<p><strong>ವಯನಾಡ್ (ಕೇರಳ):</strong> ಇಲ್ಲಿನ ಮುಂಡಕೈ ಮತ್ತು ಚೂರಲ್ಮಲ ಭಾಗಗಳಲ್ಲಿ ಭೂಕುಸಿತ ಸಂಭವಿಸಿ ವರ್ಷ ಕಳೆದಿದ್ದು, ದುರಂತದಲ್ಲಿ ಅಸುನೀಗಿದವರ ಸ್ಮರಣೆಗಾಗಿ ಬುಧವಾರ ಪುತ್ತುಮಲ ಸ್ಮಶಾನದಲ್ಲಿ ಮೃತರ ಸಂಬಂಧಿಕರು ಸೇರಿದ್ದರು.</p>. <p>2024ರ ಜುಲೈ 29ರ ಮಧ್ಯರಾತ್ರಿ ಮತ್ತು 30ರಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ 264 ಜನರು ಜೀವಂತ ಸಮಾಧಿಯಾಗಿದ್ದರು. ಅವರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿರುವ ಸ್ಮಶಾನಕ್ಕೆ ‘ಹೃದಯ ಭೂಮಿ’ ಎಂದು ಇಲ್ಲಿನ ಪಂಚಾಯಿತಿ ಹೆಸರಿಟ್ಟಿದೆ.</p> <p>ಆ ಕರಾಳ ದಿನದಂದು ತಮ್ಮ ಸಂಬಂಧಿಕರು, ಬಂದುಗಳು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ನೂರಾರು ಜನ ‘ಹೃದಯ ಭೂಮಿ’ಯಲ್ಲಿ ಮೌನ ಆಚರಿಸಿದರು. ನೆರೆದಿದ್ದ ಕೆಲವರು ಆ ದಿನದ ನೆನಪುಗಳನ್ನು ಮೆಲುಕುಹಾಕಿದರೆ, ಇನ್ನು ಕೆಲವರು ತಮ್ಮ ಪ್ರೀತಿಪಾತ್ರರ ನೆನೆದು ಕಣ್ಣೀರು ಹಾಕಿದರು. ಮತ್ತೂ ಕೆಲವರು ಮೌನಕ್ಕೆ ಜಾರಿದ್ದರು.</p> .Wayanad landslides |ನಲುಗಿದ ನೆಲದಲ್ಲಿ ‘ಅಪರಿಚಿತರ’ ಚಿರನಿದ್ರೆ .<p>‘ಆ ಕರಾಳ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ. ಆದರೆ ಏನು ಮಾಡುವುದು ಆ ನೆನಪುಗಳು ಕಾಡುತ್ತಿವೆ’ ಎಂದು ಅಲ್ಲಿನ ನಿವಾಸಿ ಮನೋಜ್ ಹೇಳಿದರು. ಅವರು ಈ ದುರಂತದಲ್ಲಿ ತಮ್ಮ 26 ಸಂಬಂಧಿಗಳನ್ನು ಕಳೆದುಕೊಂಡಿದ್ದಾರೆ. </p>. <p>ಮೆಪ್ಪಾಡಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ ನಡೆಸಲಾಯಿತು. ರಾಜಕೀಯ ಮುಖಂಡರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಬೆಳಿಗ್ಗೆ ಸರ್ವಧರ್ಮಗಳ ಪ್ರಾರ್ಥನಾ ಸಭೆಯೂ ನಡೆಯಿತು.</p> .ವಯನಾಡ್ ದುರಂತಕ್ಕೆ 1 ವರ್ಷ: ಕಮರಿದ ನೆಲದಲ್ಲಿ ಚಿಗುರೊಡೆದ ಬದುಕು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಯನಾಡ್ (ಕೇರಳ):</strong> ಇಲ್ಲಿನ ಮುಂಡಕೈ ಮತ್ತು ಚೂರಲ್ಮಲ ಭಾಗಗಳಲ್ಲಿ ಭೂಕುಸಿತ ಸಂಭವಿಸಿ ವರ್ಷ ಕಳೆದಿದ್ದು, ದುರಂತದಲ್ಲಿ ಅಸುನೀಗಿದವರ ಸ್ಮರಣೆಗಾಗಿ ಬುಧವಾರ ಪುತ್ತುಮಲ ಸ್ಮಶಾನದಲ್ಲಿ ಮೃತರ ಸಂಬಂಧಿಕರು ಸೇರಿದ್ದರು.</p>. <p>2024ರ ಜುಲೈ 29ರ ಮಧ್ಯರಾತ್ರಿ ಮತ್ತು 30ರಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ 264 ಜನರು ಜೀವಂತ ಸಮಾಧಿಯಾಗಿದ್ದರು. ಅವರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿರುವ ಸ್ಮಶಾನಕ್ಕೆ ‘ಹೃದಯ ಭೂಮಿ’ ಎಂದು ಇಲ್ಲಿನ ಪಂಚಾಯಿತಿ ಹೆಸರಿಟ್ಟಿದೆ.</p> <p>ಆ ಕರಾಳ ದಿನದಂದು ತಮ್ಮ ಸಂಬಂಧಿಕರು, ಬಂದುಗಳು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ನೂರಾರು ಜನ ‘ಹೃದಯ ಭೂಮಿ’ಯಲ್ಲಿ ಮೌನ ಆಚರಿಸಿದರು. ನೆರೆದಿದ್ದ ಕೆಲವರು ಆ ದಿನದ ನೆನಪುಗಳನ್ನು ಮೆಲುಕುಹಾಕಿದರೆ, ಇನ್ನು ಕೆಲವರು ತಮ್ಮ ಪ್ರೀತಿಪಾತ್ರರ ನೆನೆದು ಕಣ್ಣೀರು ಹಾಕಿದರು. ಮತ್ತೂ ಕೆಲವರು ಮೌನಕ್ಕೆ ಜಾರಿದ್ದರು.</p> .Wayanad landslides |ನಲುಗಿದ ನೆಲದಲ್ಲಿ ‘ಅಪರಿಚಿತರ’ ಚಿರನಿದ್ರೆ .<p>‘ಆ ಕರಾಳ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ. ಆದರೆ ಏನು ಮಾಡುವುದು ಆ ನೆನಪುಗಳು ಕಾಡುತ್ತಿವೆ’ ಎಂದು ಅಲ್ಲಿನ ನಿವಾಸಿ ಮನೋಜ್ ಹೇಳಿದರು. ಅವರು ಈ ದುರಂತದಲ್ಲಿ ತಮ್ಮ 26 ಸಂಬಂಧಿಗಳನ್ನು ಕಳೆದುಕೊಂಡಿದ್ದಾರೆ. </p>. <p>ಮೆಪ್ಪಾಡಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ ನಡೆಸಲಾಯಿತು. ರಾಜಕೀಯ ಮುಖಂಡರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಬೆಳಿಗ್ಗೆ ಸರ್ವಧರ್ಮಗಳ ಪ್ರಾರ್ಥನಾ ಸಭೆಯೂ ನಡೆಯಿತು.</p> .ವಯನಾಡ್ ದುರಂತಕ್ಕೆ 1 ವರ್ಷ: ಕಮರಿದ ನೆಲದಲ್ಲಿ ಚಿಗುರೊಡೆದ ಬದುಕು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>