‘ಹಿಂದೂ ಧರ್ಮದ ಆಚಾರ್ಯರು, ಗುರುಗಳು ಅನುಸರಿಸುತ್ತಿರುವ ಸಂಪ್ರದಾಯವನ್ನು ರಾಮನ ಪ್ರತಿಷ್ಠಾಪನೆಯ ಪವಿತ್ರ ಕಾರ್ಯದಲ್ಲಿ ಉಲ್ಲಂಘಿಸಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಪ್ರಧಾನಿಯ ಇಚ್ಛೆಯ ಹಿಂದಿನ ಪ್ರಚಾರದ ಉದ್ದೇಶವನ್ನು ನಾಲ್ಕು ಶಂಕರಾಚಾರ್ಯರು ಈಗಾಗಲೇ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಒಡಿಶಾದ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಮತ್ತು ಉತ್ತರಾಖಂಡದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಮೋದಿಯವರು ಪ್ರತಿಷ್ಠಾಪನೆ ಮುಂದಾದರೆ, ಆಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ’ ಎಂದಿದ್ದಾರೆ.