<p><strong>ಕೋಲ್ಕತ್ತ:</strong> '2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಟಾಟಾ ಸಮೂಹದ ಹೂಡಿಕೆಯನ್ನು ಮರಳಿ ತರುತ್ತೇವೆ' ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಸುವೇಂದು ಅಧಿಕಾರಿ ಹೇಳಿದ್ದಾರೆ. </p><p>'ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಲಂಚ ಹಾಗೂ ಭ್ರಷ್ಟಾಚಾರ ಇರುವುದಿಲ್ಲ' ಎಂದು ಅವರು ಭರವಸೆ ನೀಡಿದ್ದಾರೆ. </p><p>2008ರಲ್ಲಿ ನಡೆದ ಭಾರಿ ವಿವಾದದ ಬಳಿಕ ಟಾಟಾ ಮೋಟಾರ್ಸ್ ಬಂಗಾಳ ತೊರೆದಿತ್ತು. </p><p>ಈ ಕುರಿತು ಪಕ್ಷದ ಸಮಾವೇಶದಲ್ಲಿ ಮಾತನಾಡಿರುವ ಸುವೇಂದು, 'ಕೆಟ್ಟ 'ಎಂ' (ಮಮತಾ) ಬಿಟ್ಟು ಒಳ್ಳೆಯ 'ಎಂ'ಗೆ (ಮೋದಿ) ಹೋಗುತ್ತಿರುವುದಾಗಿ ಅಂದಿನ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದರು' ಎಂದು ಹೇಳಿದ್ದಾರೆ. </p><p>'ಒಎಂಆರ್ ಮೂಲಕ ನಾವು ಪಾರದರ್ಶಕ ಉದ್ಯೋಗವನ್ನು ಖಾತ್ರಿಪಡಿಸಲಿದ್ದೇವೆ. ರಾಜ್ಯದಲ್ಲಿ ಲಂಚ ಹಾಗೂ ಭ್ರಷ್ಟ ಮಧ್ಯವರ್ತಿಗಳು ಇರುವುದಿಲ್ಲ' ಎಂದು ಹೇಳಿದ್ದಾರೆ. </p><p>'ರಾಜ್ಯವು 8 ಲಕ್ಷ ಕೋಟಿ ಸಾಲದ ಹೊರೆಯಲ್ಲಿದೆ. 60 ಲಕ್ಷ ವಲಸೆ ಕಾರ್ಮಿಕರಿದ್ದಾರೆ. 2.15 ಕೋಟಿ ನಿರುದ್ಯೋಗಿಗಳಿದ್ದಾರೆ. ಇವೆಲ್ಲವನ್ನು ಹಿಮ್ಮೆಟ್ಟಿಸಿ ಬಂಗಾಳವು ಆರ್ಥಿಕ ಪ್ರಗತಿಯತ್ತ ಸಾಗಲಿದೆ' ಎಂದಿದ್ದಾರೆ. </p><p>'ಅಕ್ರಮ ವಲಸಿಗರ ಸಂಬಂಧ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಟಿಎಂಸಿ ನೀಡಿದ ನಕಲಿ ಪಡಿತರ ಹಾಗೂ ಗುರುತಿನ ಚೀಟಿ ಪಡೆದ ಬಾಂಗ್ಲಾದೇಶ, ಮ್ಯಾನ್ಮಾರ್ ಮುಸ್ಲಿಮರನ್ನು ಎಸ್ಐಆರ್ ಮೂಲಕ ಪತ್ತೆ ಹಚ್ಚಿ ಗಡೀಪಾರು ಮಾಡಲಾಗುವುದು' ಎಂದು ಹೇಳಿದ್ದಾರೆ. </p>.ನಾಗರಿಕರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ: ರಾಹುಲ್ ಗಾಂಧಿ ಟೀಕೆ.ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್ಐಆರ್: ರಾಹುಲ್ ಗಾಂಧಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> '2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಟಾಟಾ ಸಮೂಹದ ಹೂಡಿಕೆಯನ್ನು ಮರಳಿ ತರುತ್ತೇವೆ' ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಸುವೇಂದು ಅಧಿಕಾರಿ ಹೇಳಿದ್ದಾರೆ. </p><p>'ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಲಂಚ ಹಾಗೂ ಭ್ರಷ್ಟಾಚಾರ ಇರುವುದಿಲ್ಲ' ಎಂದು ಅವರು ಭರವಸೆ ನೀಡಿದ್ದಾರೆ. </p><p>2008ರಲ್ಲಿ ನಡೆದ ಭಾರಿ ವಿವಾದದ ಬಳಿಕ ಟಾಟಾ ಮೋಟಾರ್ಸ್ ಬಂಗಾಳ ತೊರೆದಿತ್ತು. </p><p>ಈ ಕುರಿತು ಪಕ್ಷದ ಸಮಾವೇಶದಲ್ಲಿ ಮಾತನಾಡಿರುವ ಸುವೇಂದು, 'ಕೆಟ್ಟ 'ಎಂ' (ಮಮತಾ) ಬಿಟ್ಟು ಒಳ್ಳೆಯ 'ಎಂ'ಗೆ (ಮೋದಿ) ಹೋಗುತ್ತಿರುವುದಾಗಿ ಅಂದಿನ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದರು' ಎಂದು ಹೇಳಿದ್ದಾರೆ. </p><p>'ಒಎಂಆರ್ ಮೂಲಕ ನಾವು ಪಾರದರ್ಶಕ ಉದ್ಯೋಗವನ್ನು ಖಾತ್ರಿಪಡಿಸಲಿದ್ದೇವೆ. ರಾಜ್ಯದಲ್ಲಿ ಲಂಚ ಹಾಗೂ ಭ್ರಷ್ಟ ಮಧ್ಯವರ್ತಿಗಳು ಇರುವುದಿಲ್ಲ' ಎಂದು ಹೇಳಿದ್ದಾರೆ. </p><p>'ರಾಜ್ಯವು 8 ಲಕ್ಷ ಕೋಟಿ ಸಾಲದ ಹೊರೆಯಲ್ಲಿದೆ. 60 ಲಕ್ಷ ವಲಸೆ ಕಾರ್ಮಿಕರಿದ್ದಾರೆ. 2.15 ಕೋಟಿ ನಿರುದ್ಯೋಗಿಗಳಿದ್ದಾರೆ. ಇವೆಲ್ಲವನ್ನು ಹಿಮ್ಮೆಟ್ಟಿಸಿ ಬಂಗಾಳವು ಆರ್ಥಿಕ ಪ್ರಗತಿಯತ್ತ ಸಾಗಲಿದೆ' ಎಂದಿದ್ದಾರೆ. </p><p>'ಅಕ್ರಮ ವಲಸಿಗರ ಸಂಬಂಧ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಟಿಎಂಸಿ ನೀಡಿದ ನಕಲಿ ಪಡಿತರ ಹಾಗೂ ಗುರುತಿನ ಚೀಟಿ ಪಡೆದ ಬಾಂಗ್ಲಾದೇಶ, ಮ್ಯಾನ್ಮಾರ್ ಮುಸ್ಲಿಮರನ್ನು ಎಸ್ಐಆರ್ ಮೂಲಕ ಪತ್ತೆ ಹಚ್ಚಿ ಗಡೀಪಾರು ಮಾಡಲಾಗುವುದು' ಎಂದು ಹೇಳಿದ್ದಾರೆ. </p>.ನಾಗರಿಕರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ: ರಾಹುಲ್ ಗಾಂಧಿ ಟೀಕೆ.ಮತಗಳ್ಳತನವನ್ನು ಮುಚ್ಚಿ ಹಾಕಲು ಎಸ್ಐಆರ್: ರಾಹುಲ್ ಗಾಂಧಿ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>