ಈ ಲೋಕಸಭಾ ಕ್ಷೇತ್ರದ (ಎಸ್.ಸಿ) ಪ್ರತಿನಿಧಿಯಾಗಿದ್ದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಕಳೆದ ಸೆಪ್ಟೆಂಬರ್ನಲ್ಲಿ ನಿಧನರಾಗಿದ್ದರು. ಆಂಧ್ರಪ್ರದೇಶದ ಮಾಜಿ ಐಎಎಸ್ ಅಧಿಕಾರಿ ದಾಸರಿ ಶ್ರೀನಿವಾಸುಲು, ತೆಲಂಗಾಣ ಕೇಡರ್ನ ನಿವೃತ್ತ ಮಾಜಿ ಐಪಿಎಸ್ ಅಧಿಕಾರಿ ಮುನಿ ಸುಬ್ರಹ್ಮಣ್ಯಂ ಅವರು ಸಹ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ರತ್ನಪ್ರಭಾ ಅವರಿಗೆ ಅವಕಾಶ ದೊರೆತಿದೆ.