<p>ರಾಯಚೂರು ಎಂಬ ಉರಿಬಿಸಿಲ ಊರನ್ನು ಮಲೆನಾಡನ್ನಾಗಿಸುವ ಕನಸು ಈ ಈರಣ್ಣ ಕೋಸಗಿ ಅವರದ್ದು. ರಾಯಚೂರಿನ ನೇತಾಜಿ ನಗರದಲ್ಲಿರುವ ಇವರು, ಪ್ರತಿ ದಿನ ಎರಡು ತಾಸುಗಳನ್ನು ನಗರವನ್ನು ಹಸಿರನ್ನಾಗಿಸಲು ಮೀಸಲಿಡುತ್ತಾರೆ. ತಮ್ಮ ಮನೆಯ ಹಿಂದೆಯೇ ನರ್ಸರಿ ಮಾಡಿಕೊಂಡಿರುವ ಈರಣ್ಣ, ಅದರ ಸಸಿಗಳನ್ನು ರಾಯಚೂರಿನ ವಿವಿಧೆಡೆ ನೆಟ್ಟು ಬರುತ್ತಾರೆ. ಯಾವುದೇ ಪ್ರಚಾರ, ಫಲಾಪೇಕ್ಷೆಯಿಲ್ಲದೆ 2006ರಿಂದ ಈ ಕಾಯಕದಲ್ಲಿ ನಿರತರಾಗಿರುವ ಈರಣ್ಣ, ಈವರೆಗೆ ನೆಟ್ಟಿರುವ ಸಸಿ, ಬೆಳೆಸಿರುವ ಮರಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ! ಆರ್ಥಿಕವಾಗಿ ಬಡತನದಲ್ಲಿರುವ ಈ ಈರಣ್ಣ, ಪರಿಸರದ ವಿಷಯದಲ್ಲಿ ಮತ್ತು ಸ್ವಭಾವದಲ್ಲಿ ಹೃದಯ ಶ್ರೀಮಂತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>