<p><strong>ಪೇಶಾವರ:</strong> ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹತನಾದ ಉಗ್ರಗಾಮಿ ಗುಂಪು ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ್ನ (ಟಿಟಿಪಿ) ಕಮಾಂಡರ್ ಒಬ್ಬನ ಅಂತ್ಯಕ್ರಿಯೆ ಪ್ರಾರ್ಥನೆಗೆ ಮುಂದಾಳತ್ವ ವಹಿಸಲು ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಮೌಲ್ವಿಗಳು ನಿರಾಕರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.</p>.ರಾಜಸ್ಥಾನ ಗಡಿಯಲ್ಲಿ ಬಿಎಸ್ಎಫ್ನಿಂದ ಪಾಕಿಸ್ತಾನ ರೇಂಜರ್ ಬಂಧನ: ವರದಿ.<p>ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಶವಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಕಾಳಗದಲ್ಲಿ ಟಿಟಿಪಿ ಕಮಾಂಡರ್ ಮಿನ್ಹಾಜ್ ಹತನಾಗಿದ್ದ ಎಂದು ಅವರು ಹೇಳಿದ್ದಾರೆ.</p><p>ಮುಗ್ಧ ಜನರ ಸಾವಿಗೆ ಕಾರಣನಾದ ಹಾಗೂ ದೇಶದ ವಿರುದ್ಧ ಯುದ್ಧ ಮಾಡಿದ ಕಾರಣಕ್ಕೆ ಆತನ ಅಂತ್ಯಕ್ರಿಯೆ ಪ್ರಾರ್ಥನೆ ಮಾಡುವುದಿಲ್ಲ ಎಂದು ಮೌಲ್ವಿಗಳು ಹೇಳಿದ್ದಾಗಿ ಅಧಿಕಾರಿಗಳಿ ತಿಳಿಸಿದ್ದಾರೆ.</p>.ಪಾಕಿಸ್ತಾನ ಧ್ವಜವಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶ ನಿಷಿದ್ಧ: ಕೇಂದ್ರ.<p>ದಕ್ಷಿಣ ವಜೀರಿಸ್ತಾನದ ಅಜಂ ವರ್ಸಕ್ನಲ್ಲಿರುವ ನರ್ಗಿಸಾಯಿ ಸ್ಮಶಾನದಲ್ಲಿ ಸುಮಾರು 10–20 ಮಂದಿಯ ಸಮ್ಮುಖದಲ್ಲಿ ಸ್ಥಳೀಯರು ಆತನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. </p><p>ವಜೀರಿಸ್ತಾನ್ ಜಿಲ್ಲೆಯಲ್ಲಿ ಭಯೋತ್ಪಾದಕನ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ನಡೆಸಲು ವಿದ್ವಾಂಸರು ನಿರಾಕರಿಸಿದಾಗ ಇದು ಅಸಾಮಾನ್ಯ ಸಂಗತಿಯಾಗಿತ್ತು. ದೇಶ ವಿರೋಧಿಗಳ ಹಣೆ ಬರಹ ಹೀಗೇ ಆಗಿರಲಿದೆ ಎಂದು ಬುಡಕಟ್ಟು ಜನಾಂಗದ ಹಿರಿಯರೊಬ್ಬರು ಹೇಳಿದ್ದಾರೆ.</p> .ಭಾರತ, ಪಾಕಿಸ್ತಾನ ನಡುವಿನ ಅಟ್ಟಾರಿ–ವಾಘಾ ಗಡಿ ಸಂಪೂರ್ಣ ಬಂದ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೇಶಾವರ:</strong> ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹತನಾದ ಉಗ್ರಗಾಮಿ ಗುಂಪು ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ್ನ (ಟಿಟಿಪಿ) ಕಮಾಂಡರ್ ಒಬ್ಬನ ಅಂತ್ಯಕ್ರಿಯೆ ಪ್ರಾರ್ಥನೆಗೆ ಮುಂದಾಳತ್ವ ವಹಿಸಲು ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಮೌಲ್ವಿಗಳು ನಿರಾಕರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.</p>.ರಾಜಸ್ಥಾನ ಗಡಿಯಲ್ಲಿ ಬಿಎಸ್ಎಫ್ನಿಂದ ಪಾಕಿಸ್ತಾನ ರೇಂಜರ್ ಬಂಧನ: ವರದಿ.<p>ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಶವಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಕಾಳಗದಲ್ಲಿ ಟಿಟಿಪಿ ಕಮಾಂಡರ್ ಮಿನ್ಹಾಜ್ ಹತನಾಗಿದ್ದ ಎಂದು ಅವರು ಹೇಳಿದ್ದಾರೆ.</p><p>ಮುಗ್ಧ ಜನರ ಸಾವಿಗೆ ಕಾರಣನಾದ ಹಾಗೂ ದೇಶದ ವಿರುದ್ಧ ಯುದ್ಧ ಮಾಡಿದ ಕಾರಣಕ್ಕೆ ಆತನ ಅಂತ್ಯಕ್ರಿಯೆ ಪ್ರಾರ್ಥನೆ ಮಾಡುವುದಿಲ್ಲ ಎಂದು ಮೌಲ್ವಿಗಳು ಹೇಳಿದ್ದಾಗಿ ಅಧಿಕಾರಿಗಳಿ ತಿಳಿಸಿದ್ದಾರೆ.</p>.ಪಾಕಿಸ್ತಾನ ಧ್ವಜವಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶ ನಿಷಿದ್ಧ: ಕೇಂದ್ರ.<p>ದಕ್ಷಿಣ ವಜೀರಿಸ್ತಾನದ ಅಜಂ ವರ್ಸಕ್ನಲ್ಲಿರುವ ನರ್ಗಿಸಾಯಿ ಸ್ಮಶಾನದಲ್ಲಿ ಸುಮಾರು 10–20 ಮಂದಿಯ ಸಮ್ಮುಖದಲ್ಲಿ ಸ್ಥಳೀಯರು ಆತನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. </p><p>ವಜೀರಿಸ್ತಾನ್ ಜಿಲ್ಲೆಯಲ್ಲಿ ಭಯೋತ್ಪಾದಕನ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ನಡೆಸಲು ವಿದ್ವಾಂಸರು ನಿರಾಕರಿಸಿದಾಗ ಇದು ಅಸಾಮಾನ್ಯ ಸಂಗತಿಯಾಗಿತ್ತು. ದೇಶ ವಿರೋಧಿಗಳ ಹಣೆ ಬರಹ ಹೀಗೇ ಆಗಿರಲಿದೆ ಎಂದು ಬುಡಕಟ್ಟು ಜನಾಂಗದ ಹಿರಿಯರೊಬ್ಬರು ಹೇಳಿದ್ದಾರೆ.</p> .ಭಾರತ, ಪಾಕಿಸ್ತಾನ ನಡುವಿನ ಅಟ್ಟಾರಿ–ವಾಘಾ ಗಡಿ ಸಂಪೂರ್ಣ ಬಂದ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>