ಗ್ರಾಮದ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಸರ್ಕಾರದ ಅನುದಾನವು ಇಂಥ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿಗಾಗಿ ಮೀಸಲಾದ ಹಣದಲ್ಲಿ ಮುಟ್ಟು ಕೇಂದ್ರ ಕಟ್ಟಡ ಕಟ್ಟಿರುವುದು, ಅಲ್ಲಿ ಋತುಸ್ರಾವದ ಮಹಿಳೆಯರನ್ನು ಇರಿಸುತ್ತಿರುವುದು ಮೂಲಭೂತ ಹಕ್ಕುಗಳಿಗೆ ವಿರುದ್ಧ ವಾದುದು ಎಂದು ಚೌಹಾಣ್ ಆಕ್ಷೇಪಿಸಿದ್ದಾರೆ.