<p><strong>ಅಲಿಗಢ (ಉತ್ತರ ಪ್ರದೇಶ):</strong> ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟು 3 ವರ್ಷವಾಗಿದ್ದ ಮಹಿಳೆ, ನಾನು ಇನ್ನೂ ಬದುಕಿದ್ದೇನೆ ಎಂದು ಅಧಿಕಾರಿಗಳ ಎದುರು ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.</p><p>ಉತ್ತರ ಪ್ರದೇಶದ ಅಲಿಗಢದ 58 ವರ್ಷದ ಸರೋಜ ದೇವಿ ಎನ್ನುವ ಮಹಿಳೆ ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದಾರೆ. ಆದರೆ ಇದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವುದು ದುರಂತದ ಸಂಗತಿ. </p><p>ಸರೋಜ ದೇವಿ ಅವರ ಗಂಡ ಜಗದೀಶ್ ಪ್ರಸಾದ್ ಅವರು 2020ರಲ್ಲಿ ಮೃತಪಟ್ಟಿದ್ದರು. ಗಂಡನ ಮರಣ ಪತ್ರಕ್ಕಾಗಿ ಅವರು ಮತ್ತೆ ಮತ್ತೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಡನ ಮರಣ ಪತ್ರದ ಬದಲು, ತಮ್ಮದೇ ಮರಣ ಪತ್ರವು ಅವರ ಕೈಗೆ ಸೇರಿದೆ.</p><p>2022ರ ಜನವರಿಯಲ್ಲಿ ಘಟನೆ ಜರುಗಿದ್ದು, ಇದರಿಂದ ಜೀವಂತವಾಗಿದ್ದ ಸರೋಜ ದೇವಿ ಅವರು ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಅವರ ಆಧಾರ್ ಸೇರಿದಂತೆ ಹಲವು ಗುರುತಿನ ದಾಖಲೆಗಳು ನಿಷ್ಕ್ರೀಯವಾಗಿದೆ. </p><p>ಇದರಿಂದ ದೈನದಿಂದ ಜೀವನಕ್ಕೂ ತೊಂದರೆಯಾಗಿ ಹಲವು ಬಾರಿ ಅಧಿಕಾರಿಗಳ ಬಳಿ ತೆರಳಿದರು ಕೂಡ, ಅವರು ಇದನ್ನು ಸರಿಪಡಿಸಿಲ್ಲ.</p><p>ನ.15ರಂದು ತಹಸಿಲ್ ದಿವಸ್ ಕುಂದುಕೊರತೆ ವೇದಿಕೆಯಲ್ಲಿ ಸರೋಜ ದೇವಿ ಅವರು ಈ ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. </p><p>ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಶಶೀರ್ ಕುಮಾರ್ ಅವರು ಘಟನೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ, ದಾಖಲಾತಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಲಿಗಢ (ಉತ್ತರ ಪ್ರದೇಶ):</strong> ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟು 3 ವರ್ಷವಾಗಿದ್ದ ಮಹಿಳೆ, ನಾನು ಇನ್ನೂ ಬದುಕಿದ್ದೇನೆ ಎಂದು ಅಧಿಕಾರಿಗಳ ಎದುರು ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ.</p><p>ಉತ್ತರ ಪ್ರದೇಶದ ಅಲಿಗಢದ 58 ವರ್ಷದ ಸರೋಜ ದೇವಿ ಎನ್ನುವ ಮಹಿಳೆ ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದಾರೆ. ಆದರೆ ಇದಕ್ಕೆ ಕಾರಣವಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಎನ್ನುವುದು ದುರಂತದ ಸಂಗತಿ. </p><p>ಸರೋಜ ದೇವಿ ಅವರ ಗಂಡ ಜಗದೀಶ್ ಪ್ರಸಾದ್ ಅವರು 2020ರಲ್ಲಿ ಮೃತಪಟ್ಟಿದ್ದರು. ಗಂಡನ ಮರಣ ಪತ್ರಕ್ಕಾಗಿ ಅವರು ಮತ್ತೆ ಮತ್ತೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಡನ ಮರಣ ಪತ್ರದ ಬದಲು, ತಮ್ಮದೇ ಮರಣ ಪತ್ರವು ಅವರ ಕೈಗೆ ಸೇರಿದೆ.</p><p>2022ರ ಜನವರಿಯಲ್ಲಿ ಘಟನೆ ಜರುಗಿದ್ದು, ಇದರಿಂದ ಜೀವಂತವಾಗಿದ್ದ ಸರೋಜ ದೇವಿ ಅವರು ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಅವರ ಆಧಾರ್ ಸೇರಿದಂತೆ ಹಲವು ಗುರುತಿನ ದಾಖಲೆಗಳು ನಿಷ್ಕ್ರೀಯವಾಗಿದೆ. </p><p>ಇದರಿಂದ ದೈನದಿಂದ ಜೀವನಕ್ಕೂ ತೊಂದರೆಯಾಗಿ ಹಲವು ಬಾರಿ ಅಧಿಕಾರಿಗಳ ಬಳಿ ತೆರಳಿದರು ಕೂಡ, ಅವರು ಇದನ್ನು ಸರಿಪಡಿಸಿಲ್ಲ.</p><p>ನ.15ರಂದು ತಹಸಿಲ್ ದಿವಸ್ ಕುಂದುಕೊರತೆ ವೇದಿಕೆಯಲ್ಲಿ ಸರೋಜ ದೇವಿ ಅವರು ಈ ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. </p><p>ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಶಶೀರ್ ಕುಮಾರ್ ಅವರು ಘಟನೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ, ದಾಖಲಾತಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>