<p>ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಭಾರತದ ಮೇಲಿನ ವಿಶ್ವದ ನಂಬಿಕೆಯೇ ನಮ್ಮ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಭಾರತೀಯ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳು ನೈತಿಕ, ಪಕ್ಷಪಾತವಿಲ್ಲದ, ಪಾರದರ್ಶಕ ಮತ್ತು ದತ್ತಾಂಶ ಗೌಪ್ಯತಾ ತತ್ವಗಳನ್ನು ಆಧರಿಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/india-news/indian-ai-startups-global-leadership-modi-3718320">ಭಾರತದ ಎಐ ನವೋದ್ಯಮಗಳು ಜಾಗತಿಕ ನಾಯಕತ್ವದತ್ತ ಮುನ್ನಡೆಯಬೇಕು: ಮೋದಿ</a></strong></p>.<p>2 ಬಿಲಿಯನ್ ಡಾಲರ್ನಷ್ಟು (1,79,98,70,00,000 ರೂಪಾಯಿ) ಸೌದಿ ಅರೇಬಿಯಾದ ಸಾಲವನ್ನು ಜೆಎಫ್–17 ಫೈಟರ್ ಜೆಟ್ಗಳ ಒಪ್ಪಂದವಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಮಾತುಕತೆ ನಡೆಸಿವೆ ಎಂದು ವರದಿ ತಿಳಿಸಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/world-news/saudi-pakistan-jf-seventeen-jet-deal-3718258">ಸಾಲವನ್ನು ಜೆಎಫ್–17 ಫೈಟರ್ ಜೆಟ್ ಒಪ್ಪಂದವಾಗಿ ಪರಿವರ್ತಿಸಲು ಸೌದಿ–ಪಾಕ್ ಚರ್ಚೆ</a></strong></p>.<p>ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಇನ್ನೊಂದು ವಾರ ಉಳಿದಿದೆ. ಅದೇ ರೀತಿ ಗಣರಾಜ್ಯೋತ್ಸವವೂ ಸನ್ನಿಹಿತವಾಗಿದೆ. ಹೀಗಾಗಿ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ತೆರಳುವವರಿಗೆ ಅನುಕೂಲವಾಗಲು ವಿಶೇಷ ರೈಲುಗಳು ಸಂಚರಿಸುತ್ತಿವೆ. ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. </p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/karnataka-news/special-trains-sankranti-republic-day-routes-3718379">ಸಂಕ್ರಾಂತಿ, ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ರೈಲು: ಎಲ್ಲೆಲ್ಲಿ?</a></strong></p>.<p>‘ಕುಮಾರಸ್ವಾಮಿಯವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆಯಿದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/karnataka-news/bjp-jds-merger-dk-shivakumar-statement-3718167">ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ</a></strong></p>.<p>ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ವಿದರ್ಭ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಇಂದು (ಗುರುವಾರ) ಚಂಡೀಗಢ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/sports/cricket/hardik-pandya-explosive-batting-vijay-hazare-3718375">9 ಸಿಕ್ಸರ್, 2 ಬೌಂಡರಿ: VHTಯಲ್ಲಿ ಮುಂದುವರಿದ ಹಾರ್ದಿಕ್ ಬ್ಯಾಟಿಂಗ್ ಅಬ್ಬರ</a></strong></p>.<p>ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಆಯೋಗವು ಪ್ರಕಟಣೆ ಹೊರಡಿಸಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/karnataka-news/ncw-takes-suo-motu-cognizance-of-hubli-woman-incident-3718141">ಹುಬ್ಬಳ್ಳಿ ಮಹಿಳೆ ವಿವಸ್ತ್ರ: ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು</a></strong></p>.<p>ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ 4ನೇ ದಿನವೂ ಕುಸಿತ ದಾಖಲಿಸಿದ್ದು, ಗುರುವಾರ ಶೇ 1ರಷ್ಟು ಕುಸಿದಿವೆ. ಅಮೆರಿಕದ ಸುಂಕ ಏರಿಕೆಯ ಹೊಸ ಆತಂಕದ ನಡುವೆ ಷೇರು ಮಾರಾಟ ಜೋರಾಗಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/business/stock-market/stock-market-sensex-nifty-fourth-day-loss-3718957">ಅಮೆರಿಕದಿಂದ ಹೊಸ ಸುಂಕ ಭೀತಿ: ಷೇರುಪೇಟೆಯಲ್ಲಿ ತಲ್ಲಣ</a></strong></p>.<p>ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಸಿಎಂ ಮಮತಾ ಬ್ಯಾನರ್ಜಿ ಅವರು ಕಾರ್ಯಾಚರಣೆ ವೇಳೆ ಅಕ್ರಮವಾಗಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇನಾಲಯದ (ಇ.ಡಿ) ಅಧಿಕಾರಿಗಳು ಕಲ್ಕತ್ತ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><a href="https://www.prajavani.net/news/india-news/i-pac-office-raid-ed-moves-calcutta-high-court-says-mamata-removed-key-evidence-3718306">I-PAC ಕಚೇರಿ ಮೇಲೆ ED ದಾಳಿ | ಶೋಧಕ್ಕೆ ಮಮತಾ ಅಡ್ಡಿ: ಅಧಿಕಾರಿಗಳು ಕೋರ್ಟ್ ಮೊರೆ</a></p>.<p>ರಷ್ಯಾದಿಂದ ತೈಲ ಖರೀಸುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ಸೂಚಿಸಿದ್ದಾರೆ. </p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/world-news/donald-trump-supports-tariff-bill-against-india-china-3718704">ಭಾರತ, ಚೀನಾ ವಿರುದ್ಧ ಶೇ 500ರಷ್ಟು ಸುಂಕ ಹೇರಲು ಅವಕಾಶ: ಮಸೂದೆಗೆ ಟ್ರಂಪ್ ಒಪ್ಪಿಗೆ</a></strong></p>.<p>‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದಲ್ಲಿ ನಟ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಚಿತ್ರತಂಡ ಗುರುವಾರ (ಜ.8) ಬಹಿರಂಗಗೊಳಿಸಿದೆ. ಯಶ್ ಜನ್ಮದಿನದಂದು ‘ಟಾಕ್ಸಿಕ್’ ಸಿನಿಮಾದಲ್ಲಿನ ‘ರಾಯ’ ಪಾತ್ರವನ್ನು ಪರಿಚಯಿಸುವ ವಿಡಿಯೊ ಬಿಡುಗಡೆಯಾಗಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><br><strong><a href="https://www.prajavani.net/entertainment/cinema/yash-ray-role-toxic-trailer-3717958">‘ರಾಯ’ನಾದ ರಾಕಿ ಬಾಯ್; ಟಾಕ್ಸಿಕ್ನಲ್ಲಿ ಯಶ್ ಅಬ್ಬರ ಬಲು ಜೋರು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ, ದೇಶ, ವಿದೇಶಕ್ಕೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p>.<p>ಭಾರತದ ಮೇಲಿನ ವಿಶ್ವದ ನಂಬಿಕೆಯೇ ನಮ್ಮ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಭಾರತೀಯ ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳು ನೈತಿಕ, ಪಕ್ಷಪಾತವಿಲ್ಲದ, ಪಾರದರ್ಶಕ ಮತ್ತು ದತ್ತಾಂಶ ಗೌಪ್ಯತಾ ತತ್ವಗಳನ್ನು ಆಧರಿಸಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/india-news/indian-ai-startups-global-leadership-modi-3718320">ಭಾರತದ ಎಐ ನವೋದ್ಯಮಗಳು ಜಾಗತಿಕ ನಾಯಕತ್ವದತ್ತ ಮುನ್ನಡೆಯಬೇಕು: ಮೋದಿ</a></strong></p>.<p>2 ಬಿಲಿಯನ್ ಡಾಲರ್ನಷ್ಟು (1,79,98,70,00,000 ರೂಪಾಯಿ) ಸೌದಿ ಅರೇಬಿಯಾದ ಸಾಲವನ್ನು ಜೆಎಫ್–17 ಫೈಟರ್ ಜೆಟ್ಗಳ ಒಪ್ಪಂದವಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಮಾತುಕತೆ ನಡೆಸಿವೆ ಎಂದು ವರದಿ ತಿಳಿಸಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/world-news/saudi-pakistan-jf-seventeen-jet-deal-3718258">ಸಾಲವನ್ನು ಜೆಎಫ್–17 ಫೈಟರ್ ಜೆಟ್ ಒಪ್ಪಂದವಾಗಿ ಪರಿವರ್ತಿಸಲು ಸೌದಿ–ಪಾಕ್ ಚರ್ಚೆ</a></strong></p>.<p>ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಇನ್ನೊಂದು ವಾರ ಉಳಿದಿದೆ. ಅದೇ ರೀತಿ ಗಣರಾಜ್ಯೋತ್ಸವವೂ ಸನ್ನಿಹಿತವಾಗಿದೆ. ಹೀಗಾಗಿ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ತೆರಳುವವರಿಗೆ ಅನುಕೂಲವಾಗಲು ವಿಶೇಷ ರೈಲುಗಳು ಸಂಚರಿಸುತ್ತಿವೆ. ನೈರುತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. </p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/karnataka-news/special-trains-sankranti-republic-day-routes-3718379">ಸಂಕ್ರಾಂತಿ, ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ರೈಲು: ಎಲ್ಲೆಲ್ಲಿ?</a></strong></p>.<p>‘ಕುಮಾರಸ್ವಾಮಿಯವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆಯಿದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/karnataka-news/bjp-jds-merger-dk-shivakumar-statement-3718167">ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ</a></strong></p>.<p>ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ವಿದರ್ಭ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಇಂದು (ಗುರುವಾರ) ಚಂಡೀಗಢ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/sports/cricket/hardik-pandya-explosive-batting-vijay-hazare-3718375">9 ಸಿಕ್ಸರ್, 2 ಬೌಂಡರಿ: VHTಯಲ್ಲಿ ಮುಂದುವರಿದ ಹಾರ್ದಿಕ್ ಬ್ಯಾಟಿಂಗ್ ಅಬ್ಬರ</a></strong></p>.<p>ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಆಯೋಗವು ಪ್ರಕಟಣೆ ಹೊರಡಿಸಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/karnataka-news/ncw-takes-suo-motu-cognizance-of-hubli-woman-incident-3718141">ಹುಬ್ಬಳ್ಳಿ ಮಹಿಳೆ ವಿವಸ್ತ್ರ: ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು</a></strong></p>.<p>ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ 4ನೇ ದಿನವೂ ಕುಸಿತ ದಾಖಲಿಸಿದ್ದು, ಗುರುವಾರ ಶೇ 1ರಷ್ಟು ಕುಸಿದಿವೆ. ಅಮೆರಿಕದ ಸುಂಕ ಏರಿಕೆಯ ಹೊಸ ಆತಂಕದ ನಡುವೆ ಷೇರು ಮಾರಾಟ ಜೋರಾಗಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/business/stock-market/stock-market-sensex-nifty-fourth-day-loss-3718957">ಅಮೆರಿಕದಿಂದ ಹೊಸ ಸುಂಕ ಭೀತಿ: ಷೇರುಪೇಟೆಯಲ್ಲಿ ತಲ್ಲಣ</a></strong></p>.<p>ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಸಿಎಂ ಮಮತಾ ಬ್ಯಾನರ್ಜಿ ಅವರು ಕಾರ್ಯಾಚರಣೆ ವೇಳೆ ಅಕ್ರಮವಾಗಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇನಾಲಯದ (ಇ.ಡಿ) ಅಧಿಕಾರಿಗಳು ಕಲ್ಕತ್ತ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><a href="https://www.prajavani.net/news/india-news/i-pac-office-raid-ed-moves-calcutta-high-court-says-mamata-removed-key-evidence-3718306">I-PAC ಕಚೇರಿ ಮೇಲೆ ED ದಾಳಿ | ಶೋಧಕ್ಕೆ ಮಮತಾ ಅಡ್ಡಿ: ಅಧಿಕಾರಿಗಳು ಕೋರ್ಟ್ ಮೊರೆ</a></p>.<p>ರಷ್ಯಾದಿಂದ ತೈಲ ಖರೀಸುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ಸೂಚಿಸಿದ್ದಾರೆ. </p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><strong><a href="https://www.prajavani.net/news/world-news/donald-trump-supports-tariff-bill-against-india-china-3718704">ಭಾರತ, ಚೀನಾ ವಿರುದ್ಧ ಶೇ 500ರಷ್ಟು ಸುಂಕ ಹೇರಲು ಅವಕಾಶ: ಮಸೂದೆಗೆ ಟ್ರಂಪ್ ಒಪ್ಪಿಗೆ</a></strong></p>.<p>‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದಲ್ಲಿ ನಟ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಚಿತ್ರತಂಡ ಗುರುವಾರ (ಜ.8) ಬಹಿರಂಗಗೊಳಿಸಿದೆ. ಯಶ್ ಜನ್ಮದಿನದಂದು ‘ಟಾಕ್ಸಿಕ್’ ಸಿನಿಮಾದಲ್ಲಿನ ‘ರಾಯ’ ಪಾತ್ರವನ್ನು ಪರಿಚಯಿಸುವ ವಿಡಿಯೊ ಬಿಡುಗಡೆಯಾಗಿದೆ.</p><p><strong>ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ಕಿಸಿ</strong></p><p><br><strong><a href="https://www.prajavani.net/entertainment/cinema/yash-ray-role-toxic-trailer-3717958">‘ರಾಯ’ನಾದ ರಾಕಿ ಬಾಯ್; ಟಾಕ್ಸಿಕ್ನಲ್ಲಿ ಯಶ್ ಅಬ್ಬರ ಬಲು ಜೋರು</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>