ಸಿಆರ್ಪಿಎಫ್ನಲ್ಲಿ ಹೆಡ್ಕಾನ್ಸ್ಸ್ಟೆಬಲ್ ಆಗಿದ್ದ ಸಂತೋಷಕುಮಾರ್ ತಿವಾರಿ ಎಂಬುವವರು 2005ರಲ್ಲಿ ತನ್ನ ಸಹೋದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕಾಗಿ, ಸಿಆರ್ಪಿಎಫ್ ಕಾಯ್ದೆಯ ನಿಯಮ 27ರಡಿ ತಿವಾರಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. ಇದನ್ನು ಎತ್ತಿ ಹಿಡಿದು ಒಡಿಶಾ ಹೈಕೋರ್ಟ್ ತೀರ್ಪು ನೀಡಿತ್ತು. ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ತಿವಾರಿ ಮೇಲ್ಮನವಿ ಸಲ್ಲಿಸಿದ್ದರು.