ಕೋಲ್ಕತ್ತ: ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್(ಟಿಎಂಸಿ) ನಡುವೆ ಇದೀಗ ವಿವಾದ ಭುಗಿಲೆದಿದ್ದು, ಕಾಂಗ್ರೆಸ್ ಹಿರಿಯ ನಾಯಕ, ಬಹರಾಂಪುರ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಟಿಎಂಸಿ ಗೂಂಡಾಗಿರಿ ಆರೋಪ ಮಾಡಿದೆ.
ಈ ಕುರಿತಂತೆ ವಿಡಿಯೊವೊಂದನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, ಅಧೀರ್ ರಂಜನ್ ಚೌಧರಿ ಅವರಿಂದ ಗೂಂಡಾಗಿರಿ ಪ್ರದರ್ಶನ ಎಂದು ಬರೆದುಕೊಂಡಿದೆ.
‘ಬಹರಾಂಪುರದಲ್ಲಿ ನಿಮ್ಮ ದುಷ್ಕೃತ್ಯಗಳು ಗಮನಕ್ಕೆ ಬರುವುದಿಲ್ಲ ಎಂದುಕೊಂಡಿದ್ದೀರಾ? ಚುನಾವಣೆಯಲ್ಲಿ ಸೋಲುವ ಭಯ ಕಾಡಿದೆ ಎಂದು ನಿಮ್ಮ ನಡೆಗಳಿಂದಲೇ ಸ್ಪಷ್ಟವಾಗುತ್ತಿದೆ. ನಮ್ಮ ಕಾರ್ಯಕರ್ತರ ಎದುರು ಗೂಂಡಾಗಿರಿ ಪ್ರದರ್ಶಿಸುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ’ ಎಂದು ಟಿಎಂಸಿ ಬರೆದುಕೊಂಡಿದೆ.