<p><strong>ಹೈದರಾಬಾದ್ (ಐಎಎನ್ಎಸ್/ಪಿಟಿಐ):</strong> ಆಂಧ್ರಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲೂ ಸೋತು ಮುಖಭಂಗ ಅನುಭವಿಸಿದೆ.<br /> ನಾಲ್ಕು ಸ್ಥಾನಗಳಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಜಯ ಗಳಿಸಿದೆ. ವೈಎಸ್ಆರ್ ಕಾಂಗ್ರೆಸ್, ಬಿಜೆಪಿ ತಲಾ ಒಂದು ಸ್ಥಾನಗಳಲ್ಲಿ ಹಾಗೂ ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.<br /> <br /> ಉಪಚುನಾವಣೆ ನಡೆದ ಏಳು ಕ್ಷೇತ್ರಗಳ ಪೈಕಿ ಆರು ತೆಲಂಗಾಣ ಪ್ರಾಂತ್ಯದಲ್ಲೇ ಇದ್ದು, ಭಾನುವಾರ ಮತದಾನ ನಡೆದಿತ್ತು. ಕಾಂಗ್ರೆಸ್ನ ಇಬ್ಬರು ಹಾಗೂ ತೆಲುಗು ದೇಶಂ ಪಕ್ಷದ ನಾಲ್ಕು ಶಾಸಕರ ರಾಜೀನಾಮೆಯಿಂದ ಆ ಕ್ಷೇತ್ರಗಳು ತೆರವಾಗಿದ್ದವು. ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಶಾಸಕರು ನಿಧನರಾಗಿದ್ದರಿಂದ ಮಹಬೂಬನಗರ ದಲ್ಲಿ ಚುನಾವಣೆ ನಡೆಸಬೇಕಾಯಿತು.<br /> <br /> <strong>ಬಿಜೆಡಿ ಮೇಲುಗೈ (ಭುವನೇಶ್ವರ ವರದಿ):</strong> ಈ ರಾಜ್ಯದ ಅತಾಗರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜು ಜನತಾದಳದ (ಬಿಜೆಡಿ) ಅಭ್ಯರ್ಥಿ ರಾಣೇಂದ್ರ ಪ್ರತಾಪ್ ಸ್ವಾಯಿನ್ ಕಾಂಗ್ರೆಸ್ನ ಸುರೇಶ್ ಮಹಾಪಾತ್ರ ಅವರನ್ನು ಸೋಲಿಸಿದ್ದಾರೆ.<br /> <br /> ಕಾನೂನಿಗೆ ವಿರುದ್ಧವಾಗಿ 2009ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ತಮ್ಮನ್ನು ತಡೆಯಲಾಗಿತ್ತು ಎಂದು ಸ್ವಾಯಿನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿ ಕಳೆದ ಡಿಸೆಂಬರ್ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ 2009ರ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿತ್ತು. <br /> ಹಾಗಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಬೇಕಾಯಿತು.<br /> <br /> <strong>ಜಯಾ ಜಯಭೇರಿ (ಚೆನ್ನೈ ವರದಿ): </strong>ಶಂಕರನ್ ಕೋಯಿಲ್ ಮೀಸಲು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಎಸ್. ಮುತ್ತುಸೆಲ್ವಿ ಡಿಎಂಕೆ ಅಭ್ಯರ್ಥಿ ಜವಾಹರ್ ಸೂರ್ಯಕುಮಾರ್ ಅವರನ್ನು 68,744 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಪ್ರಚಾರಕ್ಕಾಗಿ ಜಯಲಲಿತಾ ಸಂಪುಟದ ಬಹುತೇಕ ಎಲ್ಲ ಸದಸ್ಯರು ಅಲ್ಲಿ ವಾಸ್ತವ್ಯ ಹೂಡಿದ್ದರು. ಎಐಎಡಿಎಂಕೆ ಸಚಿವ ಸಿ. ಕರುಪ್ಪಸಾಮಿ ಅವರ ನಿಧನದಿಂದ ಅಲ್ಲಿ ಚುನಾವಣೆ ನಡೆದಿತ್ತು.<br /> <strong><br /> ಕೇರಳದಲ್ಲಿ ಯುಡಿಎಫ್ಗೆ ಗೆಲುವು (ತಿರುವನಂತಪುರ ವರದಿ): </strong>ಕೇರಳದ ಪಿರವಂ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಅನೂಪ್ ಜೇಕಬ್ ಜಯ ಗಳಿಸಿದ್ದಾರೆ.<br /> <br /> ಅನೂಪ್ ಜೇಕಬ್ ತಂದೆ, ಒಮನ್ ಚಾಂಡಿ ಮಂತ್ರಿಮಂಡಲದಲ್ಲಿ ಸಚಿವರು ಆಗಿದ್ದ ಕೇರಳ ಕಾಂಗ್ರೆಸ್ ನಾಯಕ ಟಿ.ಎಂ. ಜೆಕಬ್ ನಿಧನದಿಂದ ಆ ಕ್ಷೇತ್ರ ತೆರವಾಗಿತ್ತು.</p>.<p><strong>ಗುಜರಾತ್: ಮೋದಿಗೆ ಹಿನ್ನಡೆ</strong></p>.<p><strong>ಅಹಮದಾಬಾದ್ (ಪಿಟಿಐ): </strong>ಗುಜರಾತ್ನ ಮನ್ಸಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವಾಗಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.<br /> <br /> 1995ರಿಂದ ಬಿಜೆಪಿ ಹಿಡಿತದಲ್ಲಿ ಇದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬೂಜಿ ಠಾಕೂರ್ ಬಿಜೆಪಿಯ ಡಿ.ಡಿ. ಪಟೇಲ್ ಅವರನ್ನು 8000 ಮತಗಳ ಅಂತರದಿಂದ ಸೋಲಿಸಿದ್ದಾರೆ.<br /> <br /> ಈ ವರ್ಷದ ಅಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಹೊಸ ಶಾಸಕರ ಅವಧಿ ಕೇವಲ ಎಂಟು ತಿಂಗಳು ಇರುತ್ತದೆ. ಆದಾಗ್ಯೂ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮನ್ಸಾದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಆ ಪಕ್ಷದ ಕಾರ್ಯಕರ್ತರಲ್ಲಿ ಭಾರಿ ಹುರುಪು ಮೂಡಿಸಿದೆ.<br /> <br /> ಮಾಜಿ ಸ್ಪೀಕರ್ ಬಿಜೆಪಿಯ ಮಂಗಲದಾಸ್ ಪಟೇಲ್ ಅವರ ನಿಧನದಿಂದ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಐಎಎನ್ಎಸ್/ಪಿಟಿಐ):</strong> ಆಂಧ್ರಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲೂ ಸೋತು ಮುಖಭಂಗ ಅನುಭವಿಸಿದೆ.<br /> ನಾಲ್ಕು ಸ್ಥಾನಗಳಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಜಯ ಗಳಿಸಿದೆ. ವೈಎಸ್ಆರ್ ಕಾಂಗ್ರೆಸ್, ಬಿಜೆಪಿ ತಲಾ ಒಂದು ಸ್ಥಾನಗಳಲ್ಲಿ ಹಾಗೂ ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.<br /> <br /> ಉಪಚುನಾವಣೆ ನಡೆದ ಏಳು ಕ್ಷೇತ್ರಗಳ ಪೈಕಿ ಆರು ತೆಲಂಗಾಣ ಪ್ರಾಂತ್ಯದಲ್ಲೇ ಇದ್ದು, ಭಾನುವಾರ ಮತದಾನ ನಡೆದಿತ್ತು. ಕಾಂಗ್ರೆಸ್ನ ಇಬ್ಬರು ಹಾಗೂ ತೆಲುಗು ದೇಶಂ ಪಕ್ಷದ ನಾಲ್ಕು ಶಾಸಕರ ರಾಜೀನಾಮೆಯಿಂದ ಆ ಕ್ಷೇತ್ರಗಳು ತೆರವಾಗಿದ್ದವು. ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಪಕ್ಷೇತರ ಶಾಸಕರು ನಿಧನರಾಗಿದ್ದರಿಂದ ಮಹಬೂಬನಗರ ದಲ್ಲಿ ಚುನಾವಣೆ ನಡೆಸಬೇಕಾಯಿತು.<br /> <br /> <strong>ಬಿಜೆಡಿ ಮೇಲುಗೈ (ಭುವನೇಶ್ವರ ವರದಿ):</strong> ಈ ರಾಜ್ಯದ ಅತಾಗರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜು ಜನತಾದಳದ (ಬಿಜೆಡಿ) ಅಭ್ಯರ್ಥಿ ರಾಣೇಂದ್ರ ಪ್ರತಾಪ್ ಸ್ವಾಯಿನ್ ಕಾಂಗ್ರೆಸ್ನ ಸುರೇಶ್ ಮಹಾಪಾತ್ರ ಅವರನ್ನು ಸೋಲಿಸಿದ್ದಾರೆ.<br /> <br /> ಕಾನೂನಿಗೆ ವಿರುದ್ಧವಾಗಿ 2009ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ತಮ್ಮನ್ನು ತಡೆಯಲಾಗಿತ್ತು ಎಂದು ಸ್ವಾಯಿನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿ ಕಳೆದ ಡಿಸೆಂಬರ್ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ 2009ರ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿತ್ತು. <br /> ಹಾಗಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಬೇಕಾಯಿತು.<br /> <br /> <strong>ಜಯಾ ಜಯಭೇರಿ (ಚೆನ್ನೈ ವರದಿ): </strong>ಶಂಕರನ್ ಕೋಯಿಲ್ ಮೀಸಲು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಎಸ್. ಮುತ್ತುಸೆಲ್ವಿ ಡಿಎಂಕೆ ಅಭ್ಯರ್ಥಿ ಜವಾಹರ್ ಸೂರ್ಯಕುಮಾರ್ ಅವರನ್ನು 68,744 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ. ಈ ಕ್ಷೇತ್ರದ ಪ್ರಚಾರಕ್ಕಾಗಿ ಜಯಲಲಿತಾ ಸಂಪುಟದ ಬಹುತೇಕ ಎಲ್ಲ ಸದಸ್ಯರು ಅಲ್ಲಿ ವಾಸ್ತವ್ಯ ಹೂಡಿದ್ದರು. ಎಐಎಡಿಎಂಕೆ ಸಚಿವ ಸಿ. ಕರುಪ್ಪಸಾಮಿ ಅವರ ನಿಧನದಿಂದ ಅಲ್ಲಿ ಚುನಾವಣೆ ನಡೆದಿತ್ತು.<br /> <strong><br /> ಕೇರಳದಲ್ಲಿ ಯುಡಿಎಫ್ಗೆ ಗೆಲುವು (ತಿರುವನಂತಪುರ ವರದಿ): </strong>ಕೇರಳದ ಪಿರವಂ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿ ಅನೂಪ್ ಜೇಕಬ್ ಜಯ ಗಳಿಸಿದ್ದಾರೆ.<br /> <br /> ಅನೂಪ್ ಜೇಕಬ್ ತಂದೆ, ಒಮನ್ ಚಾಂಡಿ ಮಂತ್ರಿಮಂಡಲದಲ್ಲಿ ಸಚಿವರು ಆಗಿದ್ದ ಕೇರಳ ಕಾಂಗ್ರೆಸ್ ನಾಯಕ ಟಿ.ಎಂ. ಜೆಕಬ್ ನಿಧನದಿಂದ ಆ ಕ್ಷೇತ್ರ ತೆರವಾಗಿತ್ತು.</p>.<p><strong>ಗುಜರಾತ್: ಮೋದಿಗೆ ಹಿನ್ನಡೆ</strong></p>.<p><strong>ಅಹಮದಾಬಾದ್ (ಪಿಟಿಐ): </strong>ಗುಜರಾತ್ನ ಮನ್ಸಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವಾಗಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.<br /> <br /> 1995ರಿಂದ ಬಿಜೆಪಿ ಹಿಡಿತದಲ್ಲಿ ಇದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬೂಜಿ ಠಾಕೂರ್ ಬಿಜೆಪಿಯ ಡಿ.ಡಿ. ಪಟೇಲ್ ಅವರನ್ನು 8000 ಮತಗಳ ಅಂತರದಿಂದ ಸೋಲಿಸಿದ್ದಾರೆ.<br /> <br /> ಈ ವರ್ಷದ ಅಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಹೊಸ ಶಾಸಕರ ಅವಧಿ ಕೇವಲ ಎಂಟು ತಿಂಗಳು ಇರುತ್ತದೆ. ಆದಾಗ್ಯೂ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮನ್ಸಾದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಆ ಪಕ್ಷದ ಕಾರ್ಯಕರ್ತರಲ್ಲಿ ಭಾರಿ ಹುರುಪು ಮೂಡಿಸಿದೆ.<br /> <br /> ಮಾಜಿ ಸ್ಪೀಕರ್ ಬಿಜೆಪಿಯ ಮಂಗಲದಾಸ್ ಪಟೇಲ್ ಅವರ ನಿಧನದಿಂದ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>