<p><strong>ಗುವಾಹಟಿ:</strong> ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಗಂಭೀರವಾಗಿದ್ದು, 10 ಜಿಲ್ಲೆಗಳಲ್ಲಿ ಸುಮಾರು 31,000 ಮಂದಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಮುಂದಿನ ಐದು ದಿನಗಳಲ್ಲಿ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ.</p><p>ರಾಜ್ಯದ ಚಿರಂಗ್, ದರಂಗ್, ಧೆಮಜಿ, ಧುಬ್ರಿ, ದಿಬ್ರೂಗಢ, ಕೊಕ್ರಜಾರ್, ಲಖೀಂಪುರ, ನಲ್ಬಾರಿ, ಸೊನಿತ್ಪುರ ಹಾಗೂ ಉಡಲ್ಗುರಿ ಜಿಲ್ಲೆಗಳಲ್ಲಿ 30,700ಕ್ಕೂ ಅಧಿಕ ಮಂದಿ ಪ್ರವಾಹದಿಂದ ತೊಂದರೆಗೆ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.</p>.<p>ಲಖೀಂಪುರ ಜಿಲ್ಲೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, 22,000 ಮಂದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ದಿಬ್ರೂಗಢದಲ್ಲಿ 3,800 ಮಂದಿ ಹಾಗೂ ಕೊಕ್ರಜಾರ್ನಲ್ಲಿ 1,800 ಮಂದಿ ಪ್ರವಾಹದಿಂದ ಸಮಸ್ಯೆಗೆ ಈಡಾಗಿದ್ದಾರೆ.</p><p>ಸದ್ಯ 25 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ನಿರಾಶ್ರಿತರ ಕೇಂದ್ರ ತೆರೆದಿಲ್ಲ. ನೆರೆಯಿಂದಾಗಿ 444 ಗ್ರಾಮಗಳು ಮುಳುಗಡೆಯಾಗಿದ್ದು, 4,741.23 ಹೆಕ್ಟೆರ್ ಪ್ರದೇಶದ ಬೆಳೆ ನಾಶವಾಗಿದೆ.</p><p>ಬಿಸ್ವನಾಥ್, ಧುಬ್ರಿ, ದಿಬ್ರೂಗಢ, ಗೋಲಾಘಾಟ್, ಕಮ್ರೂಪ್, ಕರೀಮ್ಗಂಜ್, ಕೊಕ್ರಜಾರ್, ಲಖೀಂಪುರ, ಮಜುಲಿ, ಮೋರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್ಪುರ್, ಸೌತ್ ಸಲ್ಮಾರಾ, ತಮುಲ್ಪುರ್ ಮತ್ತು ಉದಲ್ಗುರಿಯಲ್ಲಿ ಭಾರಿ ಪ್ರಮಾಣದ ಭೂಸವೆತ ಉಂಟಾಗಿದೆ. ನೀರನ ರಭಸಕ್ಕೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ:</strong> ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಗಂಭೀರವಾಗಿದ್ದು, 10 ಜಿಲ್ಲೆಗಳಲ್ಲಿ ಸುಮಾರು 31,000 ಮಂದಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಮುಂದಿನ ಐದು ದಿನಗಳಲ್ಲಿ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ.</p><p>ರಾಜ್ಯದ ಚಿರಂಗ್, ದರಂಗ್, ಧೆಮಜಿ, ಧುಬ್ರಿ, ದಿಬ್ರೂಗಢ, ಕೊಕ್ರಜಾರ್, ಲಖೀಂಪುರ, ನಲ್ಬಾರಿ, ಸೊನಿತ್ಪುರ ಹಾಗೂ ಉಡಲ್ಗುರಿ ಜಿಲ್ಲೆಗಳಲ್ಲಿ 30,700ಕ್ಕೂ ಅಧಿಕ ಮಂದಿ ಪ್ರವಾಹದಿಂದ ತೊಂದರೆಗೆ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.</p>.<p>ಲಖೀಂಪುರ ಜಿಲ್ಲೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದ್ದು, 22,000 ಮಂದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ದಿಬ್ರೂಗಢದಲ್ಲಿ 3,800 ಮಂದಿ ಹಾಗೂ ಕೊಕ್ರಜಾರ್ನಲ್ಲಿ 1,800 ಮಂದಿ ಪ್ರವಾಹದಿಂದ ಸಮಸ್ಯೆಗೆ ಈಡಾಗಿದ್ದಾರೆ.</p><p>ಸದ್ಯ 25 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ನಿರಾಶ್ರಿತರ ಕೇಂದ್ರ ತೆರೆದಿಲ್ಲ. ನೆರೆಯಿಂದಾಗಿ 444 ಗ್ರಾಮಗಳು ಮುಳುಗಡೆಯಾಗಿದ್ದು, 4,741.23 ಹೆಕ್ಟೆರ್ ಪ್ರದೇಶದ ಬೆಳೆ ನಾಶವಾಗಿದೆ.</p><p>ಬಿಸ್ವನಾಥ್, ಧುಬ್ರಿ, ದಿಬ್ರೂಗಢ, ಗೋಲಾಘಾಟ್, ಕಮ್ರೂಪ್, ಕರೀಮ್ಗಂಜ್, ಕೊಕ್ರಜಾರ್, ಲಖೀಂಪುರ, ಮಜುಲಿ, ಮೋರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್ಪುರ್, ಸೌತ್ ಸಲ್ಮಾರಾ, ತಮುಲ್ಪುರ್ ಮತ್ತು ಉದಲ್ಗುರಿಯಲ್ಲಿ ಭಾರಿ ಪ್ರಮಾಣದ ಭೂಸವೆತ ಉಂಟಾಗಿದೆ. ನೀರನ ರಭಸಕ್ಕೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>