ಚಿಕ್ಕಮಗಳೂರು: ಪುತ್ರಿ ಅಮೂಲ್ಯಾ ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಎಂದು ಕೂಗಿರುವುದು ಖಂಡಿತಾ ತಪ್ಪು, ಅವಳು ಜೈಲಿನಲ್ಲಿಯೇ ಇರಲಿ ಎಂದು ಅಮೂಲ್ಯಾ ತಂದೆ ವೊಜಲ್ಡ್ ಹೇಳಿದ್ದಾರೆ.
ಗುರುವಾರ ರಾತ್ರಿ ಮನೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರೊಂದಿಗೆ ವೊಜಲ್ಡ್ ಮಾತನಾಡಿ, ‘ಭಾರತ್ ಮಾತಾ ಕಿ ಜೈ… ಭಾರತ್ ಮಾತಾ ಕಿ ಜೈ … ಪೊಲೀಸರು ಪುತ್ರಿಯ ಕೈಕಾಲು ಮುರಿಯಲಿ, ನಮ್ಮದೇನು ಅಭ್ಯಂತರ ಇಲ್ಲ’ ಎಂದಿದ್ದಾರೆ.
‘ಅಮೂಲ್ಯಾ ಈ ರೀತಿ ಮಾತಾಡಬಾರದು ಎಂದು ಹೇಳಿದ್ದೆ. ವಿದೇಶದಿಂದ ಬಂದಿದ್ದ ನನ್ನನ್ನ ತಮ್ಮನೂ ಬುದ್ಧಿವಾದ ಹೇಳಿದ್ದ. ಆಕೆ ಕೇಳುತ್ತಿರಲಿಲ್ಲ. ಕುಟುಂಬದವರಿಗೆ ಬಹಳ ಬೇಸರ ಮಾಡಿಸಿದ್ದಾಳೆ. ಪುತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ’ ಎಂದು ಹೇಳಿದ್ದಾರೆ.
ಬಜರಂಗದಳವರು ಅಮೂಲ್ಯಾ ಮನೆಗೆ ಹೋಗಿ ವೊಜಲ್ಡ್ ಅವರ ಜತೆ ಮಾತುಕತೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಿಎಎ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪ್ರತಿಭಟನೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮೂಲ್ಯ ಎಂಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.#CAApic.twitter.com/Zb3YdS37T0