<p><strong>ಕಿಶನ್ಗಂಜ್:</strong> ಮುಸ್ಲಿಮರ ಮಸೀದಿ, ಪವಿತ್ರ ಸ್ಥಳಗಳನ್ನು ಕಿತ್ತುಕೊಳ್ಳಲಿಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ಧೀನ್ ಓವೈಸಿ ಅವರು ಬುಧವಾರ ಕಿಡಿಕಾರಿದರು.</p>.<p>ಬಿಹಾರದ ಕಿಶನ್ಗಂಜ್ ಜಿಲ್ಲೆಯ ಕೋಚಾಧಾಮನ್ ವಿಧಾನಸಭಾ ಕ್ಷೇತ್ರದಲ್ಲಿ ಸೀಮಾಂಚಲ ನ್ಯಾಯಯಾತ್ರೆಗೆ ಚಾಲನೆ ನೀಡಿದ ಅವರು, ‘ಸದುದ್ದೇಶದಿಂದ ವಕ್ಫ್ ಕಾಯ್ದೆ ಜಾರಿಗೊಳಿಸಿಲ್ಲ. ಮುಸ್ಲಿಮರ ಮಸೀದಿ, ಈದ್ಗಾ ಮೈದಾನ, ಖಬರ್ಸ್ತಾನಗಳು ಯಾರೊಬ್ಬರ ಸ್ವತ್ತಲ್ಲ. ಅವೆಲ್ಲವೂ ಅಲ್ಲಾಹುವಿಗೆ ಸೇರಿದವು’ ಎಂದರು.</p>.<p>‘ಮೋದಿ ಅವರ ಅಪವಿತ್ರ ಉದ್ದೇಶವು ದೇವರ ಇಚ್ಚೆಯಿಂದ ಎಂದಿಗೂ ಈಡೇರಲ್ಲ. ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಜಗತ್ತು ಅಸ್ತಿತ್ವದಲ್ಲಿರುವವರೆಗೂ ಮುಂದುವರಿಸುತ್ತಾರೆ. ಅಲ್ಲಾಹುವನ್ನು ನಂಬಿದವರು ಪವಿತ್ರವೆಂದು ಭಾವಿಸುವ ಸ್ಥಳಗಳು ಎಂದೆಂದಿಗೂ ಬಿಜೆಪಿ– ಆರ್ಎಸ್ಎಸ್ ವಶವಾಗಲ್ಲ’ ಎಂದು ಅವರು ಹೇಳಿದರು.</p>.<p>‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮುಸ್ಲಿಮರು ಜಾತ್ಯತೀತ ಎಂದು ಹೇಳಿಕೊಂಡ ಪಕ್ಷಗಳನ್ನೆಲ್ಲಾ ಬೆಂಬಲಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲಿಕ್ಕಾಗಿ ಮತ ಹಾಕಿದ್ದಾರೆ. ಆದರೆ ಈ ಹೊರೆಯನ್ನು ಕೂಲಿಗಳಂತೆ ಇನ್ನಷ್ಟು ದಿನ ನಮ್ಮ ಹೆಗಲುಗಳ ಮೇಲೆ ಹೊರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳುವ ಸಮಯ ಬಂದಿದೆ’ ಎಂದರು.</p>.<p>‘ನಮ್ಮ ಯೋಗಕ್ಷೇಮಕ್ಕೆ ಅಗತ್ಯವಾದದ್ದನ್ನು ನಾವು ಮಾಡಬೇಕಿದೆ. ಕೆಲವು ಪಕ್ಷಗಳು ಅಧಿಕಾರ ಅನುಭವಿಸಲು ಸಹಾಯ ಮಾಡಲು ಇನ್ಮುಂದೆ ನಮ್ಮ ಆಕಾಂಕ್ಷೆಗಳನ್ನು ತ್ಯಾಗ ಮಾಡುವುದಿಲ್ಲ’ ಎಂದು ಆರ್ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಶನ್ಗಂಜ್:</strong> ಮುಸ್ಲಿಮರ ಮಸೀದಿ, ಪವಿತ್ರ ಸ್ಥಳಗಳನ್ನು ಕಿತ್ತುಕೊಳ್ಳಲಿಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ಧೀನ್ ಓವೈಸಿ ಅವರು ಬುಧವಾರ ಕಿಡಿಕಾರಿದರು.</p>.<p>ಬಿಹಾರದ ಕಿಶನ್ಗಂಜ್ ಜಿಲ್ಲೆಯ ಕೋಚಾಧಾಮನ್ ವಿಧಾನಸಭಾ ಕ್ಷೇತ್ರದಲ್ಲಿ ಸೀಮಾಂಚಲ ನ್ಯಾಯಯಾತ್ರೆಗೆ ಚಾಲನೆ ನೀಡಿದ ಅವರು, ‘ಸದುದ್ದೇಶದಿಂದ ವಕ್ಫ್ ಕಾಯ್ದೆ ಜಾರಿಗೊಳಿಸಿಲ್ಲ. ಮುಸ್ಲಿಮರ ಮಸೀದಿ, ಈದ್ಗಾ ಮೈದಾನ, ಖಬರ್ಸ್ತಾನಗಳು ಯಾರೊಬ್ಬರ ಸ್ವತ್ತಲ್ಲ. ಅವೆಲ್ಲವೂ ಅಲ್ಲಾಹುವಿಗೆ ಸೇರಿದವು’ ಎಂದರು.</p>.<p>‘ಮೋದಿ ಅವರ ಅಪವಿತ್ರ ಉದ್ದೇಶವು ದೇವರ ಇಚ್ಚೆಯಿಂದ ಎಂದಿಗೂ ಈಡೇರಲ್ಲ. ಮುಸ್ಲಿಮರು ತಮ್ಮ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಜಗತ್ತು ಅಸ್ತಿತ್ವದಲ್ಲಿರುವವರೆಗೂ ಮುಂದುವರಿಸುತ್ತಾರೆ. ಅಲ್ಲಾಹುವನ್ನು ನಂಬಿದವರು ಪವಿತ್ರವೆಂದು ಭಾವಿಸುವ ಸ್ಥಳಗಳು ಎಂದೆಂದಿಗೂ ಬಿಜೆಪಿ– ಆರ್ಎಸ್ಎಸ್ ವಶವಾಗಲ್ಲ’ ಎಂದು ಅವರು ಹೇಳಿದರು.</p>.<p>‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮುಸ್ಲಿಮರು ಜಾತ್ಯತೀತ ಎಂದು ಹೇಳಿಕೊಂಡ ಪಕ್ಷಗಳನ್ನೆಲ್ಲಾ ಬೆಂಬಲಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲಿಕ್ಕಾಗಿ ಮತ ಹಾಕಿದ್ದಾರೆ. ಆದರೆ ಈ ಹೊರೆಯನ್ನು ಕೂಲಿಗಳಂತೆ ಇನ್ನಷ್ಟು ದಿನ ನಮ್ಮ ಹೆಗಲುಗಳ ಮೇಲೆ ಹೊರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳುವ ಸಮಯ ಬಂದಿದೆ’ ಎಂದರು.</p>.<p>‘ನಮ್ಮ ಯೋಗಕ್ಷೇಮಕ್ಕೆ ಅಗತ್ಯವಾದದ್ದನ್ನು ನಾವು ಮಾಡಬೇಕಿದೆ. ಕೆಲವು ಪಕ್ಷಗಳು ಅಧಿಕಾರ ಅನುಭವಿಸಲು ಸಹಾಯ ಮಾಡಲು ಇನ್ಮುಂದೆ ನಮ್ಮ ಆಕಾಂಕ್ಷೆಗಳನ್ನು ತ್ಯಾಗ ಮಾಡುವುದಿಲ್ಲ’ ಎಂದು ಆರ್ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>