<p><strong>ಡೆಹರಿ–ಆನ್–ಸೋನ್(ಬಿಹಾರ):</strong> ‘ಮತ ಕಳ್ಳತನಕ್ಕೆ ಸಂಬಂಧಿಸಿ ‘ಇಂಡಿಯಾ’ ಮೈತ್ರಿಕೂಟ ಸೃಷ್ಟಿಸಿರುವ ‘ಸುಳ್ಳು ಸಂಕಥನ’ಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು’ ಎಂದು ಬಿಜೆಪಿ ಕಾರ್ಯಕರ್ತರಿಗೆ ಕೇಂಧ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸೂಚನೆ ನೀಡಿದ್ದಾರೆ.</p>.<p>‘ಒಂದು ವೇಳೆ, ಬಿಹಾರದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಅಧಿಕಾರಕ್ಕೆ ಬಂದಲ್ಲಿ ಒಳನುಸುಳುವಿಕೆ ಸಮಸ್ಯೆ ಹೆಚ್ಚಾಗಲಿದೆ ಎಂಬುದಾಗಿ ಜನರನ್ನು ಎಚ್ಚರಿಸಬೇಕು’ ಎಂದೂ ಶಾ ಸೂಚಿಸಿದ್ದಾರೆ.</p>.<p>ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಡೆಹರಿ–ಆನ್–ಸೋನ್ನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>ಕಾಂಗ್ರೆಸ್,ಆರ್ಜೆಡಿ ಹಾಗೂ ಎಡಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಶಾ,‘ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟಕ್ಕೆ ಸರಳ ಬಹುಮತವಲ್ಲ, ಮೂರನೇ ಎರಡರಷ್ಟು ಪ್ರಚಂಡ ಬಹುಮತ ಸಿಗಬೇಕು. ಈ ಗುರಿಯೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ಕಾರ್ಯಕರ್ತರಿಗೆ ಶಾ ಹೇಳಿದರು.</p>.<p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿದ್ದ ‘ಮತದಾರರ ಅಧಿಕಾರ ಯಾತ್ರೆ’ ಪ್ರಸ್ತಾಪಿಸಿದ ಅವರು, ‘ಈ ಯಾತ್ರೆಯ ಉದ್ಧೇಶ ಏನು ಎಂಬುದು ನಿಮಗೆ ಗೊತ್ತು. ಬಾಂಗ್ಲಾದೇಶದಿಂದ ದೇಶದೊಳಗೆ ನುಸುಳಿರುವವರ ರಕ್ಷಣೆಯೇ ಈ ಯಾತ್ರೆಯ ಉದ್ದೇಶವಾಗಿತ್ತು’ ಎಂದರು.</p>.<p>‘ನುಸುಳುಕೋರರಿಗೆ ಮತ ಚಲಾಯಿಸುವ ಹಕ್ಕು ಇರಬೇಕೇ? ಈ ದೇಶದ ನಾಗರಿಕರಿಗೆ ಸಿಗುತ್ತಿರುವ ಎಲ್ಲ ಪ್ರಯೋಜನಗಳೂ ಅವರಿಗೆ ನೀಡಬೇಕೇ’ ಎಂದು ಶಾ ಹೇಳಿದಾಗ, ಕಾರ್ಯಕರ್ತರು, ‘ಇಲ್ಲ’ ಎಂದು ಜೋರು ದನಿಯಲ್ಲಿ ಉತ್ತರಿಸಿದರು.</p>.<p>‘ನುಸುಳುಕೋರರೇ ಕಾಂಗ್ರೆಸ್ನ ಮತಬ್ಯಾಂಕ್. ಇದಕ್ಕಾಗಿಯೇ ರಾಹುಲ್ ಗಾಂಧಿ ಹಾಗೂ ಅವರ ಬೆಂಬಲಿಗರು ನುಸುಳುಕೋರರಿಗೆ ಮಣೆ ಹಾಕುತ್ತಾರೆ. ನಮ್ಮ ಯುವಕರಿಗೆ ಮೀಸಲಾದ ಉದ್ಯೋಗಗಳನ್ನು ಅವರಿಗೆ ನೀಡುತ್ತಾರೆ’ ಎಂದು ಶಾ ಆರೋಪಿಸಿದರು.</p>.ಮತ ಕಳ್ಳತನ | ಹೈಡ್ರೋಜನ್ ಬಾಂಬ್ ಇನ್ನು ಬರಬೇಕಷ್ಟೇ: ರಾಹುಲ್ ಗಾಂಧಿ.ಮತ ಕಳ್ಳತನ | ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹರಿ–ಆನ್–ಸೋನ್(ಬಿಹಾರ):</strong> ‘ಮತ ಕಳ್ಳತನಕ್ಕೆ ಸಂಬಂಧಿಸಿ ‘ಇಂಡಿಯಾ’ ಮೈತ್ರಿಕೂಟ ಸೃಷ್ಟಿಸಿರುವ ‘ಸುಳ್ಳು ಸಂಕಥನ’ಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು’ ಎಂದು ಬಿಜೆಪಿ ಕಾರ್ಯಕರ್ತರಿಗೆ ಕೇಂಧ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸೂಚನೆ ನೀಡಿದ್ದಾರೆ.</p>.<p>‘ಒಂದು ವೇಳೆ, ಬಿಹಾರದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಅಧಿಕಾರಕ್ಕೆ ಬಂದಲ್ಲಿ ಒಳನುಸುಳುವಿಕೆ ಸಮಸ್ಯೆ ಹೆಚ್ಚಾಗಲಿದೆ ಎಂಬುದಾಗಿ ಜನರನ್ನು ಎಚ್ಚರಿಸಬೇಕು’ ಎಂದೂ ಶಾ ಸೂಚಿಸಿದ್ದಾರೆ.</p>.<p>ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಡೆಹರಿ–ಆನ್–ಸೋನ್ನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>ಕಾಂಗ್ರೆಸ್,ಆರ್ಜೆಡಿ ಹಾಗೂ ಎಡಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಶಾ,‘ಈ ಬಾರಿಯ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟಕ್ಕೆ ಸರಳ ಬಹುಮತವಲ್ಲ, ಮೂರನೇ ಎರಡರಷ್ಟು ಪ್ರಚಂಡ ಬಹುಮತ ಸಿಗಬೇಕು. ಈ ಗುರಿಯೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ಕಾರ್ಯಕರ್ತರಿಗೆ ಶಾ ಹೇಳಿದರು.</p>.<p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿದ್ದ ‘ಮತದಾರರ ಅಧಿಕಾರ ಯಾತ್ರೆ’ ಪ್ರಸ್ತಾಪಿಸಿದ ಅವರು, ‘ಈ ಯಾತ್ರೆಯ ಉದ್ಧೇಶ ಏನು ಎಂಬುದು ನಿಮಗೆ ಗೊತ್ತು. ಬಾಂಗ್ಲಾದೇಶದಿಂದ ದೇಶದೊಳಗೆ ನುಸುಳಿರುವವರ ರಕ್ಷಣೆಯೇ ಈ ಯಾತ್ರೆಯ ಉದ್ದೇಶವಾಗಿತ್ತು’ ಎಂದರು.</p>.<p>‘ನುಸುಳುಕೋರರಿಗೆ ಮತ ಚಲಾಯಿಸುವ ಹಕ್ಕು ಇರಬೇಕೇ? ಈ ದೇಶದ ನಾಗರಿಕರಿಗೆ ಸಿಗುತ್ತಿರುವ ಎಲ್ಲ ಪ್ರಯೋಜನಗಳೂ ಅವರಿಗೆ ನೀಡಬೇಕೇ’ ಎಂದು ಶಾ ಹೇಳಿದಾಗ, ಕಾರ್ಯಕರ್ತರು, ‘ಇಲ್ಲ’ ಎಂದು ಜೋರು ದನಿಯಲ್ಲಿ ಉತ್ತರಿಸಿದರು.</p>.<p>‘ನುಸುಳುಕೋರರೇ ಕಾಂಗ್ರೆಸ್ನ ಮತಬ್ಯಾಂಕ್. ಇದಕ್ಕಾಗಿಯೇ ರಾಹುಲ್ ಗಾಂಧಿ ಹಾಗೂ ಅವರ ಬೆಂಬಲಿಗರು ನುಸುಳುಕೋರರಿಗೆ ಮಣೆ ಹಾಕುತ್ತಾರೆ. ನಮ್ಮ ಯುವಕರಿಗೆ ಮೀಸಲಾದ ಉದ್ಯೋಗಗಳನ್ನು ಅವರಿಗೆ ನೀಡುತ್ತಾರೆ’ ಎಂದು ಶಾ ಆರೋಪಿಸಿದರು.</p>.ಮತ ಕಳ್ಳತನ | ಹೈಡ್ರೋಜನ್ ಬಾಂಬ್ ಇನ್ನು ಬರಬೇಕಷ್ಟೇ: ರಾಹುಲ್ ಗಾಂಧಿ.ಮತ ಕಳ್ಳತನ | ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>