<p><strong>ಇಂಫಾಲ:</strong> ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸುಲಿಗೆಯಲ್ಲಿ ತೊಡಗಿದ್ದ ಆರೋಪದಲ್ಲಿ ಮೈತೇಯಿ ತೀವ್ರಗಾಮಿ ಸಂಘಟನೆ ಅರಂಬೈ ತೆಂಗೋಲ್ನ ಮೂವರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.</p><p>ಇಂಫಾಲ-ಜಿರೀಬಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳ ಚಾಲಕರಿಂದ ಹಣ ಸುಲಿಗೆ ಮಾಡಿ ಚಲನ್ ನೀಡುತ್ತಿದ್ದ ಆರೋಪದಲ್ಲಿ ಜಿಲ್ಲೆಯ ಕೀತೆಲ್ಮಂಬಿಯಿಂದ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.Manipur Violence | ಮೈತೇಯಿ ಕಡೆಯಿಂದಲೂ ಶಾಂತಿ ಅಗತ್ಯ: ಕುಕಿ.<p>ತಂಗ್ಜಮ್ ಜಾರ್ಜ್ ಸಿಂಗ್ (28), ಅಬುಜಮ್ ನರೇಂದ್ರ ಸಿಂಗ್ (21) ಮತ್ತು ವಾಹೆಂಗಬಾಮ್ ಅಮರ್ಜಿತ್ ಸಿಂಗ್ (35) ಬಂಧಿತರು.</p><p>ಅವರಿಂದ ಪ್ರಿಂಟರ್, ಒಂಬತ್ತು ಪೇಪರ್ ರೋಲ್ಗಳು, ಎರಡು ವೈರ್ಲೆಸ್ ಸೆಟ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಕಾಕ್ಚಿಂಗ್, ತೌಬಾಲ್ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಸುಲಿಗೆ, ಕಾರ್ಯಕರ್ತರ ನೇಮಕಾತಿ ಮತ್ತು ಅಪಹರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಿಷೇಧಿತ ಸಂಘಟನೆಯಾದ ಕಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ತೈಬಂಗಾನ್ಬಾ) ಸದಸ್ಯನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.Manipur Violence | ಮೈತೇಯಿ ಸಮುದಾಯದ ವ್ಯಕ್ತಿ ನಾಪತ್ತೆ, ಮತ್ತೆ ಉದ್ವಿಗ್ನ.<p>ಪ್ರಕರಣದಲ್ಲಿ ಲೀಸಾಂಗ್ಥೆಮ್ ರಾಜೇಶ್ ಸಿಂಗ್ನನ್ನು ಕಾಕ್ಚಿಂಗ್ ಜಿಲ್ಲೆಯ ಲಾಂಗ್ಮೇಡಾಂಗ್ ಮಾಮಾಂಗ್ ಅವಾಂಗ್ ಲೈಕೈ ಪ್ರದೇಶದಲ್ಲಿ ಶನಿವಾರ ಬಂಧಿಸಲಾಗಿದೆ.</p><p>ಮತ್ತೊಂದು ಕಾರ್ಯಾಚರಣೆಯಲ್ಲಿ, ನಿಷೇಧಿತ ಸಂಘಟನೆ ಎನ್ಆರ್ಎಫ್ಎಂ ಸದಸ್ಯ ಮೀತ್ರಮ್ ಸೊಮೊರ್ಜಿತ್ ಸಿಂಗ್ನನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಖುಂಬೋಂಗ್ ಬಜಾರ್ನಲ್ಲಿ ಬಂಧಿಸಲಾಗಿದೆ.</p><p>ಆತನಿಂದ ಬಂದೂಕು, ಮದ್ದುಗುಂಡುಗಳು, ಐದು ಮೊಬೈಲ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p> .ಜಿರೀಬಾಮ್: ಇಬ್ಬರು ‘ಮೈತೇಯಿ’ ವೃದ್ಧರ ಶವ ಪತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ:</strong> ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಸುಲಿಗೆಯಲ್ಲಿ ತೊಡಗಿದ್ದ ಆರೋಪದಲ್ಲಿ ಮೈತೇಯಿ ತೀವ್ರಗಾಮಿ ಸಂಘಟನೆ ಅರಂಬೈ ತೆಂಗೋಲ್ನ ಮೂವರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.</p><p>ಇಂಫಾಲ-ಜಿರೀಬಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳ ಚಾಲಕರಿಂದ ಹಣ ಸುಲಿಗೆ ಮಾಡಿ ಚಲನ್ ನೀಡುತ್ತಿದ್ದ ಆರೋಪದಲ್ಲಿ ಜಿಲ್ಲೆಯ ಕೀತೆಲ್ಮಂಬಿಯಿಂದ ಅವರನ್ನು ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.Manipur Violence | ಮೈತೇಯಿ ಕಡೆಯಿಂದಲೂ ಶಾಂತಿ ಅಗತ್ಯ: ಕುಕಿ.<p>ತಂಗ್ಜಮ್ ಜಾರ್ಜ್ ಸಿಂಗ್ (28), ಅಬುಜಮ್ ನರೇಂದ್ರ ಸಿಂಗ್ (21) ಮತ್ತು ವಾಹೆಂಗಬಾಮ್ ಅಮರ್ಜಿತ್ ಸಿಂಗ್ (35) ಬಂಧಿತರು.</p><p>ಅವರಿಂದ ಪ್ರಿಂಟರ್, ಒಂಬತ್ತು ಪೇಪರ್ ರೋಲ್ಗಳು, ಎರಡು ವೈರ್ಲೆಸ್ ಸೆಟ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಕಾಕ್ಚಿಂಗ್, ತೌಬಾಲ್ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಸುಲಿಗೆ, ಕಾರ್ಯಕರ್ತರ ನೇಮಕಾತಿ ಮತ್ತು ಅಪಹರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಿಷೇಧಿತ ಸಂಘಟನೆಯಾದ ಕಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ತೈಬಂಗಾನ್ಬಾ) ಸದಸ್ಯನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.Manipur Violence | ಮೈತೇಯಿ ಸಮುದಾಯದ ವ್ಯಕ್ತಿ ನಾಪತ್ತೆ, ಮತ್ತೆ ಉದ್ವಿಗ್ನ.<p>ಪ್ರಕರಣದಲ್ಲಿ ಲೀಸಾಂಗ್ಥೆಮ್ ರಾಜೇಶ್ ಸಿಂಗ್ನನ್ನು ಕಾಕ್ಚಿಂಗ್ ಜಿಲ್ಲೆಯ ಲಾಂಗ್ಮೇಡಾಂಗ್ ಮಾಮಾಂಗ್ ಅವಾಂಗ್ ಲೈಕೈ ಪ್ರದೇಶದಲ್ಲಿ ಶನಿವಾರ ಬಂಧಿಸಲಾಗಿದೆ.</p><p>ಮತ್ತೊಂದು ಕಾರ್ಯಾಚರಣೆಯಲ್ಲಿ, ನಿಷೇಧಿತ ಸಂಘಟನೆ ಎನ್ಆರ್ಎಫ್ಎಂ ಸದಸ್ಯ ಮೀತ್ರಮ್ ಸೊಮೊರ್ಜಿತ್ ಸಿಂಗ್ನನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಖುಂಬೋಂಗ್ ಬಜಾರ್ನಲ್ಲಿ ಬಂಧಿಸಲಾಗಿದೆ.</p><p>ಆತನಿಂದ ಬಂದೂಕು, ಮದ್ದುಗುಂಡುಗಳು, ಐದು ಮೊಬೈಲ್ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p> .ಜಿರೀಬಾಮ್: ಇಬ್ಬರು ‘ಮೈತೇಯಿ’ ವೃದ್ಧರ ಶವ ಪತ್ತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>