<p><strong>ಅಯೋಧ್ಯೆ:</strong> ಇಲ್ಲಿನ ರಾಮ ಮಂದಿರ ಪ್ರವೇಶಕ್ಕೂ ಮುನ್ನ ಸ್ನಾನಕ್ಕೆಂದು ಸರಯೂ ನದಿಗೆ ಇಳಿದ ಓರ್ವ ಅಪ್ರಾಪ್ತ ಸೇರಿ ಕಾನ್ಪುರ ಮೂಲದ ಮೂವರು ಸ್ನೇಹಿತರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ರವಿ ಮಿಶ್ರಾ (20), ಪ್ರಿಯಾಂಶು ಸಿಂಗ್ (16) ಹಾಗೂ ಹರ್ಷಿತ್ ಅವಸ್ಥಿ (18) ಮೃತರು. ರಾಮ ಮಂದಿರ ದರ್ಶನಕ್ಕಾಗಿ ಇವರು ಕಾನ್ಪುರದಿಂದ ಬಂದಿದ್ದರು.</p><p>‘ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳೀಯರು ಇವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ನಗರ) ಮಧುವನ್ ಕುಮಾರ್ ಹೇಳಿದ್ದಾರೆ.</p><p>ಘಟನೆ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. </p><p>ಘಾಟ್ನಲ್ಲಿ ಸಾಮಾನ್ಯ ಸ್ನಾನಕ್ಕೆ ಬದಲಾಗಿ, ಇವರು ರಾಮಕಥಾ ಪಾರ್ಕ್ ಸಮೀಪದ ಸ್ಮಶಾನ ಭೂಮಿಯ ಪಕ್ಕ ಇರುವ ನದಿ ದಂಡೆಯಲ್ಲಿ ಸ್ಥಾನ ಮಾಡಲು ಇಳಿದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯೆ:</strong> ಇಲ್ಲಿನ ರಾಮ ಮಂದಿರ ಪ್ರವೇಶಕ್ಕೂ ಮುನ್ನ ಸ್ನಾನಕ್ಕೆಂದು ಸರಯೂ ನದಿಗೆ ಇಳಿದ ಓರ್ವ ಅಪ್ರಾಪ್ತ ಸೇರಿ ಕಾನ್ಪುರ ಮೂಲದ ಮೂವರು ಸ್ನೇಹಿತರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ರವಿ ಮಿಶ್ರಾ (20), ಪ್ರಿಯಾಂಶು ಸಿಂಗ್ (16) ಹಾಗೂ ಹರ್ಷಿತ್ ಅವಸ್ಥಿ (18) ಮೃತರು. ರಾಮ ಮಂದಿರ ದರ್ಶನಕ್ಕಾಗಿ ಇವರು ಕಾನ್ಪುರದಿಂದ ಬಂದಿದ್ದರು.</p><p>‘ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳೀಯರು ಇವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ನಗರ) ಮಧುವನ್ ಕುಮಾರ್ ಹೇಳಿದ್ದಾರೆ.</p><p>ಘಟನೆ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. </p><p>ಘಾಟ್ನಲ್ಲಿ ಸಾಮಾನ್ಯ ಸ್ನಾನಕ್ಕೆ ಬದಲಾಗಿ, ಇವರು ರಾಮಕಥಾ ಪಾರ್ಕ್ ಸಮೀಪದ ಸ್ಮಶಾನ ಭೂಮಿಯ ಪಕ್ಕ ಇರುವ ನದಿ ದಂಡೆಯಲ್ಲಿ ಸ್ಥಾನ ಮಾಡಲು ಇಳಿದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>