‘ನಾನು, ಮುಷ್ತಾಕ್ ಮಾಲ್ವಿ, ಎಸ್. ಅಬ್ದುಲ್ ರಹೀಂ, ಸೈಯದ್ ಖಾದರ್, ರಜ್ವಿಖಾನ್, ಅಬ್ದುಲ್ ರಬ್, ಅಬ್ದುಲ್ ಸಮದ್, ಖಲೀಲ್ ಇತರರು ಸೇರಿ 20ಕ್ಕೂ ಅಧಿಕ ವಕೀಲರು ಮೊದಲು ಈ ಬಗ್ಗೆ ಸಭೆ ನಡೆಸಿದೆವು. ಆನಂತರ ಜನರಲ್ಲಿ ಜಾಗೃತಿ ಮೂಡಿಸಲು ತೀರ್ಮಾನ ಕೈಗೊಳ್ಳಲಾಯಿತು. ಅದರ ಜತೆಗೆ ದೂರು ಹೇಗೆ ಇರಬೇಕು ಎಂಬುದನ್ನೂ ಚರ್ಚಿಸಲಾಯಿತು. ಮುಷ್ತಾಕ್ ಮಾಲ್ವಿ, ಎಸ್. ಅಬ್ದುಲ್ ರಹೀಂ ಮಾರ್ಗದರ್ಶನದಲ್ಲಿ ದೂರು ತಯಾರು ಮಾಡಿದರು. ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಆಗ ಈ ಕಾಯ್ದೆಯನ್ನು ರದ್ದುಪಡಿಸಲು ದೂರು ಸಲ್ಲಿಸಲು ಜನರು ಮುಂದೆ ಬಂದರು. ರಿಜಿಸ್ಟರ್ಡ್ ಪೋಸ್ಟ್ ವೆಚ್ಚ ಭರಿಸಲು ಸಾಧ್ಯವಿಲ್ಲದವರಿಗೆ ನಾವೇ ವೆಚ್ಚ ಭರಿಸಿ ಸಹಾಯ ಮಾಡಿದೆವು’ ಎಂದು ವಿವರ ನೀಡಿದರು.