಳಿಂದಾಗಿ ನೋಟಿಸ್ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಹೆಸರಿನಲ್ಲಿನ ವ್ಯತ್ಯಾಸಗಳಿಗಾಗಿ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ಆದರೆ, ಈ ದೋಷಗಳನ್ನು ಸುಲಭವಾಗಿ ಸರಿಪಡಿಸಲು ಸಾಧ್ಯವಿದೆ’ ಎಂದು ದಿವಾನ್ ವಾದಿಸಿದರು.</p>.<div><blockquote>ಎಸ್ಐಆರ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪಶ್ಚಿಮ ಬಂಗಾಳ ಜನರ ಹಕ್ಕುಗಳನ್ನು ರಕ್ಷಿಸಬೇಕು. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಬೇಕು.</blockquote><span class="attribution">– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ</span></div>.<p>ಬಂಗಾಳಿ ಹಾಗೂ ಅದರ ಉಪ ಭಾಷೆಯೊಂದನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, ಭಾಷೆಯಲ್ಲಿನ ಈ ವ್ಯತ್ಯಾಸದಿಂದಾಗಿ ಹೆಸರಿನಲ್ಲಿ ತಪ್ಪು ನುಸುಳಿರಬಹುದು ಎಂದರು.</p><p>‘ಈಗ ನಡೆಯುತ್ತಿರುವ ಎಸ್ಐಆರ್ ವೇಳೆ ವಲಸೆಯನ್ನೂ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರು ಕೈಬಿಟ್ಟು ಹೋಗಬಾರದು’ ಎಂದು ಹೇಳಿದರು.</p><p>‘ಎಸ್ಐಆರ್ ಭಾಗವಾಗಿ ಆಧಾರ್ ಹಾಗೂ ಇತರ ದಾಖಲೆಗಳನ್ನು ಚುನಾವಣಾ ಆಯೋಗ ಪರಿಗಣಿಸುತ್ತಿಲ್ಲ. ಎಷ್ಟೋ ಜನರು ಜೀವಂತವಾಗಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾಗಿ ಘೋಷಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.</p><p>ಇದಕ್ಕೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ‘ರಾಜ್ಯ ಸರ್ಕಾರ ಗ್ರೇಡ್–2 ಶ್ರೇಣಿಯ 80 ಅಧಿಕಾರಿಗಳನ್ನು ಒದಗಿ ಸಿದೆ. ಅಂಗನವಾಡಿ ಕಾರ್ಯಕರ್ತರಂತಹ ಕೆಳ ಹಂತದ ನೌಕರರನ್ನು ಪರಿಷ್ಕರಣೆ ಕಾರ್ಯಕ್ಕೆ ಒದಗಿಸಿದೆ’ ಎಂದರು.</p><p>‘ಚುನಾವಣಾ ಆಯೋಗ ಕೇಳಿದಂತೆಯೇ, ಎಸ್ಐಆರ್ ಕಾರ್ಯಕ್ಕೆ ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು.</p>.ಲೇ ಆರೆಸ್ಸೆಸ್ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ: ಶಾಸಕ ಶಿವಲಿಂಗೇಗೌಡ.SIR: ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು–ಸುಪ್ರೀಂ ಕೋರ್ಟ್.<p><strong>ಮಮತಾ ಬ್ಯಾನರ್ಜಿ ವಾದ</strong></p><ul><li><p>ಚುನಾವಣಾ ಆಯೋಗವು ‘ವಾಟ್ಸ್ಆ್ಯಪ್ ಆಯೋಗ’ ಎಂಬಂತಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಸರ್ಕಾರಿ ನೌಕರರನ್ನು ‘ಸೂಕ್ಷ್ಮ ವೀಕ್ಷಕ’ರನ್ನಾಗಿ ನಿಯೋಜನೆ ಮಾಡಲಾಗಿದೆ</p></li><li><p>24 ವರ್ಷಗಳ ಬಳಿಕ ಎಸ್ಐಆರ್ ಕೈಗೊಳ್ಳಲಾಗಿದ್ದು, ಇದನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಅವಸರವೇನಿದೆ? </p></li><li><p>ಸೂಕ್ಷ್ಮ ವೀಕ್ಷಕರು ಕಚೇರಿಯಲ್ಲಿ ಇದ್ದುಕೊಂಡೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬಹುದಾಗಿದೆ. ತಮ್ಮ ಹೆಸರು ಕೈಬಿಡಲಾದವರಿಗೆ ಅರ್ಜಿ ನಮೂನೆ–6 ಸಲ್ಲಿಸಲು ಅವಕಾಶ ನೀಡುತ್ತಿಲ್ಲ</p></li><li><p>ಎಸ್ಐಆರ್ ಮೊದಲ ಹಂತದಲ್ಲಿ 56 ಲಕ್ಷ, ಎರಡನೇ ಹಂತದಲ್ಲಿ 1.30 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ. ಮೊದಲ ಹಂತದಲ್ಲಿ ಹೆಸರು ಕೈಬಿಟ್ಟು ಹೋದವರಿಗೆ ನಮೂನೆ– 6 ಸಲ್ಲಿಸಲು ಅವಕಾಶ ನೀಡಿಲ್ಲ</p></li></ul>.<p><strong>ಮಮತಾ ಬೇಡಿಕೆಗಳೇನು?</strong></p><ul><li><p>ಎಸ್ಐಆರ್ ನಡೆಸುವ ಕುರಿತು ಚುನಾವಣಾ ಆಯೋಗ 2025ರ ಜೂನ್ 24 ಹಾಗೂ ಅಕ್ಟೋಬರ್ 27ರಂದು ಹೊರಡಿಸಿರುವ ಆದೇಶಗಳನ್ನು ರದ್ದುಗೊಳಿಸಬೇಕು</p></li><li><p>ಅರ್ಜಿಗಳ ಪರಿಶೀಲನಾ ಜವಾಬ್ದಾರಿಯಿಂದ ಸೂಕ್ಷ್ಮ ವೀಕ್ಷಕರನ್ನು ಮುಕ್ತಗೊಳಿಸಬೇಕು</p></li><li><p>ಅಂತರರಾಜ್ಯ ವಲಸೆ ಪ್ರಕರಣಗಳ ಇತ್ಯರ್ಥಕ್ಕಾಗಿ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಇಆರ್ಒ) ಅಧಿಕಾರ ನೀಡಬೇಕು</p></li><li><p>ರಾಜ್ಯ ಸರ್ಕಾರ ನೀಡಿರುವ ದಾಖಲೆಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು </p></li></ul>.ಹೊಸ ವಂಟಮುರಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ: 12 ಮಂದಿಗೆ 5 ವರ್ಷ ಕಠಿಣ ಶಿಕ್ಷೆ.U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ.<p><strong>ಮುಗಿಬಿದ್ದ ವಕೀಲರು, ದಾವೆದಾರರು...</strong></p><p>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖುದ್ದು ಹಾಜರಾಗಿ ವಾದ ಮಂಡಿಸುತ್ತಿದ್ದುದನ್ನು ನೋಡುವುದಕ್ಕಾಗಿ ಸಿಜೆಐ ಅವರ ನ್ಯಾಯಾಲಯ ಸಭಾಂಗಣದಲ್ಲಿ ಬಹಳ ಜನ ವಕೀಲರು ಹಾಗೂ ದಾವೆದಾರರು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.</p><p>ಬಿಳಿ ಬಣ್ಣದ ಸೀರೆ ಉಟ್ಟು, ಕಪ್ಪು ಬಣ್ಣದ ಸ್ಕಾರ್ಫ್ ಧರಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ವಕೀಲರೊಂದಿಗೆ ಬೆಳಿಗ್ಗೆ 10ಕ್ಕೆ ಸುಪ್ರೀಂ ಕೋರ್ಟ್ ಗೇಟ್ ತಲುಪಿದ್ದರು. ಅವರೊಂದಿಗೆ ಟಿಎಂಸಿ ಸಂಸದರೂ ಆದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಇದ್ದರು.</p><p>ಸುಪ್ರೀಂ ಕೋರ್ಟ್ ಪ್ರವೇಶಿಸುವುದಕ್ಕೆ ಅವರು ರಿಜಿಸ್ಟ್ರಿಯಿಂದ ಈ ಮೊದಲೇ ಅನುಮತಿ ಪಡೆದಿದ್ದರು ಎಂದು ಮೂಲಗಳು ಹೇಳಿವೆ.</p><p>ಅವರು ಪ್ರವೇಶಿಸುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳು ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಅವರು ಉತ್ತರಿಸಲಿಲ್ಲ. ನಂತರ ಅವರು, ಸಭಾಂಗಣ ಪ್ರವೇಶಿಸಿ, ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತುಕೊಂಡರು. ಬಳಿಕ, ಮಧ್ಯಾಹ್ನ 12.55ರ ಹೊತ್ತಿಗೆ, ವಕೀಲರಿಗಾಗಿ ಮೀಸಲಿರುವ ಮೊದಲ ಸಾಲಿನಲ್ಲಿ ಕುಳಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ರಾಜ್ಯವನ್ನೇ ಗುರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಮೂಲಕ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು’ ಎಂದು ಬುಧವಾರ ಆಗ್ರಹಿಸಿದರು.</p><p>ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸಿದ ಅವರು, ‘ಪಶ್ಚಿಮ ಬಂಗಾಳ ದಲ್ಲಿ ನಡೆಯುತ್ತಿರುವ ಎಸ್ಐಆರ್ ವೇಳೆ ಅನುಸರಿಸಲಾಗುತ್ತಿರುವ ಮಾನದಂಡಗಳನ್ನು ನೆರೆ ರಾಜ್ಯ ಅಸ್ಸಾಂನಲ್ಲಿ ಯಾಕೆ ಅನ್ವಯಿಸಲಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.</p><p>ಮಮತಾ ಬ್ಯಾನರ್ಜಿ ಅವರ ಮೇಲ್ಮನವಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಫೆಬ್ರುವರಿ 9ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗ ಹಾಗೂ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಆಧಿಕಾರಿಗೆ ನೋಟಿಸ್ ಜಾರಿ ಮಾಡಿತು.</p><p>ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಎಂ.ಪಂಚೋಲಿ ಕೂಡ ಈ ಪೀಠದಲ್ಲಿದ್ದಾರೆ. ಅಪರೂಪವೆಂಬಂತೆ ಹಾಗೂ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿ ಯೊ ಬ್ಬರು ಖುದ್ದು ಹಾಜರಾಗಿ ವಾದ ಮಂಡನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.</p><p>ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರೂ, ಪೂರಕ ನಿವೇದನೆಗಳನ್ನು ಅರುಹಲು ಅವರಿಗೆ ಪೀಠವು ಅನುಮತಿ ನೀಡಿತು. ಅವರು ಫೆ.9ರಂದು ನ್ಯಾಯಾಲಯಕ್ಕೆ ಪುನಃ ಹಾಜರಾಗಿ, ವಾದ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.</p><p>ವಿಚಾರಣೆ ವೇಳೆ, ‘ಎಸ್ಐಆರ್ ಕುರಿತು ಚುನಾವಣಾ ಆಯೋಗಕ್ಕೆ ನಾನು 6 ಪತ್ರಗಳನ್ನು ಬರೆದಿರುವೆ. ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಈ ಕಾರಣಕ್ಕೆ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದರು.</p><p>‘ದೊಡ್ಡ ಸಂಖ್ಯೆಯ ಮತದಾರರ ಹೆಸರುಗಳ ಪರಿಷ್ಕರಣೆ ಹಾಗೂ ಹೊಂದಾಣಿಕೆ ಪ್ರಕ್ರಿಯೆ ಬಾಕಿ ಇದೆ. ಫೆಬ್ರುವರಿ 14ರ ಒಳಗಾಗಿ ಈ ಕಾರ್ಯ ಪೂರ್ಣಗೊಳ್ಳಬೇಕಿರುವ ಕಾರಣ, ನೈಜ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗುವ ಅಪಾಯ ಇದೆ’ ಎಂದು ವಕೀಲ ದಿವಾನ್ ಹೇಳಿದರು.</p><p>‘ಚುನಾವಣಾ ಆಯೋಗವು 1.36 ಕೋಟಿ ಮತದಾರರಿಗೆ ನೋಟಿಸ್ ನೀಡಿದೆ. ಈ ಮತದಾರರಿಗೆ ಸಂಬಂಧಿಸಿ ‘ಹೆಸರು ಹೊಂದಾಣಿಕೆ ಸಮಸ್ಯೆ’ ಕಾರಣಗಳಿಂದಾಗಿ ನೋಟಿಸ್ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ. ಹೆಸರಿನಲ್ಲಿನ ವ್ಯತ್ಯಾಸಗಳಿಗಾಗಿ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದೆ. ಆದರೆ, ಈ ದೋಷಗಳನ್ನು ಸುಲಭವಾಗಿ ಸರಿಪಡಿಸಲು ಸಾಧ್ಯವಿದೆ’ ಎಂದು ದಿವಾನ್ ವಾದಿಸಿದರು.</p>.<div><blockquote>ಎಸ್ಐಆರ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪಶ್ಚಿಮ ಬಂಗಾಳ ಜನರ ಹಕ್ಕುಗಳನ್ನು ರಕ್ಷಿಸಬೇಕು. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಬೇಕು.</blockquote><span class="attribution">– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ</span></div>.<p>ಬಂಗಾಳಿ ಹಾಗೂ ಅದರ ಉಪ ಭಾಷೆಯೊಂದನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, ಭಾಷೆಯಲ್ಲಿನ ಈ ವ್ಯತ್ಯಾಸದಿಂದಾಗಿ ಹೆಸರಿನಲ್ಲಿ ತಪ್ಪು ನುಸುಳಿರಬಹುದು ಎಂದರು.</p><p>‘ಈಗ ನಡೆಯುತ್ತಿರುವ ಎಸ್ಐಆರ್ ವೇಳೆ ವಲಸೆಯನ್ನೂ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರು ಕೈಬಿಟ್ಟು ಹೋಗಬಾರದು’ ಎಂದು ಹೇಳಿದರು.</p><p>‘ಎಸ್ಐಆರ್ ಭಾಗವಾಗಿ ಆಧಾರ್ ಹಾಗೂ ಇತರ ದಾಖಲೆಗಳನ್ನು ಚುನಾವಣಾ ಆಯೋಗ ಪರಿಗಣಿಸುತ್ತಿಲ್ಲ. ಎಷ್ಟೋ ಜನರು ಜೀವಂತವಾಗಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾಗಿ ಘೋಷಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.</p><p>ಇದಕ್ಕೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ‘ರಾಜ್ಯ ಸರ್ಕಾರ ಗ್ರೇಡ್–2 ಶ್ರೇಣಿಯ 80 ಅಧಿಕಾರಿಗಳನ್ನು ಒದಗಿ ಸಿದೆ. ಅಂಗನವಾಡಿ ಕಾರ್ಯಕರ್ತರಂತಹ ಕೆಳ ಹಂತದ ನೌಕರರನ್ನು ಪರಿಷ್ಕರಣೆ ಕಾರ್ಯಕ್ಕೆ ಒದಗಿಸಿದೆ’ ಎಂದರು.</p><p>‘ಚುನಾವಣಾ ಆಯೋಗ ಕೇಳಿದಂತೆಯೇ, ಎಸ್ಐಆರ್ ಕಾರ್ಯಕ್ಕೆ ಸಿಬ್ಬಂದಿಯನ್ನು ಒದಗಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು.</p>.ಲೇ ಆರೆಸ್ಸೆಸ್ನವ್ರಾ ...ಥೂ ನಿಮ್ಮ... ಯಾಕೆ ಕೂಗಾಡ್ತೀರಿ: ಶಾಸಕ ಶಿವಲಿಂಗೇಗೌಡ.SIR: ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು–ಸುಪ್ರೀಂ ಕೋರ್ಟ್.<p><strong>ಮಮತಾ ಬ್ಯಾನರ್ಜಿ ವಾದ</strong></p><ul><li><p>ಚುನಾವಣಾ ಆಯೋಗವು ‘ವಾಟ್ಸ್ಆ್ಯಪ್ ಆಯೋಗ’ ಎಂಬಂತಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಸರ್ಕಾರಿ ನೌಕರರನ್ನು ‘ಸೂಕ್ಷ್ಮ ವೀಕ್ಷಕ’ರನ್ನಾಗಿ ನಿಯೋಜನೆ ಮಾಡಲಾಗಿದೆ</p></li><li><p>24 ವರ್ಷಗಳ ಬಳಿಕ ಎಸ್ಐಆರ್ ಕೈಗೊಳ್ಳಲಾಗಿದ್ದು, ಇದನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಅವಸರವೇನಿದೆ? </p></li><li><p>ಸೂಕ್ಷ್ಮ ವೀಕ್ಷಕರು ಕಚೇರಿಯಲ್ಲಿ ಇದ್ದುಕೊಂಡೇ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬಹುದಾಗಿದೆ. ತಮ್ಮ ಹೆಸರು ಕೈಬಿಡಲಾದವರಿಗೆ ಅರ್ಜಿ ನಮೂನೆ–6 ಸಲ್ಲಿಸಲು ಅವಕಾಶ ನೀಡುತ್ತಿಲ್ಲ</p></li><li><p>ಎಸ್ಐಆರ್ ಮೊದಲ ಹಂತದಲ್ಲಿ 56 ಲಕ್ಷ, ಎರಡನೇ ಹಂತದಲ್ಲಿ 1.30 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ. ಮೊದಲ ಹಂತದಲ್ಲಿ ಹೆಸರು ಕೈಬಿಟ್ಟು ಹೋದವರಿಗೆ ನಮೂನೆ– 6 ಸಲ್ಲಿಸಲು ಅವಕಾಶ ನೀಡಿಲ್ಲ</p></li></ul>.<p><strong>ಮಮತಾ ಬೇಡಿಕೆಗಳೇನು?</strong></p><ul><li><p>ಎಸ್ಐಆರ್ ನಡೆಸುವ ಕುರಿತು ಚುನಾವಣಾ ಆಯೋಗ 2025ರ ಜೂನ್ 24 ಹಾಗೂ ಅಕ್ಟೋಬರ್ 27ರಂದು ಹೊರಡಿಸಿರುವ ಆದೇಶಗಳನ್ನು ರದ್ದುಗೊಳಿಸಬೇಕು</p></li><li><p>ಅರ್ಜಿಗಳ ಪರಿಶೀಲನಾ ಜವಾಬ್ದಾರಿಯಿಂದ ಸೂಕ್ಷ್ಮ ವೀಕ್ಷಕರನ್ನು ಮುಕ್ತಗೊಳಿಸಬೇಕು</p></li><li><p>ಅಂತರರಾಜ್ಯ ವಲಸೆ ಪ್ರಕರಣಗಳ ಇತ್ಯರ್ಥಕ್ಕಾಗಿ ಸ್ಥಳೀಯ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (ಇಆರ್ಒ) ಅಧಿಕಾರ ನೀಡಬೇಕು</p></li><li><p>ರಾಜ್ಯ ಸರ್ಕಾರ ನೀಡಿರುವ ದಾಖಲೆಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು </p></li></ul>.ಹೊಸ ವಂಟಮುರಿಯಲ್ಲಿ ಮಹಿಳೆ ವಿವಸ್ತ್ರ ಪ್ರಕರಣ: 12 ಮಂದಿಗೆ 5 ವರ್ಷ ಕಠಿಣ ಶಿಕ್ಷೆ.U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ.<p><strong>ಮುಗಿಬಿದ್ದ ವಕೀಲರು, ದಾವೆದಾರರು...</strong></p><p>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖುದ್ದು ಹಾಜರಾಗಿ ವಾದ ಮಂಡಿಸುತ್ತಿದ್ದುದನ್ನು ನೋಡುವುದಕ್ಕಾಗಿ ಸಿಜೆಐ ಅವರ ನ್ಯಾಯಾಲಯ ಸಭಾಂಗಣದಲ್ಲಿ ಬಹಳ ಜನ ವಕೀಲರು ಹಾಗೂ ದಾವೆದಾರರು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.</p><p>ಬಿಳಿ ಬಣ್ಣದ ಸೀರೆ ಉಟ್ಟು, ಕಪ್ಪು ಬಣ್ಣದ ಸ್ಕಾರ್ಫ್ ಧರಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ವಕೀಲರೊಂದಿಗೆ ಬೆಳಿಗ್ಗೆ 10ಕ್ಕೆ ಸುಪ್ರೀಂ ಕೋರ್ಟ್ ಗೇಟ್ ತಲುಪಿದ್ದರು. ಅವರೊಂದಿಗೆ ಟಿಎಂಸಿ ಸಂಸದರೂ ಆದ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಇದ್ದರು.</p><p>ಸುಪ್ರೀಂ ಕೋರ್ಟ್ ಪ್ರವೇಶಿಸುವುದಕ್ಕೆ ಅವರು ರಿಜಿಸ್ಟ್ರಿಯಿಂದ ಈ ಮೊದಲೇ ಅನುಮತಿ ಪಡೆದಿದ್ದರು ಎಂದು ಮೂಲಗಳು ಹೇಳಿವೆ.</p><p>ಅವರು ಪ್ರವೇಶಿಸುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳು ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಅವರು ಉತ್ತರಿಸಲಿಲ್ಲ. ನಂತರ ಅವರು, ಸಭಾಂಗಣ ಪ್ರವೇಶಿಸಿ, ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತುಕೊಂಡರು. ಬಳಿಕ, ಮಧ್ಯಾಹ್ನ 12.55ರ ಹೊತ್ತಿಗೆ, ವಕೀಲರಿಗಾಗಿ ಮೀಸಲಿರುವ ಮೊದಲ ಸಾಲಿನಲ್ಲಿ ಕುಳಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>