‘ಮಾ.24ರಂದು ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಅದಕ್ಕೂ ಎರಡು ದಿನಗಳ ಮೊದಲು ನಾನು, ನನ್ನಮ್ಮ ಹಂಪಿ ನೋಡಲು ಬಂದಿದ್ದೆವು. ಏಕಾಏಕಿ ಲಾಕ್ಡೌನ್ ಘೋಷಿಸಿದ್ದರಿಂದ ಹೋಟೆಲ್ನಲ್ಲೇ ಉಳಿದುಕೊಂಡೆವು. ಏ. 14ರ ವರೆಗೆ ಇಲ್ಲೇ ಉಳಿದು ನಂತರ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದೆವು. ಮಂಗಳವಾರ ಪ್ರಧಾನಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಿಕೊಂಡು ಮುಂದುವರೆಯಲು ನಿರ್ಧರಿಸಿದ್ದೇವೆ’ ಎಂದು ಕೃಷ್ಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.