2021ರ ಮಾರ್ಚ್ 10ರಂದು ಗೃಹ ಸಚಿವರು ಸಹಿ ಮಾಡಿದ ಟಿಪ್ಪಣಿ ಆಧರಿಸಿ 2021ರ ಮಾರ್ಚ್ 11ರಂದು ಎಸ್ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಸೌಮೇಂದು ಮುಖರ್ಜಿ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ, ಜಂಟಿ ಪೊಲೀಸ್ ಕಮಿಷನರ್(ಅಪರಾಧ) ಸಂದೀಪ್ ಪಾಟೀಲ ಸಹಿ ಮಾಡಿ ಸಲ್ಲಿಸಿದ್ದ ತನಿಖಾ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಪರಿಶೀಲನೆ ನಡೆಸಿತು.