<p><strong>ವೆಲ್ಲೂರು</strong>: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ನಟ, ಟಿವಿಕೆ ಮುಖಂಡ ವಿಜಯ್, 'ಸುಳ್ಳು ಭರವಸೆಗಳ ಮೂಲಕ ಸಿಎಂ ಸ್ಟಾಲಿನ್ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p><p>ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2026ರ ವಿಧಾನಸಭಾ ಚುನಾವಣೆಯು ಅಚ್ಚರಿಯಿಂದ ಕೂಡಿದ್ದು, ತಮ್ಮ ಪಕ್ಷದ ವಿರುದ್ಧ ರಾಜ್ಯದ ಎಲ್ಲಾ ಪಕ್ಷಗಳು ಒಟ್ಟಾಗಿವೆ ಎಂದು ಹೇಳಿದ್ದಾರೆ.</p><p>‘ಈ ಚುನಾವಣೆಯಲ್ಲಿ ನನ್ನ ಮತ್ತು ಸ್ಟಾಲಿನ್ ಅವರ ನಡುವೆ ನೇರ ಸ್ಪರ್ಧೆ ಇರಲಿದೆ. ಇದು ಟಿವಿಕೆ ಮತ್ತು ಡಿಎಂಕೆ ನಡುವೆ ನಡೆಯುವ ಯುದ್ಧವಾಗಿದೆ. ವಿಜಯ್ ಎಂದರೆ ತಮಿಳುನಾಡು, ತಮಿಳುನಾಡು ಎಂದರೆ ವಿಜಯ್’ ಎಂದು ಗುಡುಗಿದ್ದಾರೆ.</p><p>‘ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚಿಸಿದರೆ ಪ್ರತಿ ಜಿಲ್ಲೆಗೆ ಹೋಗಿ ಜನರನ್ನು ಭೇಟಿಯಾಗುತ್ತೇನೆ’ ಎಂದೂ ಭರವಸೆ ನೀಡಿದ್ದಾರೆ.</p><p>ತಮಿಳುನಾಡನ್ನು ಸೂಪರ್ಸ್ಟಾರ್ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದೇವೆ ಎಂಬ ಡಿಎಂಕೆ ಹೇಳಿಕೆಯನ್ನು ತಿರಸ್ಕರಿಸಿದ ವಿಜಯ್, ‘ಕೆ. ಕಾಮರಾಜ್, ಸಿ.ಎನ್. ಅಣ್ಣಾದೊರೈ ಮತ್ತು ಎಂ. ಜಿ. ರಾಮಚಂದ್ರನ್ ಅವರ ಕಾಲದಲ್ಲಿ ರಾಜ್ಯವು ಅದ್ಭುತವಾಗಿತ್ತು’ ಎಂದಿದ್ದಾರೆ.</p><p>ಮುಂದುವರಿದು, ಡಿಎಂಕೆ ಆಡಳಿತವನ್ನು ‘ಯಾವುದಕ್ಕೂ ಬಾರದ ಉಲ್ಟಾ ಮಾದರಿ ಸರ್ಕಾರ’ ಎಂದು ಕರೆದ ಅವರು, ರಾಜ್ಯವು ಸ್ಟ್ಯಾಂಡ್ ಅಪ್ ಕಾಮಿಡಿಯನ್ಗಳಿಂದ ನಡೆಸಲ್ಪಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೆಲ್ಲೂರು</strong>: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ನಟ, ಟಿವಿಕೆ ಮುಖಂಡ ವಿಜಯ್, 'ಸುಳ್ಳು ಭರವಸೆಗಳ ಮೂಲಕ ಸಿಎಂ ಸ್ಟಾಲಿನ್ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p><p>ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2026ರ ವಿಧಾನಸಭಾ ಚುನಾವಣೆಯು ಅಚ್ಚರಿಯಿಂದ ಕೂಡಿದ್ದು, ತಮ್ಮ ಪಕ್ಷದ ವಿರುದ್ಧ ರಾಜ್ಯದ ಎಲ್ಲಾ ಪಕ್ಷಗಳು ಒಟ್ಟಾಗಿವೆ ಎಂದು ಹೇಳಿದ್ದಾರೆ.</p><p>‘ಈ ಚುನಾವಣೆಯಲ್ಲಿ ನನ್ನ ಮತ್ತು ಸ್ಟಾಲಿನ್ ಅವರ ನಡುವೆ ನೇರ ಸ್ಪರ್ಧೆ ಇರಲಿದೆ. ಇದು ಟಿವಿಕೆ ಮತ್ತು ಡಿಎಂಕೆ ನಡುವೆ ನಡೆಯುವ ಯುದ್ಧವಾಗಿದೆ. ವಿಜಯ್ ಎಂದರೆ ತಮಿಳುನಾಡು, ತಮಿಳುನಾಡು ಎಂದರೆ ವಿಜಯ್’ ಎಂದು ಗುಡುಗಿದ್ದಾರೆ.</p><p>‘ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚಿಸಿದರೆ ಪ್ರತಿ ಜಿಲ್ಲೆಗೆ ಹೋಗಿ ಜನರನ್ನು ಭೇಟಿಯಾಗುತ್ತೇನೆ’ ಎಂದೂ ಭರವಸೆ ನೀಡಿದ್ದಾರೆ.</p><p>ತಮಿಳುನಾಡನ್ನು ಸೂಪರ್ಸ್ಟಾರ್ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದೇವೆ ಎಂಬ ಡಿಎಂಕೆ ಹೇಳಿಕೆಯನ್ನು ತಿರಸ್ಕರಿಸಿದ ವಿಜಯ್, ‘ಕೆ. ಕಾಮರಾಜ್, ಸಿ.ಎನ್. ಅಣ್ಣಾದೊರೈ ಮತ್ತು ಎಂ. ಜಿ. ರಾಮಚಂದ್ರನ್ ಅವರ ಕಾಲದಲ್ಲಿ ರಾಜ್ಯವು ಅದ್ಭುತವಾಗಿತ್ತು’ ಎಂದಿದ್ದಾರೆ.</p><p>ಮುಂದುವರಿದು, ಡಿಎಂಕೆ ಆಡಳಿತವನ್ನು ‘ಯಾವುದಕ್ಕೂ ಬಾರದ ಉಲ್ಟಾ ಮಾದರಿ ಸರ್ಕಾರ’ ಎಂದು ಕರೆದ ಅವರು, ರಾಜ್ಯವು ಸ್ಟ್ಯಾಂಡ್ ಅಪ್ ಕಾಮಿಡಿಯನ್ಗಳಿಂದ ನಡೆಸಲ್ಪಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>