ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ದರ್ಶನ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಮೈಸೂರಿನಲ್ಲಿ ಚಿಕಿತ್ಸೆ

Last Updated 24 ಸೆಪ್ಟೆಂಬರ್ 2018, 3:29 IST
ಅಕ್ಷರ ಗಾತ್ರ

ಮೈಸೂರು: ಸೋಮವಾರ ಮುಂಜಾನೆ ನಟ ದರ್ಶನ್‌ ಸೇರಿದಂತೆ ಮೂವರು ನಟರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ನಟ ದರ್ಶನ್‌, ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದು, ದರ್ಶನ್‌ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಮೈಸೂರು ಹೊರವಲಯದ ರಿಂಗ್ ರೋಡ್‌ನ ಹಿನಕಲ್‌ ಬಳಿ ಮುಂಜಾನೆ 3 ಗಂಟೆಗೆಅಪಘಾತ ಸಂಭವಿಸಿದೆ.ದರ್ಶನ್ ಅವರ ಕೈಗೆ ಗಾಯವಾಗಿದ್ದು, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರಾಜ್‌, ಪ್ರಜ್ವಲ್ ದೇವರಾಜ್ ಹಾಗೂ ಕಾರು ಚಾಲಕ ಸಹ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ನಟರು ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅರಮನೆಯಲ್ಲಿ ಮಾವುತ ಮತ್ತು ಕಾವಾಡಿಗಳಿಗೆ ಭಾನುವಾರಷ್ಟೇ ಊಟ ಹಾಕಿಸಿದ್ದ ದರ್ಶನ್ ನಸುಕಿನಲ್ಲಿ ಕಾರಿನಲ್ಲಿ ಹೊರಟಿದ್ದರು.

(ಆಸ್ಪತ್ರೆಯಲ್ಲಿ ಕೊಠಡಿಯ ಹೊರಗೆ ಕುಳಿತು ಕಾಯುತ್ತಿರುವಪ್ರಣವ್ ದೇವರಾಜ್)

ನಟ ದರ್ಶನ್ ಕಾರು ಅಪಘಾತಕ್ಕೀಡಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಹಾಗೂಮೈಸೂರು ಗ್ರಾಮಾಂತರ,ವಿ.ವಿ.ಪುರಂ ಸಂಚಾರ ಠಾಣಾ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ.ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಆಸ್ಪತ್ರೆಗೆ ಬಂದಿದ್ದಾರೆ.

ದೇವರಾಜ್ ಅವರಿಗೆ ಕುತ್ತಿಗೆ ಹಾಗೂ ಎದೆಯ ಮಧ್ಯೆ ಪೆಟ್ಟಾಗಿದ್ದು, ಮೂಳೆ ಮುರಿದಿದೆ ಎಂದುಆಪ್ತೆರೊಬ್ಬರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾರಿ ಗೋಪ್ಯತೆ ಕಾಪಾಡಿಕೊಳ್ಳಲಾಗುತ್ತಿದೆ.

ಯಜಮಾನ ಚಿತ್ರದ ಫಸ್ಟ್ ಲುಕ್‌ನ್ನು ದರ್ಶನ್‌ ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಪಘಾತದ ಕುರಿತು ಅಭಿಮಾನಿಗಳಿಗೆಯಾವುದೇ ಸಂದೇಶ ಟ್ವೀಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT