<p><strong>ತಿರುಪತಿ (ಪಿಟಿಐ): </strong>ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು 2 ವರ್ಷಗಳ ಹಿಂದೆ ತಿರುಪತಿ ವೆಂಕಟೇಶ್ವರನಿಗೆ ಕಾಣಿಕೆ ನೀಡಿರುವ 45 ಕೋಟಿ ಮೌಲ್ಯದ ವಜ್ರ ಖಚಿತ ಚಿನ್ನದ ಕಿರೀಟವನ್ನು ಹಿಂದಿರುಗಿಸುವುದಿಲ್ಲ ಎಂದು ದೇವಾಲಯದ ಟ್ರಸ್ಟ್ ಶನಿವಾರ ಹೇಳಿದೆ.<br /> <br /> ಕೆಲವು ಭಕ್ತರು ಹಾಗೂ ರಾಜಕೀಯ ಪಕ್ಷಗಳು `ಕಳಂಕಿತ~ ರೆಡ್ಡಿ ನೀಡಿರುವ ಕಿರೀಟವನ್ನು ವಾಪಸ್ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ದೇವಾಲಯದ ನಿರ್ವಹಣೆ ಮಾಡುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ವಿ ಸುಬ್ರಹ್ಮಣ್ಯಂ ಅವರು ಶನಿವಾರ ಹೇಳಿಕೆ ನೀಡಿದ್ದು, `ಭಕ್ತರು ನೀಡಿದ ಯಾವುದೇ ಕಾಣಿಕೆಯನ್ನು ಯಾವುದೇ ಪರಿಸ್ಥಿತಿಯಲ್ಲಿ ವಾಪಸ್ ನೀಡುವುದಿಲ್ಲ. ಜನಾರ್ದನ ರೆಡ್ಡಿ ವಿಷಯದಲ್ಲೂ ಇದೇ ಅನ್ವಯವಾಗುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ರೆಡ್ಡಿ ಅವರು 2009ರ ಜೂನ್ 11ರಂದು 2.5 ಅಡಿ ಎತ್ತರದ ಒಟ್ಟು 30 ಕೆ.ಜಿ ತೂಕದ ಕಿರೀಟವನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದರು. <br /> <br /> ಅಕ್ರಮ ಗಣಿಕಾರಿಕೆ ನಡೆಸಿದ ಆರೋಪದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಸೆಪ್ಟೆಂಬರ್ 5ರಂದು ಬಂಧಿಸಿತ್ತು. ಈಗ ಅವರು ಹೈದರಾಬಾದ್ನ ಜೈಲಿನಲ್ಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ (ಪಿಟಿಐ): </strong>ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು 2 ವರ್ಷಗಳ ಹಿಂದೆ ತಿರುಪತಿ ವೆಂಕಟೇಶ್ವರನಿಗೆ ಕಾಣಿಕೆ ನೀಡಿರುವ 45 ಕೋಟಿ ಮೌಲ್ಯದ ವಜ್ರ ಖಚಿತ ಚಿನ್ನದ ಕಿರೀಟವನ್ನು ಹಿಂದಿರುಗಿಸುವುದಿಲ್ಲ ಎಂದು ದೇವಾಲಯದ ಟ್ರಸ್ಟ್ ಶನಿವಾರ ಹೇಳಿದೆ.<br /> <br /> ಕೆಲವು ಭಕ್ತರು ಹಾಗೂ ರಾಜಕೀಯ ಪಕ್ಷಗಳು `ಕಳಂಕಿತ~ ರೆಡ್ಡಿ ನೀಡಿರುವ ಕಿರೀಟವನ್ನು ವಾಪಸ್ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ದೇವಾಲಯದ ನಿರ್ವಹಣೆ ಮಾಡುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ವಿ ಸುಬ್ರಹ್ಮಣ್ಯಂ ಅವರು ಶನಿವಾರ ಹೇಳಿಕೆ ನೀಡಿದ್ದು, `ಭಕ್ತರು ನೀಡಿದ ಯಾವುದೇ ಕಾಣಿಕೆಯನ್ನು ಯಾವುದೇ ಪರಿಸ್ಥಿತಿಯಲ್ಲಿ ವಾಪಸ್ ನೀಡುವುದಿಲ್ಲ. ಜನಾರ್ದನ ರೆಡ್ಡಿ ವಿಷಯದಲ್ಲೂ ಇದೇ ಅನ್ವಯವಾಗುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ರೆಡ್ಡಿ ಅವರು 2009ರ ಜೂನ್ 11ರಂದು 2.5 ಅಡಿ ಎತ್ತರದ ಒಟ್ಟು 30 ಕೆ.ಜಿ ತೂಕದ ಕಿರೀಟವನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದರು. <br /> <br /> ಅಕ್ರಮ ಗಣಿಕಾರಿಕೆ ನಡೆಸಿದ ಆರೋಪದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಸೆಪ್ಟೆಂಬರ್ 5ರಂದು ಬಂಧಿಸಿತ್ತು. ಈಗ ಅವರು ಹೈದರಾಬಾದ್ನ ಜೈಲಿನಲ್ಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>