ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ₹18,177 ಕೋಟಿ ಕೇಳಿದೆ. ಕೇಂದ್ರ ಸರ್ಕಾರ ನಯಾಪೈಸೆ ಕೊಟ್ಟಿಲ್ಲ. 15ನೇ ಹಣಕಾಸು ಆಯೋಗದಿಂದ ವಿಶೇಷ ಅನುದಾನ ₹5,495 ಕೋಟಿ ಸಹ ಬಂದಿಲ್ಲ. ಸಹಕಾರಿ ಯೋಜನೆಗಳ ಅನುದಾನ ₹33 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಯ ₹5,300 ಕೋಟಿ, ಪರಿಷ್ಕೃತ ತೆರಿಗೆ ಪಾಲಿನ ಕೊರತೆ ₹62,098 ಕೋಟಿ ಬರಬೇಕಿದೆ. ಪಕ್ಷ ರಾಜಕಾರಣ, ಅನುದಾನ ಹಂಚಿಕೆ ವಿಳಂಬ ರಾಜ್ಯದ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.