<p><strong>ಚೆನ್ನೈ:</strong> ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತ ಸ್ಥಾನಗಳನಷ್ಟೆ ನಾವು ಕೇಳುತ್ತಿದ್ದೇವೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟಾಗೋರ್ ಶನಿವಾರ ಹೇಳಿದ್ದಾರೆ.</p><p>2021ರ ಚುನಾವಣೆಯಲ್ಲಿ ನೀವು 173 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 133 ಸ್ಥಾನಗಳನ್ನು ಗೆದ್ದಿದ್ದೀರಿ. ನೀವು ಗೆಲ್ಲದ ಕ್ಷೇತ್ರಗಳನ್ನಷ್ಟೇ ನಾವು ಕೇಳುತ್ತಿದ್ದೇವೆ ಎಂದು ಸಂಸದ ಟಾಗೋರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>ಮುಂಬರುವ ಚುನಾವಣೆಯಲ್ಲಿ ಡಿಎಂಕೆ 170 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 160 ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಎಂಕೆ ನಾಯಕ ಆರ್.ಎಸ್. ರಾಜಾ ಕಣ್ಣಪ್ಪನ್ ನಿನ್ನೆ ಮದುರೈನಲ್ಲಿ ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರು ಮೈತ್ರಿ ಸರ್ಕಾರವನ್ನು ತಳ್ಳಿ ಹಾಕಿದ್ದಾರೆ. </p><p>ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಟಾಗೋರ್, ನೀವು ಸೋತ ಸ್ಥಾನಗಳನ್ನು ಮಾತ್ರ ನಾವು ಕೇಳುತ್ತಿದ್ದೇವೆ ಹಾಗೂ ಅಧಿಕಾರ ಹಂಚಿಕೆ ಅತ್ಯಗತ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಅಧಿಕಾರದಲ್ಲಿ ಪಾಲು ಕೇಳುವುದು ನಮ್ಮ ಹಕ್ಕು, ಇದು ಜನರ ತೀರ್ಮಾನ ಎಂದು ಟಾಗೋರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿದ್ದಾರೆ. </p>.ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್.ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋತ ಸ್ಥಾನಗಳನಷ್ಟೆ ನಾವು ಕೇಳುತ್ತಿದ್ದೇವೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟಾಗೋರ್ ಶನಿವಾರ ಹೇಳಿದ್ದಾರೆ.</p><p>2021ರ ಚುನಾವಣೆಯಲ್ಲಿ ನೀವು 173 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 133 ಸ್ಥಾನಗಳನ್ನು ಗೆದ್ದಿದ್ದೀರಿ. ನೀವು ಗೆಲ್ಲದ ಕ್ಷೇತ್ರಗಳನ್ನಷ್ಟೇ ನಾವು ಕೇಳುತ್ತಿದ್ದೇವೆ ಎಂದು ಸಂಸದ ಟಾಗೋರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>ಮುಂಬರುವ ಚುನಾವಣೆಯಲ್ಲಿ ಡಿಎಂಕೆ 170 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 160 ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಎಂಕೆ ನಾಯಕ ಆರ್.ಎಸ್. ರಾಜಾ ಕಣ್ಣಪ್ಪನ್ ನಿನ್ನೆ ಮದುರೈನಲ್ಲಿ ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಅವರು ಮೈತ್ರಿ ಸರ್ಕಾರವನ್ನು ತಳ್ಳಿ ಹಾಕಿದ್ದಾರೆ. </p><p>ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಟಾಗೋರ್, ನೀವು ಸೋತ ಸ್ಥಾನಗಳನ್ನು ಮಾತ್ರ ನಾವು ಕೇಳುತ್ತಿದ್ದೇವೆ ಹಾಗೂ ಅಧಿಕಾರ ಹಂಚಿಕೆ ಅತ್ಯಗತ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಅಧಿಕಾರದಲ್ಲಿ ಪಾಲು ಕೇಳುವುದು ನಮ್ಮ ಹಕ್ಕು, ಇದು ಜನರ ತೀರ್ಮಾನ ಎಂದು ಟಾಗೋರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೇಳಿದ್ದಾರೆ. </p>.ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್.ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>