<p><strong>ವೆಲ್ಲೂರು</strong>: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರು ಸೋಮವಾರ ಬಿರುಸಿನ ವಾಗ್ದಾಳಿ ನಡೆಸಿದ್ದಾರೆ. ‘ರಾಜಕೀಯ ಲಾಭದ ಮೇಲೆ ಕಣ್ಣಿಟ್ಟಿರುವವರು, ಭ್ರಷ್ಟರು ಹಾಗೂ ಲಂಚಕೋರರೇ ಡಿಎಂಕೆ ಅಧ್ಯಕ್ಷರ ನಿಜವಾದ ಸ್ನೇಹಿತರು’ ಎಂದು ವಿಜಯ್ ದೂರಿದ್ದಾರೆ.</p><p>ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವಿಜಯ್, ‘ ಏಪ್ರಿಲ್ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ತಮಿಳುನಾಡು ಹಾಗೂ ದೆಹಲಿ–ಎನ್ಡಿಎ ನಡುವಿನ ಯುದ್ಧ ಎಂದು ಡಿಎಂಕೆ ಬಿಂಬಿಸುತ್ತಿದೆ. ಆದರೆ, ವಾಸ್ತವದಲ್ಲಿ ಇದು ರಾಜ್ಯದ ಜನರು ಹಾಗೂ ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಯುದ್ಧ’ ಎಂದಿದ್ದಾರೆ. </p><p>ಅಲ್ಲದೇ, ಡಿಎಂಕೆ ಅಸಮರ್ಥ ಸರ್ಕಾರ ಎಂದು ಟೀಕಿಸಿರುವ ಅವರು, ನೇರವಾಗಿ ಮುಖ್ಯಮಂತ್ರಿಗೆ ಸವಾಲೆಸೆದು ‘ನಿಮ್ಮ ಹಣದ ಮೂಲ ಯಾವುದು ? ನೀವು ಕಷ್ಟಪಟ್ಟು ಈ ಹಣವನ್ನು ಸಂಪಾದಿಸಿದ್ದೀರೆ ? ಅಥವಾ ನೀವು ರಾಜಕೀಯಕ್ಕೆ ಬಂದ ಬಳಿಕ ಸಂಗ್ರಹಿಸಿದ ಹಣವೇ ? ಅದನ್ನು ನೀವು ಧೈರ್ಯವಾಗಿ ಬಹಿರಂಗಪಡಿಸುವಿರೇ’ ಎಂದು ಪ್ರಶ್ನಿಸಿದ್ದಾರೆ.</p><p>‘ರಾಜಕೀಯದಲ್ಲಿ ನನಗೆ ಯಾರೂ ಶತ್ರುಗಳಿಲ್ಲ, ಎಲ್ಲರೂ ಮಿತ್ರರೇ’ ಎಂದು ಸ್ಟಾಲಿನ್ ಅವರು ನೀಡಿದ್ದ ಹೇಳಿಕೆಯ ಕುರಿತೂ ವಿಜಯ್ ಆಕ್ಷೇಪಿಸಿದ್ದಾರೆ. ‘ನಿಜವಾಗಿಯೂ ನಿಮಗೆ ಎಲ್ಲರೂ ಸ್ನೇಹಿತರೇ ಆಗಿದ್ದಿದ್ದರೆ ಕರೂರು ಕಾಲ್ತುಳಿತ ಪ್ರಕರಣದಲ್ಲಿ ನನ್ನನ್ನು ಏಕೆ ದೂಷಿಸಿದಿರಿ? ಟಿವಿಕೆ ರ್ಯಾಲಿಗಳಿಗೆ, ಕಾರ್ಯಕ್ರಮಗಳಿಗೆ ಜಾಗ ನೀಡದೇ ಅನುಮತಿ ನಿರಾಕರಿಸಿದ್ದು ಯಾಕೆ? ಎಲ್ಲವನ್ನೂ ನೀವು ಮಾಡಿ, ಕಾಲ್ತುಳಿತದ ದುರಂತಕ್ಕೆ ನಮ್ಮ ಮೇಲೆ ಆರೋಪ ಹೊರಿಸಿದ್ದು ಯಾಕೆ’ ಎಂದೂ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೆಲ್ಲೂರು</strong>: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರು ಸೋಮವಾರ ಬಿರುಸಿನ ವಾಗ್ದಾಳಿ ನಡೆಸಿದ್ದಾರೆ. ‘ರಾಜಕೀಯ ಲಾಭದ ಮೇಲೆ ಕಣ್ಣಿಟ್ಟಿರುವವರು, ಭ್ರಷ್ಟರು ಹಾಗೂ ಲಂಚಕೋರರೇ ಡಿಎಂಕೆ ಅಧ್ಯಕ್ಷರ ನಿಜವಾದ ಸ್ನೇಹಿತರು’ ಎಂದು ವಿಜಯ್ ದೂರಿದ್ದಾರೆ.</p><p>ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವಿಜಯ್, ‘ ಏಪ್ರಿಲ್ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ತಮಿಳುನಾಡು ಹಾಗೂ ದೆಹಲಿ–ಎನ್ಡಿಎ ನಡುವಿನ ಯುದ್ಧ ಎಂದು ಡಿಎಂಕೆ ಬಿಂಬಿಸುತ್ತಿದೆ. ಆದರೆ, ವಾಸ್ತವದಲ್ಲಿ ಇದು ರಾಜ್ಯದ ಜನರು ಹಾಗೂ ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಯುದ್ಧ’ ಎಂದಿದ್ದಾರೆ. </p><p>ಅಲ್ಲದೇ, ಡಿಎಂಕೆ ಅಸಮರ್ಥ ಸರ್ಕಾರ ಎಂದು ಟೀಕಿಸಿರುವ ಅವರು, ನೇರವಾಗಿ ಮುಖ್ಯಮಂತ್ರಿಗೆ ಸವಾಲೆಸೆದು ‘ನಿಮ್ಮ ಹಣದ ಮೂಲ ಯಾವುದು ? ನೀವು ಕಷ್ಟಪಟ್ಟು ಈ ಹಣವನ್ನು ಸಂಪಾದಿಸಿದ್ದೀರೆ ? ಅಥವಾ ನೀವು ರಾಜಕೀಯಕ್ಕೆ ಬಂದ ಬಳಿಕ ಸಂಗ್ರಹಿಸಿದ ಹಣವೇ ? ಅದನ್ನು ನೀವು ಧೈರ್ಯವಾಗಿ ಬಹಿರಂಗಪಡಿಸುವಿರೇ’ ಎಂದು ಪ್ರಶ್ನಿಸಿದ್ದಾರೆ.</p><p>‘ರಾಜಕೀಯದಲ್ಲಿ ನನಗೆ ಯಾರೂ ಶತ್ರುಗಳಿಲ್ಲ, ಎಲ್ಲರೂ ಮಿತ್ರರೇ’ ಎಂದು ಸ್ಟಾಲಿನ್ ಅವರು ನೀಡಿದ್ದ ಹೇಳಿಕೆಯ ಕುರಿತೂ ವಿಜಯ್ ಆಕ್ಷೇಪಿಸಿದ್ದಾರೆ. ‘ನಿಜವಾಗಿಯೂ ನಿಮಗೆ ಎಲ್ಲರೂ ಸ್ನೇಹಿತರೇ ಆಗಿದ್ದಿದ್ದರೆ ಕರೂರು ಕಾಲ್ತುಳಿತ ಪ್ರಕರಣದಲ್ಲಿ ನನ್ನನ್ನು ಏಕೆ ದೂಷಿಸಿದಿರಿ? ಟಿವಿಕೆ ರ್ಯಾಲಿಗಳಿಗೆ, ಕಾರ್ಯಕ್ರಮಗಳಿಗೆ ಜಾಗ ನೀಡದೇ ಅನುಮತಿ ನಿರಾಕರಿಸಿದ್ದು ಯಾಕೆ? ಎಲ್ಲವನ್ನೂ ನೀವು ಮಾಡಿ, ಕಾಲ್ತುಳಿತದ ದುರಂತಕ್ಕೆ ನಮ್ಮ ಮೇಲೆ ಆರೋಪ ಹೊರಿಸಿದ್ದು ಯಾಕೆ’ ಎಂದೂ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>