<p><strong>ಚೆನ್ನೈ: </strong>ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿ ಶಿಯೋಮಿಯ ₹15 ಕೋಟಿ ಮೌಲ್ಯದ ಮೊಬೈಲ್ಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಮಿಳುನಾಡಿನ ಕೃಷ್ಣಗಿರಿ ಸಮೀಪ 10 ಜನರ ಕಳ್ಳರ ಗುಂಪೊಂದು ದೋಚಿದ್ದು, 14,400 ಮೊಬೈಲ್ಗಳೊಂದಿಗೆ ಪರಾರಿಯಾಗಿದ್ದಾರೆ.</p>.<p>ಮಧ್ಯಪ್ರದೇಶದ ‘ಕಂಜರ್ ಗ್ಯಾಂಗ್’ ಈ ಕೃತ್ಯ ನಡೆಸಿರುವ ಶಂಕೆ ಇದ್ದು, ಕಳ್ಳರ ಬೆನ್ನತ್ತಿ 9 ಪೊಲೀಸರ ತಂಡವು ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ತೆರಳಿದೆ. ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಶ್ರೀಪೆರಂಬದೂರಿನಲ್ಲಿ ಇರುವ ಮೊಬೈಲ್ ತಯಾರಿಕಾ ಘಟಕದಿಂದಲೇ ಡಿಎಚ್ಎಲ್ ಕೊರಿಯರ್ ಕಂಪನಿಗೆ ಸೇರಿದ ಈ ಟ್ರಕ್ ಅನ್ನು ಕಳ್ಳರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೃಷ್ಣಗಿರಿ ಸಮೀಪ ಯಾರೂ ಇಲ್ಲದ ಪ್ರದೇಶದಲ್ಲಿ ಟ್ರಕ್ ತಡೆದು, ಎಲ್ಲ ಮೊಬೈಲ್ಗಳನ್ನು ದೋಚಿದ್ದಾರೆ. ಮೊಬೈಲ್ಗಳನ್ನು ಮುಂಬೈನಲ್ಲಿರುವ ಪ್ಯಾಕಿಂಗ್ ಘಟಕಕ್ಕೆ ಟ್ರಕ್ ಮೂಲಕ ಕೊಂಡೊಯ್ಯಲಾಗುತ್ತಿತ್ತು.</p>.<p>ಕೃಷ್ಣಗಿರಿ ಜಿಲ್ಲೆಯ ಮೇಲುಮಲೈ ಹಳ್ಳಿಯ ಸಮೀಪ ಚೆನ್ನೈ–ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಈ ಕೃತ್ಯ ನಡೆದಿದೆ. ‘ಟ್ರಕ್ ತಡೆದ ಕಳ್ಳರ ಗುಂಪು, ಚಾಲಕ ಹಾಗೂ ಜೊತೆಗಿದ್ದ ವ್ಯಕ್ತಿಯನ್ನು ಬೆದರಿಸಿ, ಟ್ರಕ್ ಅನ್ನು 8–10 ಕಿ.ಮೀ ಚಲಾಯಿಸಿಕೊಂಡು ಬಂದು, ಎಲ್ಲ ಮೊಬೈಲ್ಗಳನ್ನು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗಂಗಾಧರ್ ತಿಳಿಸಿದರು.</p>.<p>‘ಮುಂದಿನ ಎರಡು ದಿನದೊಳಗಾಗಿ ಈ ಗುಂಪನ್ನು ಬಂಧಿಸಲಿದ್ದೇವೆ. ಮಧ್ಯಪ್ರದೇಶದ ಕಂಜರ್ ಗ್ಯಾಂಗ್ ಮೇಲೆ ಸಂಶಯವಿದೆ. ಈ ಗ್ಯಾಂಗ್ ದೋಚುವ ಮಾದರಿಯಲ್ಲೇ ಈ ಕೃತ್ಯ ನಡೆದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿ ಶಿಯೋಮಿಯ ₹15 ಕೋಟಿ ಮೌಲ್ಯದ ಮೊಬೈಲ್ಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಮಿಳುನಾಡಿನ ಕೃಷ್ಣಗಿರಿ ಸಮೀಪ 10 ಜನರ ಕಳ್ಳರ ಗುಂಪೊಂದು ದೋಚಿದ್ದು, 14,400 ಮೊಬೈಲ್ಗಳೊಂದಿಗೆ ಪರಾರಿಯಾಗಿದ್ದಾರೆ.</p>.<p>ಮಧ್ಯಪ್ರದೇಶದ ‘ಕಂಜರ್ ಗ್ಯಾಂಗ್’ ಈ ಕೃತ್ಯ ನಡೆಸಿರುವ ಶಂಕೆ ಇದ್ದು, ಕಳ್ಳರ ಬೆನ್ನತ್ತಿ 9 ಪೊಲೀಸರ ತಂಡವು ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ತೆರಳಿದೆ. ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಶ್ರೀಪೆರಂಬದೂರಿನಲ್ಲಿ ಇರುವ ಮೊಬೈಲ್ ತಯಾರಿಕಾ ಘಟಕದಿಂದಲೇ ಡಿಎಚ್ಎಲ್ ಕೊರಿಯರ್ ಕಂಪನಿಗೆ ಸೇರಿದ ಈ ಟ್ರಕ್ ಅನ್ನು ಕಳ್ಳರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೃಷ್ಣಗಿರಿ ಸಮೀಪ ಯಾರೂ ಇಲ್ಲದ ಪ್ರದೇಶದಲ್ಲಿ ಟ್ರಕ್ ತಡೆದು, ಎಲ್ಲ ಮೊಬೈಲ್ಗಳನ್ನು ದೋಚಿದ್ದಾರೆ. ಮೊಬೈಲ್ಗಳನ್ನು ಮುಂಬೈನಲ್ಲಿರುವ ಪ್ಯಾಕಿಂಗ್ ಘಟಕಕ್ಕೆ ಟ್ರಕ್ ಮೂಲಕ ಕೊಂಡೊಯ್ಯಲಾಗುತ್ತಿತ್ತು.</p>.<p>ಕೃಷ್ಣಗಿರಿ ಜಿಲ್ಲೆಯ ಮೇಲುಮಲೈ ಹಳ್ಳಿಯ ಸಮೀಪ ಚೆನ್ನೈ–ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಈ ಕೃತ್ಯ ನಡೆದಿದೆ. ‘ಟ್ರಕ್ ತಡೆದ ಕಳ್ಳರ ಗುಂಪು, ಚಾಲಕ ಹಾಗೂ ಜೊತೆಗಿದ್ದ ವ್ಯಕ್ತಿಯನ್ನು ಬೆದರಿಸಿ, ಟ್ರಕ್ ಅನ್ನು 8–10 ಕಿ.ಮೀ ಚಲಾಯಿಸಿಕೊಂಡು ಬಂದು, ಎಲ್ಲ ಮೊಬೈಲ್ಗಳನ್ನು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಗಂಗಾಧರ್ ತಿಳಿಸಿದರು.</p>.<p>‘ಮುಂದಿನ ಎರಡು ದಿನದೊಳಗಾಗಿ ಈ ಗುಂಪನ್ನು ಬಂಧಿಸಲಿದ್ದೇವೆ. ಮಧ್ಯಪ್ರದೇಶದ ಕಂಜರ್ ಗ್ಯಾಂಗ್ ಮೇಲೆ ಸಂಶಯವಿದೆ. ಈ ಗ್ಯಾಂಗ್ ದೋಚುವ ಮಾದರಿಯಲ್ಲೇ ಈ ಕೃತ್ಯ ನಡೆದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>