<p><strong>ಬೆಂಗಳೂರು</strong>: ಅಮೂಲ್ನ ಬ್ರ್ಯಾಂಡ್ ಅಂಬಾಸಿಡರ್ ರೀತಿ ಬಸವರಾಜ ಬೊಮ್ಮಾಯಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಟೀಕಿಸಿದೆ.</p>.<p>ಈ ಸಂಬಂಧ ಪ್ರಜಾವಾಣಿ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಮಿತ್ ಶಾ ಬಂದು ಹೋದನಂತರ ಕೆಎಂಎಫ್ ಹಾಲು ಸಂಗ್ರಹಣೆ ಹಾಗೂ ನಂದಿನಿ ಹಾಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡಿರುವುದು ಅನುಮಾನಾಸ್ಪದವಾಗಿದೆ ಎಂದು ಕುಟುಕಿದೆ.</p>.<p>ಮುಖ್ಯಮಂತ್ರಿಗಳೇ ಇದು ವ್ಯವಸ್ಥಿತ ಸಂಚೇ ಅಥವಾ ನಿಮ್ಮ ದುರಾಡಳಿತದಲ್ಲಿ ರೈತರಿಗೆ ಒದಗಿದ ಸಂಕಷ್ಟವೇ? ‘ಹಾಲುಂಡ ತವರಿಗೆ’ ಏಕೆ ದ್ರೋಹ ಮಾಡುವಿರಿ? ಎಂದಿದೆ.</p>.<p>ರಾಜ್ಯದಲ್ಲಿ ನಂದಿನಿ ಹಾಲು ಪೊರೈಕೆಯಲ್ಲಿ ಕುಸಿತ ಕಂಡಿದೆ. ಕೋವಿಡ್ ನಂತರದಲ್ಲಿ ಹೈನುಗಾರಿಕೆ ಕ್ಷೇತ್ರ ಹಾಗೂ ಹಾಲು ಶೇಖರಣೆ ಪ್ರಮಾಣವು ಹೆಚ್ಚಾಗಿತ್ತು.</p>.<p>ಆದರೆ ಇದೀಗ ಸರಾಸರಿ ₹20 ಲಕ್ಷ ಕೆ.ಜಿ ಹಾಲು ಶೇಖರಣೆಯಲ್ಲಿ ಕಡಿಮೆಯಾಗಿದರಿಂದ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. </p>.<p>ಇವನ್ನೂ ಓದಿ: <a href="https://cms.prajavani.net/karnataka-news/pm-narendra-modi-at-bandipur-tiger-reserve-no-tiger-found-1030196.html" itemprop="url">ಬಂಡೀಪುರ ಅರಣ್ಯದಲ್ಲಿ ಮೋದಿ ಸಂಚಾರ; 22 ಕಿ.ಮೀ ಸಫಾರಿ ವೇಳೆ ಕಾಣದ ಹುಲಿರಾಯ </a></p>.<p> <a href="https://cms.prajavani.net/karnataka-elections-nandini-amul-raw-siddaramaiah-hits-against-bjp-pm-narendra-modi-1030208.html" itemprop="url">ಗೋಭಕ್ತಿ ಎಂದರೆ ಗೋಮಾಂಸ ಮಾರಾಟಕ್ಕೆ ಲೈಸನ್ಸ್ ಕೊಡುವುದಲ್ಲ: ಸಿದ್ದರಾಮಯ್ಯ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಮೂಲ್ನ ಬ್ರ್ಯಾಂಡ್ ಅಂಬಾಸಿಡರ್ ರೀತಿ ಬಸವರಾಜ ಬೊಮ್ಮಾಯಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಟೀಕಿಸಿದೆ.</p>.<p>ಈ ಸಂಬಂಧ ಪ್ರಜಾವಾಣಿ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಮಿತ್ ಶಾ ಬಂದು ಹೋದನಂತರ ಕೆಎಂಎಫ್ ಹಾಲು ಸಂಗ್ರಹಣೆ ಹಾಗೂ ನಂದಿನಿ ಹಾಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡಿರುವುದು ಅನುಮಾನಾಸ್ಪದವಾಗಿದೆ ಎಂದು ಕುಟುಕಿದೆ.</p>.<p>ಮುಖ್ಯಮಂತ್ರಿಗಳೇ ಇದು ವ್ಯವಸ್ಥಿತ ಸಂಚೇ ಅಥವಾ ನಿಮ್ಮ ದುರಾಡಳಿತದಲ್ಲಿ ರೈತರಿಗೆ ಒದಗಿದ ಸಂಕಷ್ಟವೇ? ‘ಹಾಲುಂಡ ತವರಿಗೆ’ ಏಕೆ ದ್ರೋಹ ಮಾಡುವಿರಿ? ಎಂದಿದೆ.</p>.<p>ರಾಜ್ಯದಲ್ಲಿ ನಂದಿನಿ ಹಾಲು ಪೊರೈಕೆಯಲ್ಲಿ ಕುಸಿತ ಕಂಡಿದೆ. ಕೋವಿಡ್ ನಂತರದಲ್ಲಿ ಹೈನುಗಾರಿಕೆ ಕ್ಷೇತ್ರ ಹಾಗೂ ಹಾಲು ಶೇಖರಣೆ ಪ್ರಮಾಣವು ಹೆಚ್ಚಾಗಿತ್ತು.</p>.<p>ಆದರೆ ಇದೀಗ ಸರಾಸರಿ ₹20 ಲಕ್ಷ ಕೆ.ಜಿ ಹಾಲು ಶೇಖರಣೆಯಲ್ಲಿ ಕಡಿಮೆಯಾಗಿದರಿಂದ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. </p>.<p>ಇವನ್ನೂ ಓದಿ: <a href="https://cms.prajavani.net/karnataka-news/pm-narendra-modi-at-bandipur-tiger-reserve-no-tiger-found-1030196.html" itemprop="url">ಬಂಡೀಪುರ ಅರಣ್ಯದಲ್ಲಿ ಮೋದಿ ಸಂಚಾರ; 22 ಕಿ.ಮೀ ಸಫಾರಿ ವೇಳೆ ಕಾಣದ ಹುಲಿರಾಯ </a></p>.<p> <a href="https://cms.prajavani.net/karnataka-elections-nandini-amul-raw-siddaramaiah-hits-against-bjp-pm-narendra-modi-1030208.html" itemprop="url">ಗೋಭಕ್ತಿ ಎಂದರೆ ಗೋಮಾಂಸ ಮಾರಾಟಕ್ಕೆ ಲೈಸನ್ಸ್ ಕೊಡುವುದಲ್ಲ: ಸಿದ್ದರಾಮಯ್ಯ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>