<p><strong>ನವದೆಹಲಿ:</strong> ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣದಲ್ಲಿ ನಟಿಯ ಕ್ಷಮೆ ಕೋರುವಂತೆ ತಮಿಳು ಚಲನಚಿತ್ರ ನಿರ್ದೇಶಕ ಹಾಗೂ ರಾಜಕಾರಣಿ ಸೀಮನ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.</p>.<p>ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸೀಮನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಆರ್. ಮಹದೇವನ್ ಅವರಿದ್ದ ಪೀಠವು ನಡೆಸಿತು.</p>.<p>‘ನಟಿಯ ವಿರುದ್ಧ ನಾನು ಮಾಡಿದ್ದ ನಾನು ಆರೋಪಗಳನ್ನು ಹಿಂಪಡೆಯುವೆ. ಭವಿಷ್ಯದಲ್ಲಿ ಆಕೆಗೆ ತೊಂದರೆ ನೀಡಲ್ಲ. ಕ್ಷಮೆ ಯಾಚಿಸುವೆ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದೀರಿ. ಈ ಎಲ್ಲವನ್ನೂ ಪಾಲಿಸುವುದಾದರೆ, ನಾವು ದೂರನ್ನು ರದ್ದುಗೊಳಿಸಬಹುದು’ ಎಂದು ಪೀಠ ಹೇಳಿದೆ.</p>.<p>ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.</p>.<p>‘ನನ್ನನ್ನು ಭಾವನಾತ್ಮಕವಾಗಿ ನಂಬಿಸಿದ್ದ ಸೀಮನ್, ಮದುವೆಯಾಗುವ ಭರವಸೆ ನೀಡಿದ್ದರಿಂದ 2007ರಿಂದ 2011ರವರೆಗೆ ಆತನ ಜೊತೆ ಸಹ ವಾಸದಲ್ಲಿದ್ದೆ. ಈ ಅವಧಿಯಲ್ಲಿ ಆತನು ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾನೆ. ನನ್ನನ್ನು ಮದುವೆಯಾಗದೆ ಬೇರೊಬ್ಬರನ್ನು ಮದುವೆಯಾದ’ ಎಂದು ನಟಿ ದೂರು ನೀಡಿದ್ದರು.</p>.<p>ಇಬ್ಬರೂ ಸಾರ್ವಜನಿಕವಾಗಿ ಪರಸ್ಪರ ನಿಂದಿಸಿಕೊಳ್ಳುತ್ತಿರುವುದಕ್ಕೂ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.</p>.<p>ನಟಿಯ ಕ್ಷಮೆ ಕೋರದಿದ್ದರೆ ಮಧ್ಯಂತರ ರಕ್ಷಣೆಯನ್ನು ತೆಗೆದು ಹಾಕುವುದಾಗಿ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಎಚ್ಚರಿಕೆ ನೀಡಿದರು. ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣದಲ್ಲಿ ನಟಿಯ ಕ್ಷಮೆ ಕೋರುವಂತೆ ತಮಿಳು ಚಲನಚಿತ್ರ ನಿರ್ದೇಶಕ ಹಾಗೂ ರಾಜಕಾರಣಿ ಸೀಮನ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.</p>.<p>ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸೀಮನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಆರ್. ಮಹದೇವನ್ ಅವರಿದ್ದ ಪೀಠವು ನಡೆಸಿತು.</p>.<p>‘ನಟಿಯ ವಿರುದ್ಧ ನಾನು ಮಾಡಿದ್ದ ನಾನು ಆರೋಪಗಳನ್ನು ಹಿಂಪಡೆಯುವೆ. ಭವಿಷ್ಯದಲ್ಲಿ ಆಕೆಗೆ ತೊಂದರೆ ನೀಡಲ್ಲ. ಕ್ಷಮೆ ಯಾಚಿಸುವೆ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದೀರಿ. ಈ ಎಲ್ಲವನ್ನೂ ಪಾಲಿಸುವುದಾದರೆ, ನಾವು ದೂರನ್ನು ರದ್ದುಗೊಳಿಸಬಹುದು’ ಎಂದು ಪೀಠ ಹೇಳಿದೆ.</p>.<p>ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.</p>.<p>‘ನನ್ನನ್ನು ಭಾವನಾತ್ಮಕವಾಗಿ ನಂಬಿಸಿದ್ದ ಸೀಮನ್, ಮದುವೆಯಾಗುವ ಭರವಸೆ ನೀಡಿದ್ದರಿಂದ 2007ರಿಂದ 2011ರವರೆಗೆ ಆತನ ಜೊತೆ ಸಹ ವಾಸದಲ್ಲಿದ್ದೆ. ಈ ಅವಧಿಯಲ್ಲಿ ಆತನು ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾನೆ. ನನ್ನನ್ನು ಮದುವೆಯಾಗದೆ ಬೇರೊಬ್ಬರನ್ನು ಮದುವೆಯಾದ’ ಎಂದು ನಟಿ ದೂರು ನೀಡಿದ್ದರು.</p>.<p>ಇಬ್ಬರೂ ಸಾರ್ವಜನಿಕವಾಗಿ ಪರಸ್ಪರ ನಿಂದಿಸಿಕೊಳ್ಳುತ್ತಿರುವುದಕ್ಕೂ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.</p>.<p>ನಟಿಯ ಕ್ಷಮೆ ಕೋರದಿದ್ದರೆ ಮಧ್ಯಂತರ ರಕ್ಷಣೆಯನ್ನು ತೆಗೆದು ಹಾಕುವುದಾಗಿ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಎಚ್ಚರಿಕೆ ನೀಡಿದರು. ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>