<p class="bodytext"><strong>ಹೈದರಾಬಾದ್</strong>: ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿನ ₹ 1 ಕೋಟಿಯಿಂದ ₹ 1.5 ಕೋಟಿ ಬೆಲೆಯ ಉದಯಾಸ್ತಮಾನ ಸೇವೆಯು ವಿಶ್ವದಲ್ಲೇ ಅತ್ಯಂತ ದುಬಾರಿ ಧಾರ್ಮಿಕ ಸೇವೆಯಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p class="bodytext">ದೇವಸ್ಥಾನದ ಆಡಳಿತ ಮಂಡಳಿಯು ವಿಶ್ವದ ಅತ್ಯಂತ ದುಬಾರಿ ಧಾರ್ಮಿಕ ಸೇವೆಯನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದು, ಈ ಸೇವೆಯಲ್ಲಿ ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿ ಮತ್ತು ಗೊತ್ತುಪಡಿಸಿದ ಇತರ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಲಿದೆ. ಸುಪ್ರಭಾತದಿಂದ ಆರಂಭವಾಗಿ ಏಕಾಂತದವರೆಗಿನ ಮುಕ್ತಾಯದ ಹಂತದವರೆಗಿನ ಎಲ್ಲಾ ದೈವಿಕ ಆಚರಣೆಗಳನ್ನು ಈ ಸೇವೆಯಲ್ಲಿ ವೀಕ್ಷಿಸಬಹುದಾಗಿದೆ ಎಂದು ದೇವಾಲಯದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p class="bodytext">‘ಉದಯಾಸ್ತಮಾನ’ದ ಹೆಸರಿನ ಈ ಧಾರ್ಮಿಕ ಸೇವೆಗೆ ಟಿಕೆಟ್ ನಿಗದಿಪಡಿಸಲಾಗಿದ್ದು, ಟಿಕೆಟ್ವೊಂದರ ಬೆಲೆಯು ₹ 1ಕೋಟಿಯಿಂದ ಆರಂಭವಾಗಲಿದೆ. ಶುಕ್ರವಾರ ಅಭಿಷೇಕವನ್ನೊಳಗೊಂಡಂತೆ ಈ ಟಿಕೆಟ್ನ ಬೆಲೆ ₹ 1.5 ಕೋಟಿ ಆಗಲಿದೆ.</p>.<p>‘₹ 1 ಕೋಟಿಯಿಂದ ₹ 1.5 ಕೋಟಿವರೆಗಿನ ಬೆಲೆಯು ದೊಡ್ಡ ಮೊತ್ತದಂತೆ ಕಾಣಿಸಬಹುದು. ಆದರೆ, ಉದಯಾಸ್ತಮಾನ ಸೇವೆ ಯಾವಾಗ ಆರಂಭವಾಗುತ್ತದೆ ಎಂದು ವಿಚಾರಿಸಿ ನಿತ್ಯವೂ ಹಲವು ದೂರವಾಣಿ ಕರೆಗಳು ಬರುತ್ತಿವೆ’ ಎಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ.</p>.<p>‘ಇಂತಹ ದುಬಾರಿ ಬೆಲೆಯ ಸೇವೆಗಳ ಮೂಲಕ ದೇವಾಲಯವು ಹಣ ಗಳಿಸುತ್ತಿದೆ’ ಎನ್ನುವ ಟೀಕೆಗಳನ್ನು ತಳ್ಳಿಹಾಕಿದ ಅಧಿಕಾರಿಗಳು, ‘ಈ ಆದಾಯವನ್ನು ಟಿಟಿಡಿ ಈ ಹಿಂದೆಯೇ ಯೋಜಿಸಿರುವಂತೆ ಮಕ್ಕಳ ಹೃದಯ ಆರೈಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಾತ್ರ ಬಳಸಲಿದೆ’ ಎಂದು ತಿಳಿಸಿದ್ದಾರೆ.</p>.<p class="bodytext">‘ಎಷ್ಟು ಮಂದಿಗೆ ಅನುಮತಿ ನೀಡಬಹುದು ಮತ್ತು ಎಷ್ಟು ವರ್ಷಗಳವರೆಗೆ ಭಕ್ತರು ಈ ಸೇವೆಯನ್ನು ಪಡೆಯಬಹುದು ಎನ್ನುವ ನಿಯಮಗಳು ಮತ್ತು ಷರತ್ತುಗಳನ್ನು ನಾವು ರೂಪಿಸುತ್ತಿದ್ದೇವೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಮತ್ತು ಅಧಿಕೃತ ಘೋಷಣೆಯನ್ನು ಮಾಡಲಾಗುವುದು’ ಎಂದೂ ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.</p>.<p class="bodytext">ದೇವಾಲಯದ ಅಧಿಕಾರಿಗಳ ಪ್ರಕಾರ, ‘80ರ ದಶಕದಲ್ಲಿ ಈ ಸೇವೆ ಲಭ್ಯವಿತ್ತು. ಈ ಸೇವೆಗೆ ಆರಂಭದಲ್ಲಿ ₹ 1 ಲಕ್ಷದಿಂದ ಶುರುವಾಗಿ ನಂತರ ₹ 10 ಲಕ್ಷ ದರ ನಿಗದಿಪಡಿಸಲಾಗಿತ್ತು. ಸ್ಥಳದ ಕೊರತೆ ಮತ್ತು ಇತರ ಕಾರಣಗಳಿಂದ ಈ ಸೇವೆಯು 2010ರಲ್ಲಿ ಸ್ಥಗಿತಗೊಂಡಿತ್ತು’ ಎಂದು ತಿಳಿಸಿದ್ದಾರೆ</p>.<p class="bodytext"><a href="https://www.prajavani.net/india-news/bipin-rawat-iaf-chopper-crash-probe-report-likely-to-be-submitted-to-air-hq-next-week-898159.html" itemprop="url">ರಾವತ್ ಸೇನಾ ಹೆಲಿಕಾಪ್ಟರ್ ಪತನ: ಮುಂದಿನ ವಾರ ತನಿಖಾ ವರದಿ ಸಲ್ಲಿಸುವ ಸಾಧ್ಯತೆ </a>.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ಹೈದರಾಬಾದ್</strong>: ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿನ ₹ 1 ಕೋಟಿಯಿಂದ ₹ 1.5 ಕೋಟಿ ಬೆಲೆಯ ಉದಯಾಸ್ತಮಾನ ಸೇವೆಯು ವಿಶ್ವದಲ್ಲೇ ಅತ್ಯಂತ ದುಬಾರಿ ಧಾರ್ಮಿಕ ಸೇವೆಯಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p class="bodytext">ದೇವಸ್ಥಾನದ ಆಡಳಿತ ಮಂಡಳಿಯು ವಿಶ್ವದ ಅತ್ಯಂತ ದುಬಾರಿ ಧಾರ್ಮಿಕ ಸೇವೆಯನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದು, ಈ ಸೇವೆಯಲ್ಲಿ ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿ ಮತ್ತು ಗೊತ್ತುಪಡಿಸಿದ ಇತರ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಲಿದೆ. ಸುಪ್ರಭಾತದಿಂದ ಆರಂಭವಾಗಿ ಏಕಾಂತದವರೆಗಿನ ಮುಕ್ತಾಯದ ಹಂತದವರೆಗಿನ ಎಲ್ಲಾ ದೈವಿಕ ಆಚರಣೆಗಳನ್ನು ಈ ಸೇವೆಯಲ್ಲಿ ವೀಕ್ಷಿಸಬಹುದಾಗಿದೆ ಎಂದು ದೇವಾಲಯದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p class="bodytext">‘ಉದಯಾಸ್ತಮಾನ’ದ ಹೆಸರಿನ ಈ ಧಾರ್ಮಿಕ ಸೇವೆಗೆ ಟಿಕೆಟ್ ನಿಗದಿಪಡಿಸಲಾಗಿದ್ದು, ಟಿಕೆಟ್ವೊಂದರ ಬೆಲೆಯು ₹ 1ಕೋಟಿಯಿಂದ ಆರಂಭವಾಗಲಿದೆ. ಶುಕ್ರವಾರ ಅಭಿಷೇಕವನ್ನೊಳಗೊಂಡಂತೆ ಈ ಟಿಕೆಟ್ನ ಬೆಲೆ ₹ 1.5 ಕೋಟಿ ಆಗಲಿದೆ.</p>.<p>‘₹ 1 ಕೋಟಿಯಿಂದ ₹ 1.5 ಕೋಟಿವರೆಗಿನ ಬೆಲೆಯು ದೊಡ್ಡ ಮೊತ್ತದಂತೆ ಕಾಣಿಸಬಹುದು. ಆದರೆ, ಉದಯಾಸ್ತಮಾನ ಸೇವೆ ಯಾವಾಗ ಆರಂಭವಾಗುತ್ತದೆ ಎಂದು ವಿಚಾರಿಸಿ ನಿತ್ಯವೂ ಹಲವು ದೂರವಾಣಿ ಕರೆಗಳು ಬರುತ್ತಿವೆ’ ಎಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ.</p>.<p>‘ಇಂತಹ ದುಬಾರಿ ಬೆಲೆಯ ಸೇವೆಗಳ ಮೂಲಕ ದೇವಾಲಯವು ಹಣ ಗಳಿಸುತ್ತಿದೆ’ ಎನ್ನುವ ಟೀಕೆಗಳನ್ನು ತಳ್ಳಿಹಾಕಿದ ಅಧಿಕಾರಿಗಳು, ‘ಈ ಆದಾಯವನ್ನು ಟಿಟಿಡಿ ಈ ಹಿಂದೆಯೇ ಯೋಜಿಸಿರುವಂತೆ ಮಕ್ಕಳ ಹೃದಯ ಆರೈಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಾತ್ರ ಬಳಸಲಿದೆ’ ಎಂದು ತಿಳಿಸಿದ್ದಾರೆ.</p>.<p class="bodytext">‘ಎಷ್ಟು ಮಂದಿಗೆ ಅನುಮತಿ ನೀಡಬಹುದು ಮತ್ತು ಎಷ್ಟು ವರ್ಷಗಳವರೆಗೆ ಭಕ್ತರು ಈ ಸೇವೆಯನ್ನು ಪಡೆಯಬಹುದು ಎನ್ನುವ ನಿಯಮಗಳು ಮತ್ತು ಷರತ್ತುಗಳನ್ನು ನಾವು ರೂಪಿಸುತ್ತಿದ್ದೇವೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಮತ್ತು ಅಧಿಕೃತ ಘೋಷಣೆಯನ್ನು ಮಾಡಲಾಗುವುದು’ ಎಂದೂ ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.</p>.<p class="bodytext">ದೇವಾಲಯದ ಅಧಿಕಾರಿಗಳ ಪ್ರಕಾರ, ‘80ರ ದಶಕದಲ್ಲಿ ಈ ಸೇವೆ ಲಭ್ಯವಿತ್ತು. ಈ ಸೇವೆಗೆ ಆರಂಭದಲ್ಲಿ ₹ 1 ಲಕ್ಷದಿಂದ ಶುರುವಾಗಿ ನಂತರ ₹ 10 ಲಕ್ಷ ದರ ನಿಗದಿಪಡಿಸಲಾಗಿತ್ತು. ಸ್ಥಳದ ಕೊರತೆ ಮತ್ತು ಇತರ ಕಾರಣಗಳಿಂದ ಈ ಸೇವೆಯು 2010ರಲ್ಲಿ ಸ್ಥಗಿತಗೊಂಡಿತ್ತು’ ಎಂದು ತಿಳಿಸಿದ್ದಾರೆ</p>.<p class="bodytext"><a href="https://www.prajavani.net/india-news/bipin-rawat-iaf-chopper-crash-probe-report-likely-to-be-submitted-to-air-hq-next-week-898159.html" itemprop="url">ರಾವತ್ ಸೇನಾ ಹೆಲಿಕಾಪ್ಟರ್ ಪತನ: ಮುಂದಿನ ವಾರ ತನಿಖಾ ವರದಿ ಸಲ್ಲಿಸುವ ಸಾಧ್ಯತೆ </a>.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>