<p><strong>ನವದೆಹಲಿ: </strong>ಕೊರೊನಾ ವೈರಸ್ ಪ್ರತಿಬಂಧಕ ಔಷಧಿಯ ಸಂಶೋಧನೆ ನಡೆಯುತ್ತಿದ್ದರೆ, ಇನ್ನೊಂದೆಡೆ, ನಾವು ಬಳಸುವ ವಿವಿಧ ವಸ್ತುಗಳಿಗೆ ಅಂಟಿರಬಹುದಾದ ಸೋಂಕು ನಾಶಪಡಿಸುವ ಸಾಧನಗಳ ಆವಿಷ್ಕಾರದಲ್ಲಿಯೂ ವಿಜ್ಞಾನಿಗಳು ನಿರತರಾಗಿದ್ದಾರೆ.</p>.<p>ಪಂಜಾಬ್ನ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ (ಎಲ್ಪಿಯು) ತಜ್ಞರು ನೇರಳಾತೀತ ಕಿರಣಗಳನ್ನು ಹೊರಸೂಸುವ ರ್ಯಾಕೆಟ್ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ದಿನಸಿ, ಕೀ, ನೋಟುಗಳು, ವಾಹನಗಳ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಮೇಲೆ ಈ ರ್ಯಾಕೆಟ್ಅನ್ನು ಬೀಸಿದರೆ ಸಾಕು, ಮೇಲ್ಮೈಗಳಲ್ಲಿ ಇರಬಹುದಾದ ಸೋಂಕನ್ನು ನಾಶಮಾಡಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.</p>.<p>ಇದು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗಿ, ಮಾರುಕಟ್ಟೆಗೆ ಬಂದರೆ ₹1,000ಗೆ ಲಭ್ಯವಾಗಲಿದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.</p>.<p>‘80 ಸೆಂ.ಮೀ. ಉದ್ದದ ಈ ಸಾಧನದಲ್ಲಿ ಅಂಡಾಕಾರದ ಟ್ಯೂಬ್ಗಳನ್ನು ಅಳವಡಿಸಲಾಗಿದೆ. ಈ ಟ್ಯೂಬ್ಗಳಿಂದ 200–280 ನ್ಯಾನೊಮೀಟರ್ ತರಂಗಾಂತರವುಳ್ಳ ನೇರಳಾತೀತ ಕಿರಣಗಳು ಹೊರಸೂಸುತ್ತವೆ. ಈ ಕಿರಣಗಳು ವ್ಯಕ್ತಿಯ ಮೇಲೆ ಬೀಳದಂತೆ ಮತ್ತೊಂದು ರ್ಯಾಕೆಟ್ನ ಮತ್ತೊಂದು ಬದಿಯನ್ನು ಲೋಹದಿಂದ ಮುಚ್ಚಲಾಗಿದೆ ಎಂದು ಎಲ್ಪಿಯುನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಂದೀಪ್ ಸಿಂಗ್ ವಿವಿರಿಸುತ್ತಾರೆ.</p>.<p>‘ಇ–ಕಾಮರ್ಸ್ ಕಂಪನಿಗಳು ಪೂರೈಸುವ ಸರಕುಗಳ ಮೇಲೆ, ಆಹಾರ ಪದಾರ್ಥಗಳ ಪೊಟ್ಟಣ, ಬ್ಯಾಗುಗಳ ಮೇಲೆ 4–5 ಅಂಗುಲ ಅಂತರದಲ್ಲಿ ಕೆಲವು ನಿಮಿಷಗಳ ಕಾಲ ಈ ರ್ಯಾಕೆಟ್ ಬೀಸಿದರೆ ಸೋಂಕು ನಾಶವಾಗುತ್ತದೆ. ಸೋಂಕುನಾಶ ಮಾಡುವಲ್ಲಿ ಈ ಸಾಧನ ಬಹಳಷ್ಟು ಪರಿಣಾಮಕಾರಿ’ ಎಂದೂ ಅವರು ಹೇಳುತ್ತಾರೆ.</p>.<p>‘ನೇರಳಾತೀತ ಕಿರಣಗಳಿಗೆ ಅಡ್ಡಲಾಗಿ ವ್ಯಕ್ತಿ ಬಂದ ತಕ್ಷಣ ಈ ಸಾಧನ ತನ್ನ ಕಾರ್ಯ ನಿಲ್ಲಿಸುತ್ತದೆ. ವ್ಯಕ್ತಿ ಮತ್ತು ಇತರ ವಸ್ತುಗಳನ್ನು ಗ್ರಹಿಸುವ ವ್ಯವಸ್ಥೆ ಇದರಲ್ಲಿದೆ. ಇದರಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ. 60 ಸೆಕೆಂಡ್ಗಳ ನಂತರ, ಬೀಪ್ ಶಬ್ದದ ಕೇಳಿ ಬರುತ್ತದೆ. ಕೂಡಲೇ ಈ ಸಾಧನ ತನ್ನ ಕಾರ್ಯವನ್ನು ನಿಲ್ಲಿಸುತ್ತದೆ’ ಎಂದು ಈ ಸಾಧನವನ್ನು ಅಭಿವೃದ್ಧಿಪಡಿಸಿರುವ ಎಲ್ಪಿಯುನ ವಿದ್ಯಾರ್ಥಿ ಅನಂತಕುಮಾರ್ ರಜಪೂತ್ ಹೇಳುತ್ತಾರೆ.</p>.<p><strong>ಔಷಧಿ ತಲುಪಿಸಲು ವಾರ್ಡ್ಬೋರ್ಡ್</strong></p>.<p>ಪ್ರತ್ಯೇಕಿಸಿದ ಕೇಂದ್ರಗಳಲ್ಲಿ ದಾಖಲಾಗಿರುವ ಕೋವಿಡ್–19 ರೋಗಿಗಳಿಗೆ ಆಹಾರ, ಔಷಧಿಗಳನ್ನು ತಲುಪಿಸಬಲ್ಲ ‘ವಾರ್ಡ್ಬೋಟ್’ ಅಭಿವೃದ್ಧಿಪಡಿಸಲು ಪಂಜಾಬ್ನ ಐಐಟಿ–ರೊಪಾರ್ನ ಸಂಶೋಧಕರು ಮುಂದಾಗಿದ್ದಾರೆ.</p>.<p>ಇದು ಕಾರ್ಯಗತವಾದಲ್ಲಿ, ಯಾವುದೇ ವ್ಯಕ್ತಿಯ ನೆರವಿಲ್ಲದೇ ರೋಗಿಗಳಿಗೆ ಆಹಾರ, ಔಷಧಿಗಳನ್ನು ತಲುಪಿಸಲು ಸಾಧ್ಯವಾಗಲಿದೆ. ವೈದ್ಯರು ಹಾಗೂ ಆರೊಗ್ಯಸೇವೆ ನಿರತರಿಗೆ, ರೋಗಿಗಳಿಂದ ಸೋಂಕು ತಗಲುವ ಭೀತಿಯೂ ಇರುವುದಿಲ್ಲ ಎಂದು ಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಏಕ್ತಾ ಸಿಂಗ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>‘ರೋಗಿಗೆ ಔಷಧಿ, ಆಹಾರ ತಲುಪಿಸಿ ಮರಳಿದ ಮೇಲೆ ತಾನಾಗಿಯೇ ಸ್ಯಾನಿಟೈಸ್ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಆಸ್ಪತ್ರೆಯ ಗೋಡೆಗಳನ್ನು ಸಹ ಸ್ಯಾನಿಟೈಸ್ ಮಾಡಬಲ್ಲದು’ ಎಂದು ವಾರ್ಡ್ಬೋಟ್ನ ವೈಶಿಷ್ಟ್ಯಗಳನ್ನು ವಿವರಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೊರೊನಾ ವೈರಸ್ ಪ್ರತಿಬಂಧಕ ಔಷಧಿಯ ಸಂಶೋಧನೆ ನಡೆಯುತ್ತಿದ್ದರೆ, ಇನ್ನೊಂದೆಡೆ, ನಾವು ಬಳಸುವ ವಿವಿಧ ವಸ್ತುಗಳಿಗೆ ಅಂಟಿರಬಹುದಾದ ಸೋಂಕು ನಾಶಪಡಿಸುವ ಸಾಧನಗಳ ಆವಿಷ್ಕಾರದಲ್ಲಿಯೂ ವಿಜ್ಞಾನಿಗಳು ನಿರತರಾಗಿದ್ದಾರೆ.</p>.<p>ಪಂಜಾಬ್ನ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ (ಎಲ್ಪಿಯು) ತಜ್ಞರು ನೇರಳಾತೀತ ಕಿರಣಗಳನ್ನು ಹೊರಸೂಸುವ ರ್ಯಾಕೆಟ್ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ದಿನಸಿ, ಕೀ, ನೋಟುಗಳು, ವಾಹನಗಳ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಮೇಲೆ ಈ ರ್ಯಾಕೆಟ್ಅನ್ನು ಬೀಸಿದರೆ ಸಾಕು, ಮೇಲ್ಮೈಗಳಲ್ಲಿ ಇರಬಹುದಾದ ಸೋಂಕನ್ನು ನಾಶಮಾಡಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.</p>.<p>ಇದು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗಿ, ಮಾರುಕಟ್ಟೆಗೆ ಬಂದರೆ ₹1,000ಗೆ ಲಭ್ಯವಾಗಲಿದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.</p>.<p>‘80 ಸೆಂ.ಮೀ. ಉದ್ದದ ಈ ಸಾಧನದಲ್ಲಿ ಅಂಡಾಕಾರದ ಟ್ಯೂಬ್ಗಳನ್ನು ಅಳವಡಿಸಲಾಗಿದೆ. ಈ ಟ್ಯೂಬ್ಗಳಿಂದ 200–280 ನ್ಯಾನೊಮೀಟರ್ ತರಂಗಾಂತರವುಳ್ಳ ನೇರಳಾತೀತ ಕಿರಣಗಳು ಹೊರಸೂಸುತ್ತವೆ. ಈ ಕಿರಣಗಳು ವ್ಯಕ್ತಿಯ ಮೇಲೆ ಬೀಳದಂತೆ ಮತ್ತೊಂದು ರ್ಯಾಕೆಟ್ನ ಮತ್ತೊಂದು ಬದಿಯನ್ನು ಲೋಹದಿಂದ ಮುಚ್ಚಲಾಗಿದೆ ಎಂದು ಎಲ್ಪಿಯುನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಂದೀಪ್ ಸಿಂಗ್ ವಿವಿರಿಸುತ್ತಾರೆ.</p>.<p>‘ಇ–ಕಾಮರ್ಸ್ ಕಂಪನಿಗಳು ಪೂರೈಸುವ ಸರಕುಗಳ ಮೇಲೆ, ಆಹಾರ ಪದಾರ್ಥಗಳ ಪೊಟ್ಟಣ, ಬ್ಯಾಗುಗಳ ಮೇಲೆ 4–5 ಅಂಗುಲ ಅಂತರದಲ್ಲಿ ಕೆಲವು ನಿಮಿಷಗಳ ಕಾಲ ಈ ರ್ಯಾಕೆಟ್ ಬೀಸಿದರೆ ಸೋಂಕು ನಾಶವಾಗುತ್ತದೆ. ಸೋಂಕುನಾಶ ಮಾಡುವಲ್ಲಿ ಈ ಸಾಧನ ಬಹಳಷ್ಟು ಪರಿಣಾಮಕಾರಿ’ ಎಂದೂ ಅವರು ಹೇಳುತ್ತಾರೆ.</p>.<p>‘ನೇರಳಾತೀತ ಕಿರಣಗಳಿಗೆ ಅಡ್ಡಲಾಗಿ ವ್ಯಕ್ತಿ ಬಂದ ತಕ್ಷಣ ಈ ಸಾಧನ ತನ್ನ ಕಾರ್ಯ ನಿಲ್ಲಿಸುತ್ತದೆ. ವ್ಯಕ್ತಿ ಮತ್ತು ಇತರ ವಸ್ತುಗಳನ್ನು ಗ್ರಹಿಸುವ ವ್ಯವಸ್ಥೆ ಇದರಲ್ಲಿದೆ. ಇದರಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ. 60 ಸೆಕೆಂಡ್ಗಳ ನಂತರ, ಬೀಪ್ ಶಬ್ದದ ಕೇಳಿ ಬರುತ್ತದೆ. ಕೂಡಲೇ ಈ ಸಾಧನ ತನ್ನ ಕಾರ್ಯವನ್ನು ನಿಲ್ಲಿಸುತ್ತದೆ’ ಎಂದು ಈ ಸಾಧನವನ್ನು ಅಭಿವೃದ್ಧಿಪಡಿಸಿರುವ ಎಲ್ಪಿಯುನ ವಿದ್ಯಾರ್ಥಿ ಅನಂತಕುಮಾರ್ ರಜಪೂತ್ ಹೇಳುತ್ತಾರೆ.</p>.<p><strong>ಔಷಧಿ ತಲುಪಿಸಲು ವಾರ್ಡ್ಬೋರ್ಡ್</strong></p>.<p>ಪ್ರತ್ಯೇಕಿಸಿದ ಕೇಂದ್ರಗಳಲ್ಲಿ ದಾಖಲಾಗಿರುವ ಕೋವಿಡ್–19 ರೋಗಿಗಳಿಗೆ ಆಹಾರ, ಔಷಧಿಗಳನ್ನು ತಲುಪಿಸಬಲ್ಲ ‘ವಾರ್ಡ್ಬೋಟ್’ ಅಭಿವೃದ್ಧಿಪಡಿಸಲು ಪಂಜಾಬ್ನ ಐಐಟಿ–ರೊಪಾರ್ನ ಸಂಶೋಧಕರು ಮುಂದಾಗಿದ್ದಾರೆ.</p>.<p>ಇದು ಕಾರ್ಯಗತವಾದಲ್ಲಿ, ಯಾವುದೇ ವ್ಯಕ್ತಿಯ ನೆರವಿಲ್ಲದೇ ರೋಗಿಗಳಿಗೆ ಆಹಾರ, ಔಷಧಿಗಳನ್ನು ತಲುಪಿಸಲು ಸಾಧ್ಯವಾಗಲಿದೆ. ವೈದ್ಯರು ಹಾಗೂ ಆರೊಗ್ಯಸೇವೆ ನಿರತರಿಗೆ, ರೋಗಿಗಳಿಂದ ಸೋಂಕು ತಗಲುವ ಭೀತಿಯೂ ಇರುವುದಿಲ್ಲ ಎಂದು ಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಏಕ್ತಾ ಸಿಂಗ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>‘ರೋಗಿಗೆ ಔಷಧಿ, ಆಹಾರ ತಲುಪಿಸಿ ಮರಳಿದ ಮೇಲೆ ತಾನಾಗಿಯೇ ಸ್ಯಾನಿಟೈಸ್ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಆಸ್ಪತ್ರೆಯ ಗೋಡೆಗಳನ್ನು ಸಹ ಸ್ಯಾನಿಟೈಸ್ ಮಾಡಬಲ್ಲದು’ ಎಂದು ವಾರ್ಡ್ಬೋಟ್ನ ವೈಶಿಷ್ಟ್ಯಗಳನ್ನು ವಿವರಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>