<p><strong>ವಯನಾಡ್(ಕೇರಳ):</strong> ಕಳೆದ ವರ್ಷ ಇದೇ ದಿನ, ವಯನಾಡ್ ತನ್ನ ಚೆಲುವನ್ನೆಲ್ಲ ಹೊದ್ದುಕೊಂಡು, ಶಾಂತವಾಗಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಸ್ವರ್ಗದಂತಿದ್ದ ನೆಲದಲ್ಲಿ ನರಕದರ್ಶನವೇ ಆಗಿದ್ದನ್ನು ಕೇರಳ ಚರಿತ್ರೆ ಎಂದೂ ಮರೆಯಲು ಸಾಧ್ಯವಿಲ್ಲ.</p><p>ಜುಲೈ 30ರಂದು ನಸುಕಿನಲ್ಲಿ ವಯನಾಡಿನ ಚೂರಲ್ಮಲ, ಮುಂಡಕ್ಕೈ ಎನ್ನುವ ಪ್ರದೇಶಗಳು ಭೂಕುಸಿತ ಹಾಗೂ ಪ್ರವಾಹದ ಆರ್ಭಟಕ್ಕೆ ಅಕ್ಷರಶಃ ನಿರ್ನಾಮಗೊಂಡಿತ್ತು.</p><p>ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ವಯನಾಡ್, ನಿರಂತರ ಮಳೆಯ ನಡುವೆ ಹಚ್ಚಹಸುರಿನ ನಡುವೆ ಗಿರಿ ಪರ್ವತದ ಸೊಬಗಿನಿಂದ ಕಂಗೊಳಿಸುತ್ತ, ಪ್ರವಾಸಿಗರನ್ನು ಸೆಳೆಯುತ್ತಿದ್ದ ತಾಣ.</p><p>ಈ ಭೀಕರ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದಿದೆ. ಬಹುತೇಕ ಅಲ್ಲಿನ ಜನ ಊರು ಬಿಟ್ಟು ಹೋಗಿದ್ದರಿಂದ ಅಲ್ಲಿ ಈಗ ಬೆರಳೆಣಿಕೆಯಷ್ಟು ಆದಿವಾಸಿ ಕುಟುಂಬಗಳ ಮನೆಗಳು ಮಾತ್ರ ಉಳಿದಿವೆ.</p><p>ಇನ್ನು, ದುರಂತದಲ್ಲಿ ಕುಟುಂಬವನ್ನು ಕಳೆದುಕೊಂಡು ಬದುಕು ಸಾಗಿಸುತ್ತಿರುವವರ ಪ್ರತಿ ಒಬ್ಬರ ಕಥೆಯು ಸ್ಫೂರ್ತಿದಾಯಕವಾಗಿವೆ. ನೋವಿನಲ್ಲಿಯೂ ನಗುವ ಅವರು ಬದುಕಿಗೆ ಒದಗಿ ಬಂದ ಹೊಸ ಅಧ್ಯಾಯವನ್ನು ಸ್ವೀಕರಿಸಿ ಮುನ್ನೆಡೆಯುತ್ತಿದ್ದಾರೆ.</p><p>ಕುಟುಂಬದ 11 ಸದಸ್ಯರನ್ನು ಕಳೆದುಕೊಂಡು ಒಬ್ಬಂಟಿಯಾಗಿ ಬದುಕುತ್ತಿರುವ ಮುಂಡಕ್ಕೈ ನಿವಾಸಿ ನೌಫಲ್, ಈ ಘಟನೆ ನಡೆದಾಗ ವಿದೇಶದಲ್ಲಿದ್ದರು. ಮನೆ, ಆಸ್ತಿ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಅವರು, ದಾನಿಯೊಬ್ಬರ ಸಹಾಯದಿಂದ ಮೆಪ್ಪಾಡಿಯಲ್ಲಿ ಹೋಟೆಲ್ವೊಂದನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ‘ಜುಲೈ 30’ ಎಂದು ನಾಮಕರಣ ಮಾಡಿದ್ದಾರೆ.</p><p>ದುರಂತದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಕಥೆ ಕಲ್ಲೆದೆಯನ್ನು ಕರಗಿಸುತ್ತದೆ. ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಈ ಮಕ್ಕಳು ಕಿನ್ಶಿಫ್ ಫೋಸ್ಟರ್ ಕೇರ್ ಕಾರ್ಯಕ್ರಮದಡಿ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಮಕ್ಕಳ ದೂರದ ಸಂಬಂಧಿಗಳು ಸರ್ಕಾರದ ಬೆಂಬಲದೊಂದಿಗೆ ಅವರ ಪೋಷಣೆ ಮಾಡಲು ಈ ಕಾರ್ಯಕ್ರಮ ಅನುವು ಮಾಡಿಕೊಟ್ಟಿದೆ.</p><p>ಇದೇ ರೀತಿ ಮನೆ–ಮಠ, ಆಸ್ತಿ, ಕುಟುಂಬ ಸದಸ್ಯರನ್ನು ಕಳೆದುಕೊಂಡ ಎಷ್ಟೊ ಮಂದಿ ದುರಂತದ ಕಹಿ ನೆನಪಿನಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಿದ್ದಾರೆ. ತಮ್ಮವರ ನೆನಪಿನಲ್ಲಿಯೇ ಜೀವನ ಕಳೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಯನಾಡ್(ಕೇರಳ):</strong> ಕಳೆದ ವರ್ಷ ಇದೇ ದಿನ, ವಯನಾಡ್ ತನ್ನ ಚೆಲುವನ್ನೆಲ್ಲ ಹೊದ್ದುಕೊಂಡು, ಶಾಂತವಾಗಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಸ್ವರ್ಗದಂತಿದ್ದ ನೆಲದಲ್ಲಿ ನರಕದರ್ಶನವೇ ಆಗಿದ್ದನ್ನು ಕೇರಳ ಚರಿತ್ರೆ ಎಂದೂ ಮರೆಯಲು ಸಾಧ್ಯವಿಲ್ಲ.</p><p>ಜುಲೈ 30ರಂದು ನಸುಕಿನಲ್ಲಿ ವಯನಾಡಿನ ಚೂರಲ್ಮಲ, ಮುಂಡಕ್ಕೈ ಎನ್ನುವ ಪ್ರದೇಶಗಳು ಭೂಕುಸಿತ ಹಾಗೂ ಪ್ರವಾಹದ ಆರ್ಭಟಕ್ಕೆ ಅಕ್ಷರಶಃ ನಿರ್ನಾಮಗೊಂಡಿತ್ತು.</p><p>ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ವಯನಾಡ್, ನಿರಂತರ ಮಳೆಯ ನಡುವೆ ಹಚ್ಚಹಸುರಿನ ನಡುವೆ ಗಿರಿ ಪರ್ವತದ ಸೊಬಗಿನಿಂದ ಕಂಗೊಳಿಸುತ್ತ, ಪ್ರವಾಸಿಗರನ್ನು ಸೆಳೆಯುತ್ತಿದ್ದ ತಾಣ.</p><p>ಈ ಭೀಕರ ದುರಂತ ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದಿದೆ. ಬಹುತೇಕ ಅಲ್ಲಿನ ಜನ ಊರು ಬಿಟ್ಟು ಹೋಗಿದ್ದರಿಂದ ಅಲ್ಲಿ ಈಗ ಬೆರಳೆಣಿಕೆಯಷ್ಟು ಆದಿವಾಸಿ ಕುಟುಂಬಗಳ ಮನೆಗಳು ಮಾತ್ರ ಉಳಿದಿವೆ.</p><p>ಇನ್ನು, ದುರಂತದಲ್ಲಿ ಕುಟುಂಬವನ್ನು ಕಳೆದುಕೊಂಡು ಬದುಕು ಸಾಗಿಸುತ್ತಿರುವವರ ಪ್ರತಿ ಒಬ್ಬರ ಕಥೆಯು ಸ್ಫೂರ್ತಿದಾಯಕವಾಗಿವೆ. ನೋವಿನಲ್ಲಿಯೂ ನಗುವ ಅವರು ಬದುಕಿಗೆ ಒದಗಿ ಬಂದ ಹೊಸ ಅಧ್ಯಾಯವನ್ನು ಸ್ವೀಕರಿಸಿ ಮುನ್ನೆಡೆಯುತ್ತಿದ್ದಾರೆ.</p><p>ಕುಟುಂಬದ 11 ಸದಸ್ಯರನ್ನು ಕಳೆದುಕೊಂಡು ಒಬ್ಬಂಟಿಯಾಗಿ ಬದುಕುತ್ತಿರುವ ಮುಂಡಕ್ಕೈ ನಿವಾಸಿ ನೌಫಲ್, ಈ ಘಟನೆ ನಡೆದಾಗ ವಿದೇಶದಲ್ಲಿದ್ದರು. ಮನೆ, ಆಸ್ತಿ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಅವರು, ದಾನಿಯೊಬ್ಬರ ಸಹಾಯದಿಂದ ಮೆಪ್ಪಾಡಿಯಲ್ಲಿ ಹೋಟೆಲ್ವೊಂದನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ‘ಜುಲೈ 30’ ಎಂದು ನಾಮಕರಣ ಮಾಡಿದ್ದಾರೆ.</p><p>ದುರಂತದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಕಥೆ ಕಲ್ಲೆದೆಯನ್ನು ಕರಗಿಸುತ್ತದೆ. ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಈ ಮಕ್ಕಳು ಕಿನ್ಶಿಫ್ ಫೋಸ್ಟರ್ ಕೇರ್ ಕಾರ್ಯಕ್ರಮದಡಿ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಮಕ್ಕಳ ದೂರದ ಸಂಬಂಧಿಗಳು ಸರ್ಕಾರದ ಬೆಂಬಲದೊಂದಿಗೆ ಅವರ ಪೋಷಣೆ ಮಾಡಲು ಈ ಕಾರ್ಯಕ್ರಮ ಅನುವು ಮಾಡಿಕೊಟ್ಟಿದೆ.</p><p>ಇದೇ ರೀತಿ ಮನೆ–ಮಠ, ಆಸ್ತಿ, ಕುಟುಂಬ ಸದಸ್ಯರನ್ನು ಕಳೆದುಕೊಂಡ ಎಷ್ಟೊ ಮಂದಿ ದುರಂತದ ಕಹಿ ನೆನಪಿನಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಿದ್ದಾರೆ. ತಮ್ಮವರ ನೆನಪಿನಲ್ಲಿಯೇ ಜೀವನ ಕಳೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>