<p><strong>ಬಲರಾಂಪುರ್, ಉತ್ತರಪ್ರದೇಶ:</strong> ಕೋವಿಡ್ ಸೋಂಕಿತ ವ್ಯಕ್ತಿಯ ಶವವನ್ನು ಸೇತುವೆಯಿಂದ ಇಲ್ಲಿನ ರಾಪ್ತಿ ನದಿಗೆ ಎಸೆದ ಆತಂಕಕಾರಿ ಬೆಳವಣಿಗೆ ಈಚೆಗೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.</p>.<p class="bodytext">ಸೇತುವೆಯ ಮೇಲಿನಿಂದ ಇಬ್ಬರು ಕೂಡಿ ಶವ ಎಸೆಯುತ್ತಿದ್ದು, ಇವರಲ್ಲಿ ಒಬ್ಬ ಪಿಪಿಇ ಕಿಟ್ ಧರಿಸಿದ್ದ. ದಾರಿಹೋಕರು ಇದನ್ನು ಚಿತ್ರೀಕರಿಸಿದ್ದಾರೆ. ವಿಡಿಯೊ ಜಾಲತಾಣದಲ್ಲಿ ಕಾಣಿಸಿಕೊಂಡಂತೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಪ್ರವೃತ್ತರಾಗಿದ್ದಾರೆ.</p>.<p>ಬಲರಾಂಪುರ್ನ ಮುಖ್ಯ ವೈದ್ಯಾಧಿಕಾರಿ ವಿಜಯ್ ಬಹಾದ್ದೂರ್ ಸಿಂಗ್ ಅವರು, ‘ಮೃತನನ್ನು ರಾಜ್ಯದ ಸಿದ್ಧಾರ್ಥನಗರ ಜಿಲ್ಲೆಯ ಸೋಹ್ರತ್ಗರ್ನ ನಿವಾಸಿ ಪ್ರೇಮ್ನಾಥ್ ಮಿಶ್ರಾ ಎಂದು ಗುರುತಿಸಲಾಗಿದೆ’ ಎಂದು ತಿಳಿಸಿದ್ದಾರೆ.</p>.<p>‘ಕೋವಿಡ್ ದೃಢಪಟ್ಟಿದ್ದ ಮಿಶ್ರಾ ಅವರನ್ನು ಮೇ 25ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 28ರಂದು ಮೃತಪಟ್ಟಿದ್ದರು. ಕೋವಿಡ್ ಶಿಷ್ಟಾಚಾರದಂತೆಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು’ ಎಂದು ವಿವರಿಸಿದ್ದಾರೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.</p>.<p>ಕಳೆದ ತಿಂಗಳು ಗಂಗಾ, ಯಮುನಾ ನದಿಯಲ್ಲಿ ಅನೇಕ ಶವಗಳು ತೇಲಿಬಂದಿದ್ದವು. ಇವು ಕೋವಿಡ್ ಪೀಡಿತರ ಶವಗಳು ಎಂಬುದು ಆತಂಕ ಹೆಚ್ಚಿಸಿತ್ತು.</p>.<p>ಈ ಮಧ್ಯೆ ಸ್ಥಳೀಯ ಆಡಳಿತವು, ಶವಗಳನ್ನು ನದಿಗೆ ಎಸೆಯಬಾರದು ಎಂದು ಜನರಿಗೆ ಮನವಿ ಮಾಡಿದೆ.</p>.<p><strong>ಕೇಂದ್ರ ಸೂಚನೆ:</strong> ಗಂಗಾ ನದಿ ಪಾತ್ರದಲ್ಲಿ ಅನೇಕ ಶವಗಳನ್ನು ಹೂತಿರುವುದು ಹಾಗೂ ಶವಗಳನ್ನು ನದಿಗೆ ಎಸೆದಿರುವ ಘಟನೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂಥ ಬೆಳವಣಿಗೆ ತಡೆಯಬೇಕು ಎಂದು ಉತ್ತರದ ರಾಜ್ಯಗಳಿಗೆ ಸೂಚನೆ ನೀಡಿತ್ತು.</p>.<p>ಈ ಸಂಬಂಧ ಬರೆದಿದ್ದ ಪತ್ರದಲ್ಲಿ ಕೇಂದ್ರ ಸರ್ಕಾರವು ನದಿಪಾತ್ರದಲ್ಲಿ ಗಸ್ತು ಬಲಪಡಿಸಬೇಕು. ಜಾಗೃತಿ ಕೊರತೆ ಅಥವಾ ಬಡತನದಿಂದಾಗಿ ನದಿಗೆ ಶವ ಎಸೆಯುವ ಅನುಚಿತ ಕ್ರಮವನ್ನು ತಡೆಯಬೇಕು ಎಂದು ಸಲಹೆ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಲರಾಂಪುರ್, ಉತ್ತರಪ್ರದೇಶ:</strong> ಕೋವಿಡ್ ಸೋಂಕಿತ ವ್ಯಕ್ತಿಯ ಶವವನ್ನು ಸೇತುವೆಯಿಂದ ಇಲ್ಲಿನ ರಾಪ್ತಿ ನದಿಗೆ ಎಸೆದ ಆತಂಕಕಾರಿ ಬೆಳವಣಿಗೆ ಈಚೆಗೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.</p>.<p class="bodytext">ಸೇತುವೆಯ ಮೇಲಿನಿಂದ ಇಬ್ಬರು ಕೂಡಿ ಶವ ಎಸೆಯುತ್ತಿದ್ದು, ಇವರಲ್ಲಿ ಒಬ್ಬ ಪಿಪಿಇ ಕಿಟ್ ಧರಿಸಿದ್ದ. ದಾರಿಹೋಕರು ಇದನ್ನು ಚಿತ್ರೀಕರಿಸಿದ್ದಾರೆ. ವಿಡಿಯೊ ಜಾಲತಾಣದಲ್ಲಿ ಕಾಣಿಸಿಕೊಂಡಂತೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಪ್ರವೃತ್ತರಾಗಿದ್ದಾರೆ.</p>.<p>ಬಲರಾಂಪುರ್ನ ಮುಖ್ಯ ವೈದ್ಯಾಧಿಕಾರಿ ವಿಜಯ್ ಬಹಾದ್ದೂರ್ ಸಿಂಗ್ ಅವರು, ‘ಮೃತನನ್ನು ರಾಜ್ಯದ ಸಿದ್ಧಾರ್ಥನಗರ ಜಿಲ್ಲೆಯ ಸೋಹ್ರತ್ಗರ್ನ ನಿವಾಸಿ ಪ್ರೇಮ್ನಾಥ್ ಮಿಶ್ರಾ ಎಂದು ಗುರುತಿಸಲಾಗಿದೆ’ ಎಂದು ತಿಳಿಸಿದ್ದಾರೆ.</p>.<p>‘ಕೋವಿಡ್ ದೃಢಪಟ್ಟಿದ್ದ ಮಿಶ್ರಾ ಅವರನ್ನು ಮೇ 25ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 28ರಂದು ಮೃತಪಟ್ಟಿದ್ದರು. ಕೋವಿಡ್ ಶಿಷ್ಟಾಚಾರದಂತೆಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು’ ಎಂದು ವಿವರಿಸಿದ್ದಾರೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.</p>.<p>ಕಳೆದ ತಿಂಗಳು ಗಂಗಾ, ಯಮುನಾ ನದಿಯಲ್ಲಿ ಅನೇಕ ಶವಗಳು ತೇಲಿಬಂದಿದ್ದವು. ಇವು ಕೋವಿಡ್ ಪೀಡಿತರ ಶವಗಳು ಎಂಬುದು ಆತಂಕ ಹೆಚ್ಚಿಸಿತ್ತು.</p>.<p>ಈ ಮಧ್ಯೆ ಸ್ಥಳೀಯ ಆಡಳಿತವು, ಶವಗಳನ್ನು ನದಿಗೆ ಎಸೆಯಬಾರದು ಎಂದು ಜನರಿಗೆ ಮನವಿ ಮಾಡಿದೆ.</p>.<p><strong>ಕೇಂದ್ರ ಸೂಚನೆ:</strong> ಗಂಗಾ ನದಿ ಪಾತ್ರದಲ್ಲಿ ಅನೇಕ ಶವಗಳನ್ನು ಹೂತಿರುವುದು ಹಾಗೂ ಶವಗಳನ್ನು ನದಿಗೆ ಎಸೆದಿರುವ ಘಟನೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂಥ ಬೆಳವಣಿಗೆ ತಡೆಯಬೇಕು ಎಂದು ಉತ್ತರದ ರಾಜ್ಯಗಳಿಗೆ ಸೂಚನೆ ನೀಡಿತ್ತು.</p>.<p>ಈ ಸಂಬಂಧ ಬರೆದಿದ್ದ ಪತ್ರದಲ್ಲಿ ಕೇಂದ್ರ ಸರ್ಕಾರವು ನದಿಪಾತ್ರದಲ್ಲಿ ಗಸ್ತು ಬಲಪಡಿಸಬೇಕು. ಜಾಗೃತಿ ಕೊರತೆ ಅಥವಾ ಬಡತನದಿಂದಾಗಿ ನದಿಗೆ ಶವ ಎಸೆಯುವ ಅನುಚಿತ ಕ್ರಮವನ್ನು ತಡೆಯಬೇಕು ಎಂದು ಸಲಹೆ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>