‘ಇತ್ತೀಚೆಗೆ ನಾವು ಹಾವೇರಿ ಜಿಲ್ಲೆ ಮಾಸೂರಿನಲ್ಲಿರುವ ಕವಿ ಸರ್ವಜ್ಞನ ಜನ್ಮಸ್ಥಳ ಮತ್ತು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದೆವು. ಅಲ್ಲಿನ ಪರಿಸ್ಥಿತಿ ಕಂಡು ಮನಸ್ಸಿಗೆ ತುಂಬಾ ನೋವಾಯಿತು. ರಾಜ್ಯದಲ್ಲಿ ಬಸವ ಗುರುಪೀಠ, ಕನಕ, ವಾಲ್ಮೀಕಿ ಗುರುಪೀಠ ಸೇರಿದಂತೆ ಹಲವು ದಾರ್ಶನಿಕರ ಗುರುಪೀಠಗಳಿಗೆ ಸರ್ಕಾರ ಅನುದಾನ ನೀಡಿ, ಅಭಿವೃದ್ಧಿಪಡಿಸಿದೆ. ಅದೇ ರೀತಿ ಈ ಸ್ಥಳವನ್ನು ಅಭಿವೃದ್ದಿಪಡಿಸಿ, ಸಂಶೋಧನಾ ಕೇಂದ್ರ ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.