ಅಯೋಧ್ಯೆ: ‘ಇಂದಿನಿಂದ ರಾಮರಾಜ್ಯ ಶುರುವಾಗಲಿದೆ’ ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ X ನಲ್ಲಿ ಸೋಮವಾರ ಮಾಹಿತಿ ನೀಡಿದೆ.
‘ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಮೂಲಕ ಎಲ್ಲ ಅಸಮಾನತೆಗಳು ಕೊನೆಗೊಳ್ಳುತ್ತವೆ. ರಾಮ ರಾಜ್ಯ ಶುರು ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಇನ್ಮುಂದೆ ಎಲ್ಲರೂ ಸಂತುಷ್ಟವಾಗಿ ಜೀವಿಸುತ್ತಾರೆ. ಭಗವಂತ ರಾಮ ಎಲ್ಲರಿಗೂ ಆಶೀರ್ವದಿಸಲಿದ್ದಾನೆ’ ಎಂದು ಅವರು ಹೇಳಿದ್ದಾರೆ.