ರಾಂಚಿ, ಭುವನೇಶ್ವರ್, ಗುವಾಹಟಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನ ಸಿಲುಕಿ ಹೊರ ಬಂದ 41 ಕಾರ್ಮಿಕರಲ್ಲಿ 21 ಕಾರ್ಮಿಕರು ನಿನ್ನೆ ಸಂಜೆ ತವರು ತಲುಪಿದರು.
ಜಾರ್ಖಂಡ್ನ 15 ಕಾರ್ಮಿಕರು ರಾಂಚಿ ವಿಮಾನ ನಿಲ್ದಾಣದ ಮೂಲಕ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಈ ವೇಳೆ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಅವರು ಕಾರ್ಮಿಕರನ್ನು ಸ್ವಾಗತಿಸಿದರು.
ಕಾರ್ಮಿಕರನ್ನು ಸನ್ಮಾನಿಸಿದ ಸೋರೆನ್ ಅವರು, ಕಾರ್ಮಿಕರ ಧೈರ್ಯವನ್ನು ಕೊಂಡಾಡಿ ಅವರನ್ನು ಅವರ ಊರುಗಳಿಗೆ ಬಿಳ್ಕೊಟ್ಟರು. ಈ ವೇಳೆ ಕಾರ್ಮಿಕರ ಕುಟುಂಬದವರು ಹಾಜರಿದ್ದರು.
ಒಡಿಶಾದ ಐವರು ಕಾರ್ಮಿಕರಲ್ಲಿ ನಾಲ್ವರು ಭುವನೇಶ್ವರ್ ವಿಮಾನ ನಿಲ್ದಾಣದ ಮೂಲಕ ತಮ್ಮ ಮನೆಗಳಿಗೆ ತೆರಳಿದರು. ಈ ವೇಳೆ ಸಿಎಂ ನವೀನ್ ಪಟ್ನಾಯಿಕ್ ಅವರು ಕಾರ್ಮಿಕರನ್ನು ಸ್ವಾಗತಿಸಿ ತಲಾ ₹2 ಲಕ್ಷದ ಜೊತೆ ಬಿಳ್ಕೊಟ್ಟರು.