<p><span style="font-size: 26px;"><strong>ಚಂಡೀಗಡ (ಪಿಟಿಐ):</strong> ಸ್ವಯಂಘೋಷಿತ ದೇವಮಾನವ ರಾಮ್ಪಾಲ್ ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಗೆ </span><span style="font-size: 26px;">ಮತ್ತು ನಂತರ ಅವರಿಗೆ ಒದಗಿಸಲಾದ ಭದ್ರತೆಗೆ 26 ಕೋಟಿ ಖರ್ಚಾಗಿದೆ.</span></p>.<p>ಹರಿಯಾಣದ ಪೊಲೀಸ್ ಮಹಾನಿರ್ದೇಶಕ ಎಸ್.ಎನ್ ವಶಿಷ್ಠ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.<br /> <br /> ರಾಮ್ಪಾಲ್ ಮತ್ತು ಅವರ ಇಬ್ಬರು ಸಹಚರರನ್ನು ಶುಕ್ರವಾರ ಬಿಗಿ ಭದ್ರತೆಯಲ್ಲಿ ಹರಿಯಾಣ ಹೈಕೋರ್ಟ್ಗೆ ಹಾಜರುಪಡಿಸಲಾಯಿತು. ನ್ಯಾಯಮೂರ್ತಿ ಎಂ. ಜಯಪಾಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು.<br /> <br /> ಹಿಸ್ಸಾರ್ನಲ್ಲಿರುವ ‘ಸತ್ಲೋಕ್’ ಆಶ್ರಮದಲ್ಲಿ ರಾಮ್ಪಾಲ್ ತಲೆಮರೆಸಿಕೊಂಡಿದ್ದರು. ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಎರಡು ದಿನ ಸತತ ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಅವರನ್ನು (ನವೆಂಬರ್ 19) ಬಂಧಿಸಿದ್ದರು.<br /> <br /> ಎಸ್.ಎನ್ ವಶಿಷ್ಠ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ರಾಮ್ಪಾಲ್ ಬಂಧನಕ್ಕೆ ಹರಿಯಾಣ ಸರ್ಕಾರ ರೂ 15.43 ಕೋಟಿ, ಪಂಜಾಬ್ ರೂ 4.34 ಕೋಟಿ, ಚಂಡೀಗಡ ಆಡಳಿತ ರೂ 3.29 ಕೋಟಿ ಮತ್ತು ಕೇಂದ್ರ ಸರ್ಕಾರ 3.55 ಕೋಟಿ ಖರ್ಚು ಮಾಡಿದೆ. ಒಟ್ಟಾರೆ ಈ ಕಾರ್ಯಾಚರಣೆಗೆ 26.61 ಕೋಟಿ ಖರ್ಚಾಗಿದೆ ಎಂದು ವಿವರ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಚಂಡೀಗಡ (ಪಿಟಿಐ):</strong> ಸ್ವಯಂಘೋಷಿತ ದೇವಮಾನವ ರಾಮ್ಪಾಲ್ ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಗೆ </span><span style="font-size: 26px;">ಮತ್ತು ನಂತರ ಅವರಿಗೆ ಒದಗಿಸಲಾದ ಭದ್ರತೆಗೆ 26 ಕೋಟಿ ಖರ್ಚಾಗಿದೆ.</span></p>.<p>ಹರಿಯಾಣದ ಪೊಲೀಸ್ ಮಹಾನಿರ್ದೇಶಕ ಎಸ್.ಎನ್ ವಶಿಷ್ಠ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.<br /> <br /> ರಾಮ್ಪಾಲ್ ಮತ್ತು ಅವರ ಇಬ್ಬರು ಸಹಚರರನ್ನು ಶುಕ್ರವಾರ ಬಿಗಿ ಭದ್ರತೆಯಲ್ಲಿ ಹರಿಯಾಣ ಹೈಕೋರ್ಟ್ಗೆ ಹಾಜರುಪಡಿಸಲಾಯಿತು. ನ್ಯಾಯಮೂರ್ತಿ ಎಂ. ಜಯಪಾಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು.<br /> <br /> ಹಿಸ್ಸಾರ್ನಲ್ಲಿರುವ ‘ಸತ್ಲೋಕ್’ ಆಶ್ರಮದಲ್ಲಿ ರಾಮ್ಪಾಲ್ ತಲೆಮರೆಸಿಕೊಂಡಿದ್ದರು. ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಎರಡು ದಿನ ಸತತ ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಅವರನ್ನು (ನವೆಂಬರ್ 19) ಬಂಧಿಸಿದ್ದರು.<br /> <br /> ಎಸ್.ಎನ್ ವಶಿಷ್ಠ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ರಾಮ್ಪಾಲ್ ಬಂಧನಕ್ಕೆ ಹರಿಯಾಣ ಸರ್ಕಾರ ರೂ 15.43 ಕೋಟಿ, ಪಂಜಾಬ್ ರೂ 4.34 ಕೋಟಿ, ಚಂಡೀಗಡ ಆಡಳಿತ ರೂ 3.29 ಕೋಟಿ ಮತ್ತು ಕೇಂದ್ರ ಸರ್ಕಾರ 3.55 ಕೋಟಿ ಖರ್ಚು ಮಾಡಿದೆ. ಒಟ್ಟಾರೆ ಈ ಕಾರ್ಯಾಚರಣೆಗೆ 26.61 ಕೋಟಿ ಖರ್ಚಾಗಿದೆ ಎಂದು ವಿವರ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>